ಐಶ್ವರ್ಯ ರೈ 
ಸಿನಿಮಾ ಸುದ್ದಿ

Cannes 2026 Closing Ceremony: ಬಿಳಿ ಪ್ಯಾಂಟ್ ಸೂಟ್ ನಲ್ಲಿ ಕಂಗೊಳಿಸಿದ ಐಶ್ವರ್ಯ ರೈ!

ಜೊತೆಗೆ ಆಕೆಯ ಕೋಟ್‌ನಲ್ಲಿ ಕಟಿಂಗ್ ಹಾಗೂ ಲ್ಯಾಪಲ್ ಡಿಸೈನ್‌ಗಳು ಅದ್ಭುತವಾಗಿ ಎದ್ದು ಕಾಣುತ್ತಿದ್ದವು. ಐಶ್ವರ್ಯಾ ಈ ಉಡುಪನ್ನು ಅತ್ಯಂತ ವಿಶ್ವಾಸದಿಂದ ಧರಿಸಿ, ತನ್ನ ಸುಂದರವಾದ ಮುಕ್ತವಾದ ಕೇಶವಿನ್ಯಾಸ ಮತ್ತು ಮಿನಿಮಲ್ ಮೇಕಪ್‌ನೊಂದಿಗೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಇಟ್ಟಿದ್ದರು.

ಕ್ಯಾನೆಸ್‌ : 79 ನೇ ಕೇನ್ಸ್ ಚಲನಚಿತ್ರೋತ್ಸವದ (Cannes Film Festival) ಸಮಾರೋಪ ಸಮಾರಂಭ ಫ್ರಾನ್ಸ್‌ನ ಕ್ಯಾನೆಸ್‌ನಲ್ಲಿರುವ ಪ್ಯಾಲೇಸ್ ಡೆಸ್ ಫೆಸ್ಟಿವಲ್ಸ್‌ನಲ್ಲಿ ನಿನ್ನೆ ಅದ್ಧೂರಿಯಾಗಿ ಜರುಗಿತು.

ಈ ವರ್ಣರಂಜಿತ ಸಮಾರಂಭದಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಕಾಣಿಸಿಕೊಂಡರು. ಅವರ 2ನೇ ರೆಡ್ ಕಾರ್ಪೆಟ್ ವಾಕಿಂಗ್ ಮೊದಲು ಧರಿಸಿದ್ದ ನೀಲಿ ಗೌನ್‌ಗೆ ಸಂಪೂರ್ಣ ವ್ಯತಿರಿಕ್ತವಾಗಿತ್ತು. ಈ ಬಾರಿ ಅವರು ಬಿಳಿ ಪ್ಯಾಂಟ್‌ಸೂಟ್‌ನಲ್ಲಿ ಹೆಜ್ಜೆ ಹಾಕಿದರು.

ಚೀನಾ ಮೂಲದ ಖ್ಯಾತ ಡಿಸೈನರ್ ಚೆನ್ನಿ ಚಾನ್ ಈ ವಿಶಿಷ್ಟವಾದ ಬಿಳಿ ಬಣ್ಣದ ಡಿಸೈನರ್ ಉಡುಪನ್ನು ವಿನ್ಯಾಸಗೊಳಿಸಿದ್ದರು. ಈ ಆಕರ್ಷಕ ಪವರ್ ಸೂಟ್‌ನಲ್ಲಿ ಬ್ಲೇಜರ್ ಮತ್ತು ಕಸೂತಿ ಕೆಲಸವಿರುವ ಟ್ರೌಸರ್ ಜೊತೆಗೆ ಸುಂದರವಾದ ಗರಿಗಳ ಕಂಪು ಇತ್ತು.

ಜೊತೆಗೆ ಆಕೆಯ ಕೋಟ್‌ನಲ್ಲಿ ಕಟಿಂಗ್ ಹಾಗೂ ಲ್ಯಾಪಲ್ ಡಿಸೈನ್‌ಗಳು ಅದ್ಭುತವಾಗಿ ಎದ್ದು ಕಾಣುತ್ತಿದ್ದವು. ಐಶ್ವರ್ಯಾ ಈ ಉಡುಪನ್ನು ಅತ್ಯಂತ ವಿಶ್ವಾಸದಿಂದ ಧರಿಸಿ, ತನ್ನ ಸುಂದರವಾದ ಮುಕ್ತವಾದ ಕೇಶವಿನ್ಯಾಸ ಮತ್ತು ಮಿನಿಮಲ್ ಮೇಕಪ್‌ನೊಂದಿಗೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಇಟ್ಟಿದ್ದರು.

ಈ ಬಾರಿ ಐಶ್ವರ್ಯಾ ಕೇನ್ಸ್‌ನಲ್ಲಿ ಒಬ್ಬಂಟಿಯಾಗಿರಲಿಲ್ಲ. ಅವರ ಪಕ್ಕದಲ್ಲಿ ಅವರ ಮಗಳು ಆರಾಧ್ಯ ಇದ್ದರು. ಆರಾಧ್ಯ ಕೆಂಪು ರೇಷ್ಮೆ ಗೌನ್‌ನಲ್ಲಿ ಕೆಂಪು ಲಿಪ್‌ಸ್ಟಿಕ್ ಮತ್ತು ಸೈಡ್-ಪಾರ್ಟೆಡ್ ಕೇಶವಿನ್ಯಾಸದೊಂದಿಗೆ ಕಾಣಿಸಿಕೊಂಡರು.

ಚಿತ್ರರಂಗದಿಂದ ದೂರ ಉಳಿದಿರುವ ಐಶ್ವರ್ಯ ರೈ, ಕೊನೆಯದಾಗಿ ಪೊನ್ನಿಯಿನ್ ಸೆಲ್ವನ್: ಭಾಗ I (2022) ಮತ್ತು ಪೊನ್ನಿಯಿನ್ ಸೆಲ್ವನ್: ಭಾಗ II (2023) ನಲ್ಲಿ ಕಾಣಿಸಿಕೊಂಡರು. ಅಲ್ಲಿಂದಾಚೆಗೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಅವರ ಮುಂದಿನ ಚಿತ್ರಗಳ ಬಗ್ಗೆಯೂ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶೀಘ್ರದಲ್ಲೇ ವಿಶ್ವಕ್ಕೆ ಸಿಹಿ ಸುದ್ದಿ: ಅಮೆರಿಕಾ–ಇರಾನ್ ಸಂಘರ್ಷ ಅಂತ್ಯ ಸಾಧ್ಯತೆ, ಮಾರ್ಕೊ ರುಬಿಯೊ ಮಹತ್ವದ ಹೇಳಿಕೆ..!

KL Rahul ಆಯ್ತು ಇದೀಗ ರಿಷಬ್ ಪಂತ್ ನಾಯಕತ್ವಕ್ಕೆ ಕುತ್ತು?: LSG ಡೈರೆಕ್ಟರ್ ಟಾಮ್ ಮೂಡಿ ಸುಳಿವು!

ಅಮೆರಿಕದಲ್ಲಿ ಭಾರತೀಯರ ವಿರುದ್ಧ ಜನಾಂಗೀಯ ಹೇಳಿಕೆ: ಮಾರ್ಕೊ ರೂಬಿಯೊ ಹೇಳಿದ್ದೇನು?

ಪಾಕಿಸ್ತಾನದಲ್ಲಿ ಮುಂದುವರಿದ ರಕ್ತಪಾತ: ಚಲಿಸುತ್ತಿದ್ದ ರೈಲಿನಲ್ಲಿ ಆತ್ಮಾಹುತಿ ಬಾಂಬ್ ದಾಳಿ; 24 ಪ್ರಯಾಣಿಕರ ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

ಎಬೋಲಾ ಭೀತಿ: ಡಿಆರ್‌ಸಿ, ಉಗಾಂಡಾ, ದಕ್ಷಿಣ ಸುಡಾನ್‌ಗೆ ಅನಗತ್ಯ ಪ್ರಯಾಣ ಬೇಡ: ಭಾರತೀಯರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

SCROLL FOR NEXT