ಮಾತೊಂದ ಹೇಳುವೆ ಚಿತ್ರದ ಸ್ಟಿಲ್ - ಮಯೂರ್ ಕಡಿ 
ಸಿನಿಮಾ ಸುದ್ದಿ

RJ ಮಯೂರ್ ಕಡಿ ನಿರ್ದೇಶಿಸಿ, ನಟಿಸಿರುವ 'ಮಾತೊಂದ ಹೇಳುವೆ' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ

ಚಿತ್ರದಲ್ಲಿ ಮಯೂರ್ ಕಡಿ ಜೊತೆಗೆ ಅಪೂರ್ವ ಆರಾಧ್ಯ, ಗಿರೀಶ್ ಶಿವಣ್ಣ, ಪಿಡಿ ಸತೀಶ್ ಚಂದ್ರ, ಪ್ರತೀಕ್ ರಡ್ಡರ್, ಚೇತನ್ ಮರಂಬೀದ್, ವಿದ್ಯಾಸಾಗರ್ ದೀಕ್ಷಿತ್, ಪ್ರತೀಕ್, ಕಾರ್ತಿಕ್ ಪತ್ತಾರ್, ಸುನೀಲ್ ಪತ್ರಿ ಮತ್ತು ಜ್ಯೋತಿ ಪುರಾಣಿಕ್ ಸೇರಿದಂತೆ ಹಲವರು ನಟಿಸಿದ್ದಾರೆ.

ಖ್ಯಾತ ರೇಡಿಯೋ ಜಾಕಿ ಮಯೂರ್ ಕಡಿ ಅವರ ಚೊಚ್ಚಲ ನಿರ್ದೇಶನದ ಚಿತ್ರ 'ಮಾತೊಂದ ಹೇಳುವೆ' ಚಿತ್ರ ಜೂನ್ 13ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಮಯೂರ್ ಅವರೇ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. RJ ಆಗಿದ್ದ ಮಯೂರ್ ಚಿತ್ರವನ್ನು ನಿರ್ದೇಶಿಸಿರುವುದು ಇದೀಗ ತೀವ್ರ ಕುತೂಹಲ ಕೆರಳಿಸಿದೆ.

ಉತ್ತರ ಕರ್ನಾಟಕ ಮೂಲದ ರೇಡಿಯೋ ಜಾಕಿ ಮತ್ತು ಮೈಸೂರಿನಿಂದ ಧಾರವಾಡಕ್ಕೆ ಪ್ರಯಾಣಿಸುವ ಯುವತಿಯೊಬ್ಬರ ಪ್ರಯಾಣದ ಕಥೆಯನ್ನು ಮಾತೊಂದ ಹೇಳುವೆ ಚಿತ್ರ ತೆರೆ ಮೇಲೆ ತರುತ್ತದೆ. ಆಕಸ್ಮಿಕ ಭೇಟಿಯಾಗಿ ಪ್ರಾರಂಭವಾಗುವ ಕಥೆಯು ಹೃದಯಸ್ಪರ್ಶಿ ಕಥೆಯಾಗಿ ತೆರೆದುಕೊಳ್ಳುತ್ತದೆ. ಸಾಂಸ್ಕೃತಿಕ ಸೂಕ್ಷ್ಮ ವ್ಯತ್ಯಾಸಗಳು ಮತ್ತು ಭಾವನಾತ್ಮಕ ಆಳದೊಂದಿಗೆ ಎಲ್ಲ ವಯಸ್ಸಿನ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುತ್ತದೆ.

ಚಿತ್ರದಲ್ಲಿ ಮಯೂರ್ ಕಡಿ ಜೊತೆಗೆ ಅಪೂರ್ವ ಆರಾಧ್ಯ, ಗಿರೀಶ್ ಶಿವಣ್ಣ, ಪಿಡಿ ಸತೀಶ್ ಚಂದ್ರ, ಪ್ರತೀಕ್ ರಡ್ಡರ್, ಚೇತನ್ ಮರಂಬೀದ್, ವಿದ್ಯಾಸಾಗರ್ ದೀಕ್ಷಿತ್, ಪ್ರತೀಕ್, ಕಾರ್ತಿಕ್ ಪತ್ತಾರ್, ಸುನೀಲ್ ಪತ್ರಿ ಮತ್ತು ಜ್ಯೋತಿ ಪುರಾಣಿಕ್ ಸೇರಿದಂತೆ ಹಲವರು ನಟಿಸಿದ್ದಾರೆ.

ಮಹೇಶ್ವರ ಮೋಷನ್ ಪಿಕ್ಚರ್ಸ್ ಬೆಂಬಲದೊಂದಿಗೆ ಮತ್ತು ಪ್ರಭು ಸವಣೂರ್ ಮತ್ತು ಅವಿನಾಶ್ ಯುಎಸ್ ಸಹ-ನಿರ್ಮಿಸಿದ ಮಾತೊಂದ ಹೇಳುವೆ ಚಿತ್ರಕ್ಕೆ ಪರ್ವತೇಶ್ ಪೋಲ್ ಅವರ ಛಾಯಾಗ್ರಹಣ, ಉಲ್ಲಾಸ್ ಕುಲಕರ್ಣಿ ಅವರ ಸಂಗೀತ, ಅಭಯ್ ಕಡಿ ಅವರ ಸಂಕಲನ ಮತ್ತು ಪ್ರಸನ್ನ ಕುಮಾರ್ ಎಂಎಸ್ ಅವರ ಹಿನ್ನೆಲೆ ಸಂಗೀತವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್