ಶ್ರೀರಾಜ್ ಮತ್ತು ಪುಷ್ಪಾ ಅರುಣ್ ಕುಮಾರ್ 
ಸಿನಿಮಾ ಸುದ್ದಿ

ಕೊತ್ತಲವಾಡಿ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಹೊಸ ಚಿತ್ರ ಘೋಷಣೆ; ಮತ್ತೊಮ್ಮೆ ಶ್ರೀರಾಜ್ ಆ್ಯಕ್ಷನ್ ಕಟ್!

ಗಲ್ಲಾಪೆಟ್ಟಿಗೆಯಲ್ಲಿ ಸರಾಸರಿ ಗಳಿಕೆ ಕಂಡಿದ್ದ ಪೃಥ್ವಿ ಅಂಬಾರ್ ಮತ್ತು ಕಾವ್ಯಾ ಶೈವ ಅಭಿನಯದ ಕೊತ್ತಲವಾಡಿ ಇದೀಗ ಡಿಜಿಟಲ್ ವೇದಿಕೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ.

ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕೊತ್ತಲವಾಡಿ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್, ವಿಜಯದಶಮಿಯ ಶುಭ ಸಂದರ್ಭದಲ್ಲಿ ತಮ್ಮ ಮುಂದಿನ ಯೋಜನೆಯನ್ನು ಘೋಷಿಸಿದ್ದಾರೆ.

ಕೊತ್ತಲವಾಡಿ ನಿರ್ದೇಶಕ ಶ್ರೀರಾಜ್ ಅವರೊಂದಿಗೆ ಮತ್ತೆ ಹೊಸ ಚಿತ್ರದಲ್ಲಿ ಸಹಯೋಗ ಮಾಡಲಿದ್ದಾರೆ. ಕೊತ್ತಲವಾಡಿ ಚಿತ್ರದ ಹೆಚ್ಚಿನ ತಾಂತ್ರಿಕ ತಂಡವೇ ಹೊಸ ಚಿತ್ರದಲ್ಲಿಯೂ ಕೆಲಸ ಮಾಡಲಿದೆ. ಶೀಘ್ರದಲ್ಲೇ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಚಿತ್ರತಂಡ ಯೋಜಿಸಿದೆ.

ಈ ಹಿಂದೆ, ನಿರ್ಮಾಪಕರು 'ಗುರು ಶಿಷ್ಯರು' ಖ್ಯಾತಿಯ ನಟ ಶರಣ್ ಅವರೊಂದಿಗೆ ಚಿತ್ರ ಮಾಡುವುದಾಗಿ ಹೇಳಿದ್ದರು. ಇದೀಗ ಹೊಸ ಚಿತ್ರವು ಅವರೊಂದಿಗೆ ಇರುತ್ತದೆಯೇ ಅಥವಾ ಬೇರೆ ಚಿತ್ರವೇ ಎಂಬುದು ಸ್ಪಷ್ಟವಾಗಿಲ್ಲ.

ಈಮಧ್ಯೆ, ಗಲ್ಲಾಪೆಟ್ಟಿಗೆಯಲ್ಲಿ ಸರಾಸರಿ ಗಳಿಕೆ ಕಂಡಿದ್ದ ಪೃಥ್ವಿ ಅಂಬಾರ್ ಮತ್ತು ಕಾವ್ಯಾ ಶೈವ ಅಭಿನಯದ ಕೊತ್ತಲವಾಡಿ ಇದೀಗ ಡಿಜಿಟಲ್ ವೇದಿಕೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Operation Sindoor: ಪಾಕಿಸ್ತಾನದ ಐದು ಹೈಟೆಕ್ ಫೈಟರ್‌, ಎಫ್-16, ಜೆಎಫ್-17, ಅನೇಕ ಜೆಟ್‌ಗಳು ನಾಶ- IAF ಮುಖ್ಯಸ್ಥ; Video

ಪ್ರಧಾನಿ ಮೋದಿ 'ಆಧುನಿಕ ರಾವಣ: ಶೀಘ್ರವೇ ಅವರ ಚಿನ್ನದ ಅರಮನೆ ಸುಟ್ಟು ಬೂದಿಯಾಗಲಿದೆ; ಉದಿತ್ ರಾಜ್

Karrala Samaram: ದುರಂತವಾಗಿ ಮಾರ್ಪಟ್ಟ 'ದೇವರ ಉತ್ಸವ': ದೊಣ್ಣೆ ಕಾಳಗದಲ್ಲಿ ಕನಿಷ್ಠ 4 ಸಾವು, 100ಕ್ಕೂ ಅಧಿಕ ಮಂದಿಗೆ ಗಾಯ!

MM Hills ನಲ್ಲಿ ಮತ್ತೆ ಹುಲಿ ಬೇಟೆ; ಹುಲಿಯ ಅರ್ಧ ಮೃತದೇಹ ಪತ್ತೆ!

"ಅಪರಿಚಿತರು ನನ್ನ ಮಗಳ ನಗ್ನ ಫೋಟೋಗಳನ್ನು ಕೇಳಿದ್ದರು, ಆಕೆ...." ಸೈಬರ್ ಅಪರಾಧದ ಬಗ್ಗೆ ನಟ Akshay Kumar ತೀವ್ರ ಕಳವಳ

SCROLL FOR NEXT