ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ  
ಸಿನಿಮಾ ಸುದ್ದಿ

ಮದುವೆ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ದಂಪತಿ!

ರಶ್ಮಿಕಾ ಕೆಂಪು ಚೂಡಿದಾರ್ ಧರಿಸಿದ್ದರೆ, ವಿಜಯ್ ದೇವರಕೊಂಡ ತಿಳಿ ನೀಲಿ ಕುರ್ತಾ-ಪೈಜಾಮಾದಲ್ಲಿದ್ದರು. ಒಟ್ಟಿಗೆ ಕೈಹಿಡಿದು ನಡೆದ ದಂಪತಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ವಿ

ಉದಯಪುರ: ರಾಜಸ್ಥಾನದ ಉದಯಪುರದಲ್ಲಿ ನಿನ್ನೆ ನಡೆದ ವಿವಾಹ ಮಹೋತ್ಸವದ ನಂತರ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ನವವಿವಾಹಿತ ದಂಪತಿ ಉದಯಪುರದ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಪರಸ್ಪರ ಕೈಹಿಡಿದು ನಡೆದಿದ್ದಾರೆ. ಈ ಜೋಡಿಯ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ರಶ್ಮಿಕಾ ಕೆಂಪು ಚೂಡಿದಾರ್ ಧರಿಸಿದ್ದರೆ, ವಿಜಯ್ ದೇವರಕೊಂಡ ತಿಳಿ ನೀಲಿ ಕುರ್ತಾ-ಪೈಜಾಮಾದಲ್ಲಿದ್ದರು. ಒಟ್ಟಿಗೆ ಕೈಹಿಡಿದು ನಡೆದ ದಂಪತಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಹೋಗುವ ಮೊದಲು ಛಾಯಾಗ್ರಾಹಕರು ಮತ್ತು ಅಭಿಮಾನಿಗಳಿಗೆ ಕೈ ಬೀಸಿದ್ದು, ಪ್ಲೇಯಿಂಗ್ ಕಿಸ್ ಮಾಡುವುದು ವಿಡಿಯೋದಲ್ಲಿದೆ.

ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್ ನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರಷ್ಟೇ ಭಾಗವಹಿಸಿದ್ದರು. ಮೊದಲು ತೆಲುಗಿನ ಆಂಧ್ರ ಸಂಪ್ರದಾಯದಂತೆ, ತದನಂತರ ಕೊಡವ ಪದ್ದತಿಯಂತೆ ವಿವಾಹ ಮಹೋತ್ಸವ ನೆರವೇರಿದೆ.

ಚಿತ್ರನಿರ್ಮಾಪಕ ಸಂದೀಪ್ ರೆಡ್ಡಿ ವಂಗಾ ಮತ್ತು ನಟಿ ಕಲ್ಯಾಣಿ ಪ್ರಿಯದರ್ಶನ್, ಆಶಿಕಾ ರಂಗನಾಥ್ ಮತ್ತಿತರರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮಾರ್ಚ್ 4 ರಂದು ಚಿತ್ರೋದ್ಯಮದ ಸಹೋದ್ಯೋಗಿಗಳಿಗಾಗಿ ಆರತಕ್ಷತೆ ಸಮಾರಂಭ ಆಯೋಜಿಸಿದ್ದಾರೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು ಆದೇಶಕ್ಕೆ ಸುಪ್ರೀಂ ತಡೆ!

ಕೋಲ್ಕತ್ತಾದಲ್ಲಿ 5.4 ರಷ್ಟು ತೀವ್ರತೆಯ ಭೂಕಂಪ: ವೇದಿಕೆಯಲ್ಲಿ ಭಾಷಣ ಮಾತನಾಡುತ್ತಿದ್ದಾಗ ಅಲುಗಾಡಿದ ಕೇಂದ್ರ ಸಚಿವರು! Video

Mutual Fund ಗಳಲ್ಲಿ ಚಿನ್ನ, ಬೆಳ್ಳಿ ಮೌಲ್ಯಮಾಪನ ಪದ್ಧತಿಯಲ್ಲಿ ಭಾರಿ ಬದಲಾವಣೆ; ಇದರಿಂದಾಗುವ ಲಾಭವೇನು?

ಬೆಂಗಳೂರಿನಲ್ಲಿ ಸುಡು ಬಿಸಿಲು: 30 ಡಿಗ್ರಿ ಸೆ.ಗಿಂತ ಹೆಚ್ಚಿನ ಉಷ್ಣಾಂಶ ದಾಖಲು! ಆರೋಗ್ಯ ತಜ್ಞರು ಏನಂತಾರೆ?

'ನಾನು ಭ್ರಷ್ಟನಲ್ಲ': ಕೋರ್ಟ್ ತೀರ್ಪಿನ ಬಳಿಕ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಅರವಿಂದ್ ಕೇಜ್ರಿವಾಲ್; Video

SCROLL FOR NEXT