ಪಿ.ವಿ ಸಿಂಧು ಮತ್ತು ಸುದೀಪ್ 
ಸಿನಿಮಾ ಸುದ್ದಿ

ಇತಿಹಾಸ ಬರೆದ ಪಿವಿ ಸಿಂಧುಗೆ ವಿಶೇಷ ಉಡುಗೊರೆ ಕೊಟ್ಟ ಕಿಚ್ಚ ಸುದೀಪ್!

ನಮ್ಮ ಪ್ರೀತಿಯ ದೇಶವನ್ನು ಮತ್ತೊಮ್ಮೆ ವಿಶ್ವ ಭೂಪಟದಲ್ಲಿ ಎತ್ತಿ ಹಿಡಿದಿದ್ದಕ್ಕಾಗಿ ಪ್ರತಿಯೊಬ್ಬ ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳು. ನೀವು ಯಾವಾಗಲೂ ನಮಗೆ ಪ್ರೇರಣೆಯಾಗಿದ್ದೀರಿ ಎಂದು ಅವರು ತಮ್ಮ ಕೈಬರಹದಲ್ಲಿ ಬರೆದಿದ್ದಾರೆ.

ಬೆಂಗಳೂರು: ಸಾಲು ಸಾಲು ಹಿನ್ನಡೆಗಳ ನಡುವೆ 19 ತಿಂಗಳುಗಳ ಬಳಿಕ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಜಯಗಳಿಸಿದ ಭಾರತದ ಸ್ಟಾರ್‌ ಷಟ್ಲರ್‌ ಪಿವಿ ಸಿಂಧುಗೆ ಕಿಚ್ಚ ಸುದೀಪ್‌ ವಿಶೇಷ ಉಡುಗೊರೆ ನೀಡಿ ಅಭಿನಂದಿಸಿದ್ದಾರೆ.

ಇತ್ತೀಚೆಗೆ ನಡೆದ ಜಪಾನ್‌ ಓಪನ್‌ ಬಿಡಬ್ಲ್ಯುಎಫ್‌ ಸೂಪರ್‌ ಸಿರೀಸ್‌ ಪ್ರಶಸ್ತಿ ಗೆಲ್ಲುವ ಮೂಲಕ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಜಯಿಸಿದ ಭಾರತದ ಮೊದಲ ಷಟ್ಲರ್‌ ಎನಿಸಿಕೊಂಡ ಪಿವಿ ಸಿಂಧು ಅವರಿಗೆ ಉಡುಗೊರೆ ನೀಡಿದ ವಿಚಾರವನ್ನು ಸ್ವತಃ ಸುದೀಪ್‌ ಬಹಿರಂಗಪಡಿಸಿದ್ದಾರೆ. ಉಡುಗೊರೆಯೊಂದಿಗೆ ತಮ್ಮ ಹೆಸರು ಇರುವ ಲೆಟರ್‌ಹೆಡ್‌ನಲ್ಲಿ ಅಭಿನಂದನಾ ಪತ್ರವನ್ನೂ ಕೂಡ ಸುದೀಪ್‌ ಕಳುಹಿಸಿಕೊಟ್ಟಿದ್ದಾರೆ.

ಜಪಾನ್ ಟೂರ್ನಿ ಗೆದ್ದ ಪಿವಿ ಸಿಂಧು ಅವರಿಗೆ ವಿಶೇಷ ಉಡುಗೊರೆಯನ್ನು ಸುದೀಪ್ ಕಳಿಸಿದ್ದಾರೆ. ವಿಶೇಷವಾದ ಅಭಿನಂದನಾ ಪತ್ರವನ್ನು ಸುದೀಪ್, ಸಿಂಧು ಅವರಿಗೆ ಕಳಿಸಿದ್ದು, ‘ಜಪಾನ್ ಓಪನ್‌ನಲ್ಲಿ ದಾಖಲೆ ಮುರಿಯುವಂತಹ ಅದ್ಭುತ ಗೆಲುವು ಸಾಧಿಸಿದ್ದಕ್ಕಾಗಿ ನಿಮಗೆ ಹೃದಯಪೂರ್ವಕ ಅಭಿನಂದನೆಗಳು.

ನಮ್ಮ ಪ್ರೀತಿಯ ದೇಶವನ್ನು ಮತ್ತೊಮ್ಮೆ ವಿಶ್ವ ಭೂಪಟದಲ್ಲಿ ಎತ್ತಿ ಹಿಡಿದಿದ್ದಕ್ಕಾಗಿ ಪ್ರತಿಯೊಬ್ಬ ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳು. ನೀವು ಯಾವಾಗಲೂ ನಮಗೆ ಪ್ರೇರಣೆಯಾಗಿದ್ದೀರಿ ಎಂದು ಅವರು ತಮ್ಮ ಕೈಬರಹದಲ್ಲಿ ಬರೆದಿದ್ದಾರೆ.

ಇದರ ಜೊತೆಗೆ ವಿಶೇಷ ಗಿಫ್ಟ್ ಹ್ಯಾಂಪರ್ ಅನ್ನು ಸಹ ಸುದೀಪ್ ಅವರು ಪಿವಿ ಸಿಂಧುಗೆ ಕಳಿಸಿಕೊಟ್ಟಿದ್ದಾರೆ. ಸುದೀಪ್ ಅವರು ಕಳಿಸಿರುವ ಪತ್ರ ಮತ್ತು ಗಿಫ್ಟ್ ಹ್ಯಾಂಪರ್​​ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪಿವಿ ಸಿಂಧು, ‘ಬಹಳ ಧನ್ಯವಾದಗಳು ಸುದೀಪ್ ಸರ್’ ಎಂದು ಬರೆದುಕೊಂಡಿದ್ದಾರೆ.

31 ವರ್ಷದ ಪಿವಿ ಸಿಂಧು ಫೈನಲ್‌ ಪಂದ್ಯದ 50 ನಿಮಿಷದ ಕಾದಾಟದಲ್ಲಿ 21-17, 21-17 ನೇರ ಗೇಮ್‌ಗಳಿಂದ ಯಮಗುಚಿ ಅವರನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಸೋಲಿಸಿದ್ದರು. ಕಿಚ್ಚ ಸುದೀಪ್‌ ಅವರು ಕೇವಲ ಚಿತ್ರರಂಗಕ್ಕಷ್ಟೇ ಸೀಮಿತವಾಗದೆ ಕ್ರೀಡಾರಂಗದಲ್ಲೂ ಸದಾ ಸಕ್ರಿಯರಾಗಿರುತ್ತಾರೆ. ಕ್ರೀಡಾಪಟುಗಳನ್ನ ಪ್ರೋತ್ಸಾಹಿಸುವಲ್ಲಿ ಮತ್ತು ಅವರ ಸಾಧನೆಗಳನ್ನ ಮುಕ್ತಕಂಠದಿಂದ ಶ್ಲಾಘಿಸುವಲ್ಲಿ ಸುದೀಪ್ ಎಂದಿಗೂ ಮುಂಚೂಣಿಯಲ್ಲಿರುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರಧಾನಿ, ಗೃಹ ಸಚಿವರಿಗೆ ಮತ್ತೆ ವಿದ್ಯಾರ್ಥಿಗಳೇ ಪಾಠ ಕಲಿಸುತ್ತಾರೆ'; ರಾಜ್ಯಸಭೆಯಲ್ಲಿ Mallikarjun Kharge ವಾಗ್ದಾಳಿ

Ramayana trailer: ರಣಬೀರ್ ಮತ್ತು ಯಶ್ ಅಬ್ಬರ, ಹನುಮಂತನ ದರ್ಶನಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆ!

Bhojshala case: ದರ್ಗಾ ಪಕ್ಕದ ಜಾಗದಲ್ಲಿ ಶುಕ್ರವಾರ ನಮಾಜ್‌ ಮಾಡಲು ಮುಸ್ಲಿಮರಿಗೆ ಸುಪ್ರೀಂ ಕೋರ್ಟ್ ಅನುಮತಿ

ಬೆಂಗಳೂರು: ರಸ್ತೆಯಲ್ಲಿ ಕೆಜಿಗಟ್ಟಲೆ ಮೊಳೆ ಚೆಲ್ಲಿ ಪಂಚರ್ ದಂಧೆ ಬೇಧಿಸಿದ ಪೊಲೀಸರು; ಕಿರಾತಕರು ಕೊನೆಗೂ ಅಂದರ್!

ಹಾರ್ಮುಜ್ ನಮ್ಮದು, ದಾಟುವ ದುಸ್ಸಾಹಸ ಮಾಡ್ಬೇಡಿ: ಅಮೆರಿಕಕ್ಕೆ ಸಹಾಯ ಮಾಡುವ ದೇಶಗಳಿಗೆ IRGC ಕಠಿಣ ಎಚ್ಚರಿಕೆ!