ಜ್ಯೋತಿಕಾ - ಸೂರ್ಯ 
ಸಿನಿಮಾ ಸುದ್ದಿ

'ಆಕೆಯೊಂದಿಗೆ ಮಾತ್ರ ಬದುಕುತ್ತೇನೆ; ಇಲ್ಲದಿದ್ದರೆ...': ಮಗ ಸೂರ್ಯ-ಜ್ಯೋತಿಕಾ ನಡುವಿನ ಸಂಬಂಧ ವಿರೋಧಿಸಿದ್ದೆ ಎಂದ ಶಿವಕುಮಾರ್

ಸೂರ್ಯ ಮತ್ತು ಜ್ಯೋತಿಕಾ ಪೂವೆಲ್ಲಾಂ ಕಟ್ಟುಪ್ಪಾರ್ ಚಿತ್ರದಲ್ಲಿ ಕೆಲಸ ಮಾಡುವಾಗ ಭೇಟಿಯಾದರು. ಅವರ ವೃತ್ತಿಪರ ಒಡನಾಟ ಕ್ರಮೇಣ ಸಂಬಂಧವಾಗಿ ಬದಲಾಯಿತು. ಈ ಜೋಡಿ 2006 ರಲ್ಲಿ ವಿವಾಹವಾದರು.

ನವದೆಹಲಿ: ಹಿರಿಯ ನಟ ಶಿವಕುಮಾರ್ ತಮ್ಮ ಮಗ ಸೂರ್ಯ ಮತ್ತು ಜ್ಯೋತಿಕಾ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು, ಆರಂಭದಲ್ಲಿ ಅವರ ಪ್ರೇಮಕಥೆಯನ್ನು ವಿರೋಧಿಸಿದ್ದಾಗಿ ಬಹಿರಂಗಪಡಿಸಿದ್ದಾರೆ.

ಗಲಾಟ್ಟಾ ಜೊತೆಗಿನ ಇತ್ತೀಚಿನ ಸಂವಾದದಲ್ಲಿ ಶಿವಕುಮಾರ್, ಸೂರ್ಯ ಅವರ ಸಂಬಂಧವನ್ನು ನಾನು ಮೊದಲಿಗೆ ಒಪ್ಪಿರಲಿಲ್ಲ. ಆದಾಗ್ಯೂ, ನಟ ತಮ್ಮ ನಿರ್ಧಾರಕ್ಕೆ ದೃಢವಾಗಿ ನಿಂತಿದ್ದರು.

'ಆರಂಭದಲ್ಲಿ ನಾನು ಅವನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ. ಆದರೆ, ಅವನು ತುಂಬಾ ಅಚಲನಾಗಿದ್ದನು ಮತ್ತು ಆಕೆಯೊಂದಿಗೆ ಮಾತ್ರ ಬದುಕುತ್ತೇನೆ; ಇಲ್ಲದಿದ್ದರೆ, ನಾನು ಜೀವನಪರ್ಯಂತ ಒಂಟಿಯಾಗಿಯೇ ಇರುತ್ತೇನೆ ಎಂದು ಹೇಳಿದನು. ನಂತರ ನನ್ನ ವೃತ್ತಿಜೀವನದ ಅವಧಿಯಲ್ಲಿ, ನಾನು ಸುಮಾರು 150 ಚಿತ್ರಗಳಲ್ಲಿ ಹೇಗೆ ನಟಿಸಿದೆ ಎಂದು ಯೋಚಿಸಿದೆ ಮತ್ತು ಅವುಗಳಲ್ಲಿ ಹೆಚ್ಚಿನವು ಪ್ರೇಮ ವಿವಾಹಗಳ ಪರಿಕಲ್ಪನೆಯನ್ನು ಹೊಂದಿದ್ದವು. ಹಾಗಾಗಿ ನಾನು ಅಂತಿಮವಾಗಿ ಒಪ್ಪಿಕೊಂಡೆ' ಎಂದಿದ್ದಾರೆ.

ಆ ಹಂತದಲ್ಲಿ ಸೂರ್ಯ ಅವರ ವ್ಯಕ್ತಿತ್ವದ ಬಗ್ಗೆಯೂ ಮಾತನಾಡಿದ ಶಿವಕುಮಾರ್, ಸೂರ್ಯ ನಾಚಿಕೆ ಸ್ವಭಾವದ ವ್ಯಕ್ತಿ. ಜ್ಯೋತಿಕಾ ಜೊತೆ ಸಂಭಾಷಣೆಯನ್ನು ಪ್ರಾರಂಭಿಸಲು ಸೂರ್ಯನನ್ನು ಪ್ರೋತ್ಸಾಹಿಸಿದ್ದು ನಟಿ ರಾಧಿಕಾ ಶರತ್‌ಕುಮಾರ್. ಅದು ಅಂತಿಮವಾಗಿ ಸಂಬಂಧವಾಗಿ ಅರಳಿತು ಎಂದರು.

'ಆಗ ಸೂರ್ಯ ಸಾಮಾನ್ಯವಾಗಿ ಒಂಟಿಯಾಗಿಯೇ ಇರುತ್ತಿದ್ದರು ಮತ್ತು ಆದರೆ, ಈಗ ಆತ ಇಬ್ಬರು ಮಕ್ಕಳ ತಂದೆ' ಎಂದು ಮಾಜಿ ನಟ ಹೇಳಿದರು.

ಸೂರ್ಯ ಮತ್ತು ಜ್ಯೋತಿಕಾ ಪೂವೆಲ್ಲಾಂ ಕಟ್ಟುಪ್ಪಾರ್ ಚಿತ್ರದಲ್ಲಿ ಕೆಲಸ ಮಾಡುವಾಗ ಭೇಟಿಯಾದರು. ಅವರ ವೃತ್ತಿಪರ ಒಡನಾಟ ಕ್ರಮೇಣ ಸಂಬಂಧವಾಗಿ ಬದಲಾಯಿತು. ಈ ಜೋಡಿ 2006 ರಲ್ಲಿ ವಿವಾಹವಾದರು ಮತ್ತು ನಂತರ ದಂಪತಿಗೆ ಇಬ್ಬರು ಮಕ್ಕಳು ಜನಿಸಿದರು. ಮಗಳು ದಿಯಾ ಮತ್ತು ಮಗ ದೇವ್.

ಸೂರ್ಯ ಆರ್‌ಜೆ ಬಾಲಾಜಿ ನಿರ್ದೇಶನದ ಮತ್ತು ತ್ರಿಶಾ ಕೃಷ್ಣನ್ ನಟಿಸಿರುವ ಫ್ಯಾಂಟಸಿ ಆ್ಯಕ್ಷನ್ ಚಿತ್ರ ಕರುಪ್ಪುದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಈ ಬೇಸಿಗೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಅಲ್ಲದೆ, ಜಿತು ಮಾಧವನ್ ನಿರ್ದೇಶನದ 'ಸೂರ್ಯ47' ಎಂಬ ಪೊಲೀಸ್ ಆ್ಯಕ್ಷನ್-ಕಾಮಿಡಿ ಚಿತ್ರದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯಲ್ಲಿ ನಜ್ರಿಯಾ ನಜೀಮ್ ಫಹಾದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 ವಿಶ್ವಕಪ್ 2026: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ?, ಕೊಲಂಬೋದಲ್ಲಿ ಶೇ.94ರಷ್ಟು ವರ್ಷಧಾರೆ ಸಾಧ್ಯತೆ!

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ: 6 ದಿನಗಳ ನಂತರ ಶವ ಪತ್ತೆ

2026ರ ಮೊದಲ ಸೂರ್ಯಗ್ರಹಣ: ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು? ಇಲ್ಲಿದೆ ವಿವರ

'37,000 ಕೋಟಿ ರೂ. ಬಾಕಿ ಪಾವತಿ ಮಾಡ್ತೀರೋ ಇಲ್ವೋ?': ರಾಜ್ಯ ಸರ್ಕಾರಕ್ಕೆ ಕರ್ನಾಟಕ ಗುತ್ತಿಗೆದಾರ ಪ್ರತಿಭಟನೆ ಎಚ್ಚರಿಕೆ!

ಬೆಂಗಳೂರಿನ ಡಬಲ್ ಡೆಕ್ಕರ್ ಯೋಜನೆ ಬಗ್ಗೆ ಕೇಂದ್ರ ಕಳವಳ!

SCROLL FOR NEXT