ವೇದಿಕೆಯಲ್ಲೇ ಪತ್ರಕರ್ತನಿಗೆ ವಾರ್ನಿಂಗ್ ಕೊಟ್ಟ ನಟಿ ರುಕ್ಸಾರ್ ದಿಲ್ಲೋನ್ 
ಸಿನಿಮಾ ಸುದ್ದಿ

Video: 'ಆ' ಫೋಟೋ ತೆಗೆದ ಪತ್ರಕರ್ತನಿಗೆ ವೇದಿಯಕೆಯಲ್ಲೇ ಜಾಡಿಸಿದ ನಟಿ; ವಾರ್ನಿಂಗ್ ಕೊಟ್ಟ Rukshar Dhillon!

ನೀವು ಪತ್ರಕರ್ತರು.. ಯಾವಾಗ ಯಾರ ಫೋಟೋಗಳನ್ನು ಬೇಕಾದರೂ ಕ್ಲಿಕ್ಕಿಸಬಹುದು. ಆದರೆ ಓರ್ವ ಮಹಿಳೆ ತನಗೆ ಅನಾನುಕೂಲವಾಗುತ್ತಿದೆ ಎಂದಾಗ ಫೋಟೋ ಕ್ಲಿಕ್ಕಿಸಬಾರದು...

ಹೈದರಾಬಾದ್: ತನ್ನ ದೇಹ ತೋರಿಸುವಂತೆ ಫೋಟೋ ಕ್ಲಿಕ್ಕಿಸುತ್ತಿದ್ದ ಫೋಟೋ ಪತ್ರಕರ್ತನಿಗೆ ನಟಿಯೊಬ್ಬರು ಜಾಡಿಸಿ ಎಚ್ಚರಿಕೆ ಕೊಟ್ಟ ಘಟನೆ ನಡೆದಿದೆ.

ತೆಲುಗಿನ ನಟ ಕಿರಣ್ ಅಬ್ಬವರಂ ನಟನೆಯ ದಿಲ್ರುಬಾ ಚಿತ್ರದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಚಿತ್ರದಲ್ಲಿ ನಟಿಸಿರುವ ನಟಿ ರುಕ್ಷಾರ್ ಡಿಲ್ಲಾನ್ ವೇದಿಕೆಯಲ್ಲೇ ತಮ್ಮ ಫೋಟೋಗಳನ್ನು ತೆಗೆದ ಪತ್ರಕರ್ತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ನೀವು ಪತ್ರಕರ್ತರು.. ಯಾವಾಗ ಯಾರ ಫೋಟೋಗಳನ್ನು ಬೇಕಾದರೂ ಕ್ಲಿಕ್ಕಿಸಬಹುದು. ಆದರೆ ಓರ್ವ ಮಹಿಳೆ ತನಗೆ ಅನಾನುಕೂಲವಾಗುತ್ತಿದೆ ಎಂದಾಗ ಫೋಟೋ ಕ್ಲಿಕ್ಕಿಸಬಾರದು. ಅದೂ ಕೂಡ ತಾನು ಮನವಿ ಮಾಡಿದ ಬಳಿಕವೂ ಫೋಟೋ ಕ್ಲಿಕ್ಕಿಸಿದ್ದು ತಪ್ಪು.

ನಾನು ಆಗಲೇ ಈ ಬಗ್ಗೆ ಮಾತನಾಡಬೇಕೋ-ಬೇಡವೋ ಎಂದು ಯೋಚಿಸುತ್ತಿದ್ದೆ. ಆದರೆ ಈಗಲೂ ಸುಮ್ಮನಿದ್ದರೆ ಸರಿಯಲ್ಲ ಎಂದು ಈಗ ಮಾತನಾಡುತ್ತಿದ್ದೇನೆ. ನನ್ನ ನಡೆಯಿಂದ ಚಿಕ್ರಕ್ಕೆ ತೊಂದರೆಯಾಗಬಾರದು ಎಂದು ಸುಮ್ಮನಿದ್ದೆ. ಆದರೆ ಅವರ ವರ್ತನೆ ನನ್ನ ಸಹನೆಯ ಕಟ್ಟೆಯೊಡುವಂತೆ ಮಾಡಿದೆ. ಹೀಗಾಗಿ ತುಂಬಾ ಶಾಂತರೀತಿಯಲ್ಲೇ ಹೇಳುತ್ತಿದ್ದೇನೆ ಎಂದು ನಟಿ ರುಕ್ಷಾರ್ ಡಿಲ್ಲಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ನಟಿ ರುಕ್ಷಾರ್ ಡಿಲ್ಲೋನ್ ವೇದಿಕೆಯಲ್ಲಿ ತಮ್ಮ ಡ್ರೆಸ್ ಸರಿಪಡಿಸಿಕೊಳ್ಳುವ ವೇಳೆ ಪತ್ರಕರ್ತ ಆಕೆಯ ಫೋಟೋಗಳನ್ನು ಕ್ಲಿಕ್ಕಿಸಿದ್ದಾನೆ ಎಂದು ನಟಿ ರುಕ್ಷಾರ್ ಡಿಲ್ಲಾನ್ ಚಿತ್ರತಂಡದ ಜೊತೆ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವೇದಿಕೆಯಲ್ಲಿ ನಟಿ ಫೋಟೋ ಕ್ಲಿಕ್ಕಿಸಿದ ವ್ಯಕ್ತಿಯ ಹೆಸರು ಹೇಳಿಲ್ಲವಾದರೂ ಆ ವ್ಯಕ್ತಿಗೆ ಅರ್ಥವಾಗಿದೆ ಎನ್ನುವ ಅರ್ಥದಲ್ಲಿ ಕಿಡಿಕಾರಿದ್ದಾರೆ.

ಇನ್ನು ಸಸ್ಪೆನ್ಸ್ ಥ್ರಿಲ್ಲರ್ ಕಾ ಚಿತ್ರದ ಬಳಿಕ ನಟ ಕಿರಣ್ ಅಬ್ಬವರಂ ಇದೀಗ ರೋಮ್ಯಾಂಟಿಕ್ ಆಕ್ಷನ್ ಎಂಟರ್ಟೈನರ್ ದಿಲ್ರೂಬಾ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಟಿ ರುಕ್ಸರ್ ಧಿಲ್ಲೋನ್ ಮತ್ತು ಕ್ಯಾಥಿ ಡೇವಿಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಡುಕಳಂ ನರೇನ್, ತುಳಸಿ, ಸತ್ಯ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ವಿಶ್ವ ಕರುಣ್ ನಿರ್ದೇಶಿಸಿದ್ದು, ಸ್ಯಾಮ್ ಸಿಎಸ್ ಅವರ ಸಂಗೀತ ಚಿತ್ರಕ್ಕಿದೆ.

ಮಾರ್ಚ್ 14 ರಂದು ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT