ನಟಧನುಷ್ ಹಾಗೂ ನಟಿ ಮೃಣಾಲ್ ಠಾಕೂರ್ 
ಸಿನಿಮಾ ಸುದ್ದಿ

ಧನುಷ್ ಜೊತೆ ಲವ್ವಿ ಡವ್ವಿ: ಅವರು ನನಗೆ ಸಹೋದರನಂತೆ ಅಷ್ಟೇ..; ಊಹಾಪೋಹಗಳಿಗೆ ನಟಿ ಮೃಣಾಲ್ ಠಾಕೂರ್ ತೆರೆ

ನನ್ನನ್ನು ನನ್ನ ಕೆಲಸವೇ ಪರಿಚಯಿಸಬೇಕು ಎಂಬ ನಂಬಿಕೆ ನನಗಿದೆ. ಆದರೆ ನಾನು ಆಡದ ಮಾತು, ತೆಗೆದುಕೊಳ್ಳದ ನಿರ್ಧಾರ ಹಾಗೂ ಬರೆಯದ ಕಥೆಗಳೊಂದಿಗೆ ನನ್ನ ಹೆಸರನ್ನು ಜೋಡಿಸಲಾಗುತ್ತಿದೆ.

ಮುಂಬೈ: ತಮಿಳು ನಟ ಧನುಷ್ ಜೊತೆ ಪ್ರೀತಿಯಲ್ಲಿದ್ದಾರೆ, ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ, ವಿವಾಹವಾಗುತ್ತಿದ್ದಾರೆಂಬ ಊಹಾಪೋಹಗಳಿಗೆ ನಟಿ ಮೃಣಾಲ್ ಠಾಕೂರ್ ಅವರು ತೆರೆ ಎಳೆದಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ನಟಿ, ನನ್ನನ್ನು ನನ್ನ ಕೆಲಸವೇ ಪರಿಚಯಿಸಬೇಕು ಎಂಬ ನಂಬಿಕೆ ನನಗಿದೆ. ಆದರೆ ನಾನು ಆಡದ ಮಾತು, ತೆಗೆದುಕೊಳ್ಳದ ನಿರ್ಧಾರ ಹಾಗೂ ಬರೆಯದ ಕಥೆಗಳೊಂದಿಗೆ ನನ್ನ ಹೆಸರನ್ನು ಜೋಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಧನುಷ್ ನನಗೆ ಸಹೋದರನಂತೆಯೇ. ನಮ್ಮ ನಡುವೆ ಇರುವುದೇ ಪರಸ್ಪರ ಗೌರವ ಮತ್ತು ವೃತ್ತಿಪರ ಸಂಬಂಧ - ಅದಕ್ಕಿಂತ ಹೆಚ್ಚಿನದೇನೂ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಮಹಿಳೆಯರ ಸಾಧನೆಗಳನ್ನು ಗುರುತಿಸುವ ಬದಲು ಅವರ ವೈಯಕ್ತಿಕ ಜೀವನದ ಬಗ್ಗೆ ಸುಳ್ಳು ಕಥೆಗಳು ಸೃಷ್ಟಿಯಾಗುತ್ತಿರುವುದು ದುಃಖಕರ ವಿಚಾರ. ನಾನು ಮೌನವಾಗಿರುವುದರ ಅರ್ಥ ಏನು ಮುಚ್ಚಿಡುತ್ತದ್ದೇನೆಂದಲ್ಲ. ನನ್ನ ವೈಯಕ್ತಿಕ ಜೀವನಕ್ಕೆ ಸಾರ್ವಜನಿಕ ಅನುಮೋದನೆ ಅಗತ್ಯವಿಲ್ಲವೆಂಬುದು ನನ್ನ ನಂಬಿಕೆ ಎಂದು ತಿಳಿಸಿದ್ದಾರೆ.

ಆಡಿಷನ್, ತಿರಸ್ಕಾರ, ಅನೇಕ ನಿದ್ರೆರಹಿತ ರಾತ್ರಿಗಳು ಹಾಗೂ ಆತ್ಮವಿಶ್ವಾಸದ ಮೂಲಕ ನಾನು ಈ ಹಂತಕ್ಕೆ ಬಂದಿದ್ದೇನೆ. ಆ ಪ್ರಯಾಣವನ್ನು ಊಹಾಪೋಹಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ. ಸಾಮಾಜಿಕ ಜಾಲತಾಣಗಳು ಎಲ್ಲರಿಗೂ ಧ್ವನಿ ನೀಡುತ್ತವೆ, ಆದರೆ, ಅದರೊಂದಿಗೆ ಜವಾಬ್ದಾರಿಯೂ ಅಗತ್ಯ. ಕೆಲವು ಲೈಕ್‌ಗಳು ಮತ್ತು ಶೇರ್‌ಗಳು ಜನರ ಬದುಕಿನ ಮೇಲೆ ಪರಿಣಾಮ ಬೀರುವ ಕಥೆಗಳನ್ನು ರೂಪಿಸುತ್ತವೆ. ಪ್ರಸ್ತುತ ಹರಡುತ್ತಿರುವ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran-Israel war: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಮಧ್ಯೆ ಭಾರತಕ್ಕೆ 'ಕಚ್ಚಾ ತೈಲ, LNG ಸರಬರಾಜು ಹೆಚ್ಚಿಸಲು ಸಿದ್ಧ': ರಷ್ಯಾ

ಕೊಡಗು: ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ಹೋಗಿದ್ದ ಕೇರಳ ಮೂಲದ ಮಹಿಳೆ ನಾಪತ್ತೆ!

ಕೇಂದ್ರನ ಓಲೈಸೋದು ಬಿಟ್ಟು ಬಾಯಿ ಮುಚ್ಚಿಕೊಂಡಿರಿ: ಸಚಿವ ಮುನಿಯಪ್ಪ ವಿರುದ್ಧ KPCC ವಕ್ತಾರ ಲಕ್ಷ್ಮಣ್​​ ಗರಂ!

Covid is Back: Cicada ರೂಪಾಂತರಿ ವೈರಾಣುವಿಗೆ ಮಕ್ಕಳು ಸಿಲುಕದಂತೆ ಎಚ್ಚರ ವಹಿಸಿ! ನೀವು ತಿಳಿಯಬೇಕಾದ ಅಂಶಗಳಿವು...

ತಪ್ಪಿನ ಅರಿವಾಗಿದೆ, ಸರಿಪಡಿಸಿಕೊಳ್ಳೋಣ: ಮುಸ್ತಾಫಿಜುರ್ ವಿವಾದದ ನಂತರ ಬಗ್ಗಿದ ಬಾಂಗ್ಲಾದೇಶ, BCCI ಗೆ ಬೇಡಿಕೊಂಡ BCB

SCROLL FOR NEXT