ರಾಕಾ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಫಸ್ಟ್ ಲುಕ್ 
ಸಿನಿಮಾ ಸುದ್ದಿ

ಪುಷ್ಪ ಬಳಿಕ 'ರಾಕಾ' ಆದ ಅಲ್ಲು ಅರ್ಜುನ್; ಡೆವಿಲ್ ಅವತಾರದಲ್ಲಿ ಸ್ಟೈಲಿಷ್ ಸ್ಟಾರ್ ಫಸ್ಟ್ ಲುಕ್ ಪೋಸ್ಟರ್ ರಿಲೀಸ್!

ಚಿತ್ರತಂಡ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಒಂಬತ್ತು ವಿಭಿನ್ನ ಭಾಷೆಗಳಲ್ಲಿ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಮೂಲಕ ಪ್ಯಾನ್-ಇಂಡಿಯಾ ಚಿತ್ರ ಎಂದ ಸುಳಿವು ನೀಡಿದೆ.

ಅಲ್ಲು ಅರ್ಜುನ್ ಮತ್ತು ಅಟ್ಲೀ ಸಹಯೋಗದ, ತಾತ್ಕಾಲಿಕವಾಗಿ AA22xA6 ಎಂದು ಹೆಸರಿಡಲಾಗಿರುವ ಹೊಸ ಚಿತ್ರಕ್ಕೆ 'ರಾಕಾ' ಎಂದು ಹೆಸರಿಡಲಾಗಿದೆ. ಬುಧವಾರ, ಅಲ್ಲು ಅರ್ಜುನ್ ತಮ್ಮ 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಚಿತ್ರದ ಫಸ್ಟ್-ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಕುತೂಹಲಕಾರಿಯಾಗಿ, ಚಿತ್ರತಂಡ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಒಂಬತ್ತು ವಿಭಿನ್ನ ಭಾಷೆಗಳಲ್ಲಿ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಮೂಲಕ ಪ್ಯಾನ್-ಇಂಡಿಯಾ ಚಿತ್ರ ಎಂದ ಸುಳಿವು ನೀಡಿದೆ.

ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 'ಮಿತಿಗಳನ್ನು ಮೀರಿದ ದೃಷ್ಟಿಕೋನಕ್ಕೆ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ' ಎಂದು ಶೀರ್ಷಿಕೆ ನೀಡಲಾಗಿದೆ.

ಸನ್ ಪಿಕ್ಚರ್ಸ್ ನಿರ್ಮಾಣದ ಈ ಸೈನ್ಸ್ ಫಿಕ್ಷನ್ ಆ್ಯಕ್ಷನ್ ಚಿತ್ರವನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ ಅಲ್ಲು ಅರ್ಜುನ್ ಅವರ 43ನೇ ಹುಟ್ಟುಹಬ್ಬದಂದು ಅಧಿಕೃತವಾಗಿ ಘೋಷಿಸಲಾಯಿತು. ಇದು ನಟ ಮತ್ತು ನಿರ್ದೇಶಕ ಅಟ್ಲೀ ನಡುವಿನ ಮೊದಲ ಸಹಯೋಗವಾಗಿದೆ.

ರಾಕಾದಲ್ಲಿ ಅಲ್ಲು ಅರ್ಜುನ್ ನಾಲ್ಕು ವಿಭಿನ್ನ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಅವರು ಅಜ್ಜ, ತಂದೆ ಮತ್ತು ಇಬ್ಬರು ಮಕ್ಕಳಾಗಿ ನಟಿಸಲಿದ್ದಾರೆ ಎಂದು ಮೂಲಗಳು ಸೂಚಿಸಿವೆ. ಕಥೆಯು ಎರಡು ಸಮಾನಾಂತರ ಸಮಯದಲ್ಲಿ ನಡೆಯುತ್ತದೆ ಎಂಬ ವದಂತಿಯೂ ಇದೆ. ಆದಾಗ್ಯೂ, ಈ ಬಗ್ಗೆ ಯಾವುದೇ ವಿವರಗಳನ್ನು ಚಿತ್ರತಂಡ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ ಇದು ಅವರ ಮೊದಲ ಚಿತ್ರವಾಗಿರಲಿದೆ.

ಪಿಂಕ್‌ವಿಲ್ಲಾ ಪ್ರಕಾರ, ಅಲ್ಲು ಅರ್ಜುನ್ 'ರಾಕಾ' ಚಿತ್ರಕ್ಕಾಗಿ ಸುಮಾರು ₹175 ಕೋಟಿ ಗಳಿಸುವ ನಿರೀಕ್ಷೆಯಿದೆ. ಜೊತೆಗೆ ಲಾಭದಲ್ಲಿ ಶೇ 15 ರಷ್ಟು ಪಾಲನ್ನು ನೀಡುವ ಬ್ಯಾಕೆಂಡ್ ಒಪ್ಪಂದವೂ ಇದೆ. ಮತ್ತೊಂದೆಡೆ, ಅಟ್ಲೀ ಈ ಚಿತ್ರಕ್ಕೆ ₹100 ಕೋಟಿ ಶುಲ್ಕ ವಿಧಿಸಲಿದ್ದಾರೆ ಎನ್ನಲಾಗಿದೆ. ವರದಿ ಪ್ರಕಾರ, ಚಿತ್ರದ ಒಟ್ಟಾರೆ ಬಜೆಟ್ ₹800 ಕೋಟಿ ಆಗಿದ್ದು, ನಿರ್ಮಾಣಕ್ಕೆ ಸುಮಾರು ₹200 ಕೋಟಿ ಮತ್ತು VFX ಗೆ ₹250 ಕೋಟಿ ನಿಗದಿಪಡಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್