ಸಿ.ಪಿ. ಯೋಗೀಶ್ವರ್ 
ಸಿನಿಮಾ ಸುದ್ದಿ

22 ವರ್ಷಗಳ ಬಳಿಕ ‘ಸೈನಿಕ’ ಮತ್ತೆ ರಣರಂಗಕ್ಕೆ; ‘ಸೈನಿಕ 2’ ಮೂಲಕ ಸಿ.ಪಿ. ಯೋಗೀಶ್ವರ್ ಕಂಬ್ಯಾಕ್?

ಚಿತ್ರರಂಗದ ಮೂಲಗಳ ಪ್ರಕಾರ, ಯೋಗೀಶ್ವರ್ ತಮ್ಮ ವೃತ್ತಿಜೀವನದ ಪ್ರಮುಖ ಚಿತ್ರಗಳಲ್ಲಿ ಒಂದಾದ ಸೈನಿಕ ಚಿತ್ರದ ಸೀಕ್ವೆಲ್ ‘ಸೈನಿಕ 2’ ಮೂಲಕ ಮತ್ತೆ ಬಣ್ಣ ಹಚ್ಚುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಬೆಂಗಳೂರು: ನಟ ಹಾಗೂ ರಾಜಕಾರಣಿ ಸಿ.ಪಿ. ಯೋಗೀಶ್ವರ್ ಮತ್ತೆ ಬೆಳ್ಳಿತೆರೆಗೆ ಮರಳಲಿದ್ದಾರೆಯೇ ಎಂಬ ಚರ್ಚೆ ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ.

ಸದ್ಯ ಅವರ ಪುತ್ರ ಧ್ಯಾನ್ ಯೋಗೀಶ್ವರ್ ಅವರನ್ನು ನಾಯಕ ನಟನಾಗಿ ಪರಿಚಯಿಸುವ ಸಿದ್ಧತೆ ನಡೆಯುತ್ತಿರುವ ನಡುವೆಯೇ, ಯೋಗೀಶ್ವರ್ ಕೂಡ ಹಲವು ವರ್ಷಗಳ ಬಳಿಕ ನಟನಾಗಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಚಿತ್ರರಂಗದ ಮೂಲಗಳ ಪ್ರಕಾರ, ಯೋಗೀಶ್ವರ್ ತಮ್ಮ ವೃತ್ತಿಜೀವನದ ಪ್ರಮುಖ ಚಿತ್ರಗಳಲ್ಲಿ ಒಂದಾದ ಸೈನಿಕ ಚಿತ್ರದ ಸೀಕ್ವೆಲ್ ‘ಸೈನಿಕ 2’ ಮೂಲಕ ಮತ್ತೆ ಬಣ್ಣ ಹಚ್ಚುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಈ ಕುರಿತು ಅಧಿಕೃತ ಘೋಷಣೆ ಜುಲೈನಲ್ಲಿ ಹೊರಬೀಳುವ ನಿರೀಕ್ಷೆಯಿದೆ. ಅದೇ ಸಂದರ್ಭದಲ್ಲಿ ಧ್ಯಾನ್ ಯೋಗೀಶ್ವರ್ ಅವರ ಮೊದಲ ಚಿತ್ರ ಹಾಗೂ ಯೋಗೀಶ್ವರ್ ಅವರ ಕಂಬ್ಯಾಕ್ ಚಿತ್ರವನ್ನು ಘೋಷಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಧ್ಯಾನ್ ಯೋಗೀಶ್ವರ್ ಅಭಿನಯದ ಮೊದಲ ಚಿತ್ರವನ್ನು ಖ್ಯಾತ ನಿರ್ದೇಶಕ ನಾಗಣ್ಣ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಕಥೆಗಾರ ಎಂಎಸ್ ರಮೇಶ್, ಛಾಯಾಗ್ರಾಹಕ ಶೇಖರ್ ಚಂದ್ರು ಹಾಗೂ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಸೇರಿದಂತೆ ಅನುಭವಿ ತಾಂತ್ರಿಕ ತಂಡ ಕೈಜೋಡಿಸುವ ಸಾಧ್ಯತೆ ಇದೆ.

ರಾಜಕೀಯ ಪ್ರವೇಶಕ್ಕೂ ಮುನ್ನ ಯೋಗೀಶ್ವರ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು. ಉತ್ತರ ಧ್ರುವದಿಂ ದಕ್ಷಿಣ ಧ್ರುವಕು, ಜೊತೆಗಾರ, ಯಕ್ಷ, ರಾವಣ, ಬಂಗಾರದ ಜಿಂಕೆ ಹಾಗೂ ಅಂಬಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ಇವುಗಳ ಪೈಕಿ 2002ರಲ್ಲಿ ಬಿಡುಗಡೆಯಾದ ‘ಸೈನಿಕ’ ಚಿತ್ರ ಅವರಿಗೆ ವಿಶೇಷ ಜನಪ್ರಿಯತೆ ತಂದುಕೊಟ್ಟಿತ್ತು. ದೇಶಭಕ್ತಿ, ಕರ್ತವ್ಯನಿಷ್ಠೆ, ಧೈರ್ಯ ಮತ್ತು ತ್ಯಾಗದ ಕಥಾಹಂದರ ಹೊಂದಿದ್ದ ಈ ಆ್ಯಕ್ಷನ್ ಚಿತ್ರದಲ್ಲಿ ಯೋಗೀಶ್ವರ್ ಸೇನಾ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

‘ಸೈನಿಕ 2’ ಸಾಕಾರಗೊಂಡರೆ ಅದು ಕೇವಲ ಕಂಬ್ಯಾಕ್ ಚಿತ್ರವಾಗಿರುವುದಿಲ್ಲ. ತಮ್ಮ ಸಿನಿ ಬದುಕಿಗೆ ದೊಡ್ಡ ತಿರುವು ನೀಡಿದ್ದ ಚಿತ್ರದ ಮೂಲಕವೇ ಮತ್ತೆ ಪ್ರೇಕ್ಷಕರ ಮುಂದೆ ಬರುವ ಪ್ರಯತ್ನವಾಗಲಿದೆ.

ಜೊತೆಗೆ ಸಕ್ರಿಯ ರಾಜಕಾರಣಿಯಾಗಿರುವ ಯೋಗೀಶ್ವರ್ ಸಿನಿಮಾ ಮತ್ತು ಸಾರ್ವಜನಿಕ ಜೀವನದ ನಡುವಿನ ಸಮತೋಲನವನ್ನು ಹೇಗೆ ಸಾಧಿಸುತ್ತಾರೆ ಎಂಬುದರ ಕುರಿತಂತೆಯೂ ಕುತೂಹಲ ಮೂಡಿಸಿದೆ.

ಸದ್ಯಕ್ಕೆ ‘ಸೈನಿಕ 2’ ಯೋಜನೆ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ನಿರ್ದೇಶಕ, ನಿರ್ಮಾಣ ಸಂಸ್ಥೆ ಹಾಗೂ ಇತರ ಕಲಾವಿದರ ಆಯ್ಕೆ ಕುರಿತು ಅಧಿಕೃತ ಮಾಹಿತಿ ಹೊರಬರಬೇಕಿದೆ. ಆದರೆ, ನಾಯಕ ನಟನಾಗಿ ಧ್ಯಾನ್ ಯೋಗೀಶ್ವರ್ ಅವರ ಪ್ರವೇಶ ಮತ್ತು ಸಿ.ಪಿ. ಯೋಗೀಶ್ವರ್ ಅವರ ಸಂಭಾವ್ಯ ಕಂಬ್ಯಾಕ್ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಧ್ಯಪ್ರಾಚ್ಯ ಸಂಘರ್ಷ ಕೊನೆಗೂ ಅಂತ್ಯ: Pak ಮಧ್ಯಸ್ಥಿಕೆಯಲ್ಲಿ US-Iran ನಡುವೆ ಶಾಂತಿ ಒಪ್ಪಂದ; ನೌಕಾ ದಿಗ್ಬಂಧನ ತೆರವು, ತಕ್ಷಣದಿಂದಲೇ Hormuz ಜಲಸಂಧಿ ಓಪನ್‌..!

ಇದು ಅಂತಿಮ ಒಪ್ಪಂದವಲ್ಲ, ದುರ್ವರ್ತನೆ ತೋರಿದರೆ ಯುದ್ಧ ಪುನರಾರಂಭ: ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್- ಜೆಡಿಎಸ್ ಪೈಪೋಟಿ -ಅಡ್ಡ ಮತದಾನದ ಭೀತಿ! 7ನೇ ಸ್ಥಾನ ಗೆಲ್ಲೋರು ಯಾರು?

ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್ Power game: ವೈಯಕ್ತಿಕ ಪ್ರತಿನಿಧಿಯಾಗಿ ಜೋಬಿನ್ ಜೋಸೆಫ್ ನೇಮಕ, ಹಿಂದಿನ ರಾಜಕೀಯ ಲೆಕ್ಕಾಚಾರವೇನು..?

ಗೃಹಲಕ್ಷ್ಮಿ ದುರುಪಯೋಗಕ್ಕೆ ಬ್ರೇಕ್; ಅರ್ಜಿ ನಮೂನೆಯಲ್ಲಿ ಸರ್ಕಾರ ಮಹತ್ವದ ಬದಲಾವಣೆ, Voter ID, Aadhaar-Link ಮಾಹಿತಿ ಕಡ್ಡಾಯ ಸಾಧ್ಯತೆ..!

SCROLL FOR NEXT