Bigg Boss ಕನ್ನಡ ಸೀಸನ್ 13ರಲ್ಲಿ ದಿನ ಕಳೆದಂತೆ ಸ್ಪರ್ಧಿಗಳ ಮಧ್ಯೆ ಕಿತ್ತಾಟ ಜೋರಾಗುತ್ತಿವೆ. ತನ್ನ ವಸ್ತುಗಳನ್ನು ಕಾಪಾಡಿಕೊಳ್ಳುವ ಟಾಸ್ಕ್ವೊಂದನ್ನು ʼಬಿಗ್ ಬಾಸ್ʼ ಸ್ಪರ್ಧಿಗಳಿಗೆ ನೀಡಿದ್ದರು. ಈ ಟಾಸ್ಕ್ ವೇಳೆ ಸೌಂದರ್ಯಾ ಹಾಗೂ ಮಂಜು ನಡುವೆ ದೊಡ್ಡ ಮಟ್ಟದ ಕಿತ್ತಾಟವೇ ನಡೆದಿದೆ. ತನಗೆ ಕೊಟ್ಟಿರುವ ವಸ್ತುಗಳನ್ನು ಪ್ರತಿಸ್ಪರ್ಧಿಗಳಿಂದ ಕಾಪಾಡಿಕೊಳ್ಳುವ ಆಟದಲ್ಲಿ ಮಂಜ, ಧನುಷ್ ಹಾಗೂ ಸೌಂದರ್ಯ ನಡುವೆ ಜಗಳ ಆಗಿದೆ.
ಮೊದಲಿಗೆ ಸೌಂದರ್ಯ ಬಳಿಯಿದ್ದ ವಸ್ತುಗಳನ್ನು ಧನುಷ್ ಕಸಿದುಕೊಳ್ಳಲು ಯತ್ನಿಸಿದ್ದರು. ಈ ವೇಳೆ ಧನುಷ್ಗೆ ಸೌಂದರ್ಯ ಬಕೆಟ್ನಿಂದ ಹೊಡೆಯಲು ಯತ್ನಿಸಿದ್ದಾಳೆ. ಇದಕ್ಕೆ ಧನುಷ್ ಹೊಡಿ ಎಂದಿದ್ದು, ಸೌಂದರ್ಯ ಬಾ ಎಂದು ಟಕ್ಕರ್ ಕೊಟ್ಟಿದ್ದಾರೆ. ಧನುಷ್ ವಸ್ತುಗಳನ್ನು ಬಲ ಪ್ರಯೋಗ ಮಾಡಿ ಸೌಂದರ್ಯ ಕೈಯಿಂದ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಇನ್ನೊಂದು ಕಡೆ ಮಂಜ ಕೂಡ ಸೌಂದರ್ಯ ಅವರಿಂದ ವಸ್ತುಗಳನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಸೌಂದರ್ಯ ಮೊದಲು ಬಿಡು ಬಿಡು ಎಂದು ವಾರ್ನ್ ಮಾಡಿದ್ದಾರೆ. ಆದರೆ ಮಂಜ ಇದನ್ನು ಕೇಳಿಲ್ಲ. ಮಂಜ ವಸ್ತುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಂತೆ ಸೌಂದರ್ಯ ಕೋಪ ನೆತ್ತಿಗೇರಿದ್ದು, ಮಂಜನಿಗೆ ಹೊಡೆಯಲು ಹೋಗುತ್ತಾಳೆ.
ಇದರಿಂದ ಸಿಟ್ಟಾದ ಮಂಜ ನನಗೆ ನಿನ್ನನ್ನು ಎತ್ತಿ ಹಾಕಿ ಕುಕ್ಕಿ ಬಿಡೋಣ ಅನುಸ್ತಿದೆ ಎಂದು ಹೇಳುತ್ತಾ ಸೌಂದರ್ಯ ಪಕ್ಕಕ್ಕೆ ಹೋಗಿದ್ದಾನೆ. ಇದನ್ನು ನೋಡುತ್ತಿದ್ದ ಮನೆ ಮಂದಿ ಕೂಡಲೇ ಮಧ್ಯಪ್ರವೇಶಿಸಿ ಮಂಜನನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಒಂದು ವೇಳೆ ಸೌಂದರ್ಯ ಆಗಲಿ, ಮಂಜ ಆಗಲಿ ಪರಸ್ಪರ ಹಲ್ಲೆ ಮಾಡಿಕೊಂಡಿದ್ರೆ, ಇದು ʼಬಿಗ್ ಬಾಸ್ʼ ನಿಯಮದ ಉಲ್ಲಂಘನೆ ಆಗುತ್ತಿತ್ತು.