ನಿರ್ದೇಶಕ ಅಟ್ಲೀ, ಸಿಎಂ ವಿಜಯ್ 
ಸಿನಿಮಾ ಸುದ್ದಿ

'ಅಂಥವನು ನಾಯಕನಲ್ಲ' ವಿಜಯ್ ಸೇತುಪತಿ ವಿವಾದಾತ್ಮಕ ಹೇಳಿಕೆ ನಡುವೆ ತಮಿಳುನಾಡು ಸಿಎಂ ಹಾಡಿ ಹೊಗಳಿದ ನಿರ್ದೇಶಕ ಅಟ್ಲೀ!

'ರಾಜಾ ರಾಣಿ' ಚಿತ್ರದ ನಂತರ ವಿಜಯ್ ಅವರು ತಮಗೆ ನೀಡಿದ ಬೆಂಬಲ ಮತ್ತು ಶಾರುಖ್ ಖಾನ್ ಅವರೊಂದಿಗೆ 'ಜವಾನ್' ಚಿತ್ರವನ್ನು ಮಾಡುವಂತೆ ಪ್ರೋತ್ಸಾಹಿಸಿದ್ದನ್ನು ಅವರು ಸ್ಮರಿಸಿದರು.

'ಬಿಗ್ ಬಾಸ್ (Bigg Boss) ಸೀಸನ್ 10' ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಚಟುವಟಿಕೆಗಳು ಮತ್ತು ಲೀಡರ್​​ಶಿಪ್ ಪಾತ್ರದ ಬಗ್ಗೆ ಮಾತನಾಡುವಾಗ ನಟ ವಿಜಯ್ ಸೇತುಪತಿ ಅವರ "ನಾಯಕ" ಮತ್ತು "ನಾಯಕತ್ವ"ದ ಬಗ್ಗೆ ಕೊಟ್ಟ ಹೇಳಿಕೆಗಳು ಅಂತರ್ಜಾಲದಲ್ಲಿ ಭಾರಿ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ.

ನಾಯಕತ್ವದ ಬಗ್ಗೆ ಸಲಹೆ ನೀಡಿದ ವಿಜಯ್ ಸೇತುಪತಿ, "ನಾಯಕತ್ವ ಎಂದರೇನು ಎಂದು ತಿಳಿಯದೆ, ನಾಯಕತ್ವ ಎಂದರೇನು ಎಂದು ಅರ್ಥಮಾಡಿಕೊಳ್ಳದೆ ಭರವಸೆಗಳನ್ನು ನೀಡಿ, ನಂತರ ಸಮಸ್ಯೆಗಳು ಮತ್ತು ಜವಾಬ್ದಾರಿಗಳು ಬಂದಾಗ ಎದುರಾಳಿಯನ್ನು ದೂಷಿಸಿ ಓಡಿಹೋಗುವುದು ನಾಯಕನ ಗುಣವಲ್ಲ. ಅದು ವಂಚನೆ" ಎಂದು ಹೇಳಿದ್ದರು.

ಅವರ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ನಾಂದಿ ಹಾಡಿದ್ದು, ಅವು ಪ್ರಸ್ತುತ ರಾಜಕೀಯ ಘಟನೆಗಳು, ಟಿವಿಕೆ ಸರ್ಕಾರ ಮತ್ತು ಮುಖ್ಯಮಂತ್ರಿ ವಿಜಯ್‌ಗೆ ಸಂಬಂಧಿಸಿವೆ ಎಂದು ಹೇಳಲಾಗುತ್ತಿದೆ.

ಈ ಹೇಳಿಕೆಯ ವಿವಾದದ ನಡುವೆ 'ಬತ್ತಾ' (Baththa) ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಅಟ್ಲೀ ತಮ್ಮ ವೃತ್ತಿಜೀವನವನ್ನು ರೂಪಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಅವರ ಭಾಷಣದ ಬಹುಭಾಗವು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೊತೆಗಿನ ಒಡನಾಟದ ಸುತ್ತಲೇ ಕೇಂದ್ರೀಕೃತವಾಗಿತ್ತು.

'ರಾಜಾ ರಾಣಿ' ಚಿತ್ರದ ನಂತರ ವಿಜಯ್ ಅವರು ತಮಗೆ ನೀಡಿದ ಬೆಂಬಲ ಮತ್ತು ಶಾರುಖ್ ಖಾನ್ ಅವರೊಂದಿಗೆ 'ಜವಾನ್' ಚಿತ್ರವನ್ನು ಮಾಡುವಂತೆ ಪ್ರೋತ್ಸಾಹಿಸಿದ್ದನ್ನು ಅವರು ಸ್ಮರಿಸಿದರು. ಯುವ ಸಂಗೀತ ಸಂಯೋಜಕ ಸಾಯಿ ಅಭ್ಯಂಕರ್ ಮತ್ತು 'ಬತ್ತಾ' ಚಿತ್ರವನ್ನು ತಮ್ಮ ಬಳಿಗೆ ತರುವಲ್ಲಿ ವಿಜಯ್ ಸೇತುಪತಿ ವಹಿಸಿದ ಪಾತ್ರದ ಬಗ್ಗೆಯೂ ಅಟ್ಲೀ ಮಾತನಾಡಿದರು.

ವಿಜಯ್ ಸೇತುಪತಿ ಅವರ ಹೇಳಿಕೆಗಳನ್ನು ಕೆಲವರು ನಟ ವಿಜಯ್ ಅವರನ್ನು ಉದ್ದೇಶಿಸಿ ಆಡಿದ ಮಾತುಗಳೆಂದು ವ್ಯಾಖ್ಯಾನಿಸಿದ್ದರಿಂದ ಆನ್‌ಲೈನ್‌ನಲ್ಲಿ ಊಹಾಪೋಹಗಳು ಎದ್ದಿದ್ದವು; ಇಂತಹ ಸಂದರ್ಭದಲ್ಲಿಯೇ ಅಟ್ಲೀ ಅವರ ಮಾತುಗಳು, ಮಹತ್ವ ಪಡೆದುಕೊಂಡಿವೆ. ವಿಜಯ್ ಸೇತುಪತಿ ಆ ಹೇಳಿಕೆಗಳಲ್ಲಿ ವಿಜಯ್ ಅವರ ಹೆಸರನ್ನಾಗಲಿ ಅಥವಾ ಅವರ ರಾಜಕೀಯ ಪಕ್ಷದ ಹೆಸರನ್ನಾಗಲಿ ಪ್ರಸ್ತಾಪಿಸಿರಲಿಲ್ಲ. ಆದರೂ, ಇಂತಹ ಪರೋಕ್ಷ ಮಾತುಗಳಿಗೆ ಅತಿಯಾದ ಅರ್ಥ ಕಲ್ಪಿಸದಂತೆ ಅಟ್ಲೀ ಜನರಿಗೆ ಮನವಿ ಮಾಡಿದ್ದಾರೆ.

ತಮ್ಮ ವೃತ್ತಿಪಯಣವನ್ನು ಹಿಂತಿರುಗಿ ನೋಡಿದಾಗ, 'ರಾಜಾ ರಾಣಿ' ಚಿತ್ರವು ತಮಗೆ ಗುರುತಿಸುವಿಕೆಯನ್ನು ತಂದುಕೊಟ್ಟಿತಾದರೂ, ನಂತರದ ದಿನಗಳಲ್ಲಿ ವಿಜಯ್ ಅವರೊಂದಿಗಿನ ಒಡನಾಟವು ತಮ್ಮ ವೃತ್ತಿಜೀವನಕ್ಕೆ ದೊಡ್ಡ ಮಟ್ಟದ ಉತ್ತೇಜನ ನೀಡಿತು ಎಂದು ಅಟ್ಲೀ ಹೇಳಿದರು. "ನಾನು ಧರಿಸಿರುವ ಈ ಶರ್ಟ್, ಪ್ಯಾಂಟ್ ಮತ್ತು ಕೈಗಡಿಯಾರವನ್ನು ಬಹುಶಃ ನನ್ನ ಕಠಿಣ ಪರಿಶ್ರಮದಿಂದಲೇ ಖರೀದಿಸಿರಬಹುದು. ಆದರೆ ನನ್ನ ಸಹೋದರ, ನನ್ನ 'ದಳಪತಿ' ಇಲ್ಲದಿದ್ದರೆ ನನಗೆ ಆ ಅವಕಾಶ ಸಿಗುತ್ತಿರಲಿಲ್ಲ. 'ರಾಜಾ ರಾಣಿ' ನಂತರ ನಾನು ಜನಪ್ರಿಯನಾದೆ, ಆದರೆ ಆ ವ್ಯಕ್ತಿ ನನಗೆ ಬದುಕನ್ನೇ ನೀಡಿದರು. ಒಂದರ ನಂತರ ಒಂದರಂತೆ ಅವಕಾಶಗಳನ್ನು ನೀಡುತ್ತಾ ಹೋದರು ಎಂದು ಅವರು ಹೇಳಿದರು.

ಜವಾನ್' ಚಿತ್ರದ ಕುರಿತು ಆಲೋಚಿಸುತ್ತಿದ್ದಾಗ ಶಾರುಖ್ ಖಾನ್ ತಮ್ಮ ಕಚೇರಿಗೆ ಭೇಟಿ ನೀಡಿದ್ದ ಸಮಯವನ್ನು ಅಟ್ಲೀ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಅಟ್ಲೀ ಅವರ ಪ್ರಕಾರ, ಆ ಸಿನಿಮಾ ಸುತ್ತಮುತ್ತಲಿನ ಅನಿಶ್ಚಿತತೆಯ ಹೊರತಾಗಿಯೂ ಅದನ್ನು ಕೈಗೆತ್ತಿಕೊಳ್ಳುವಂತೆ ವಿಜಯ್ ಪ್ರೋತ್ಸಾಹ ನೀಡಿದ್ದರು. "ಶಾರುಖ್ ಸರ್ ನನ್ನ ಕಚೇರಿಗೆ ಬಂದಾಗ, ವಿಜಯ್ ಅಣ್ಣ ನನಗೆ, 'ನೀವು ಏನು ಮಾಡಲಿದ್ದೀರಿ ಎಂದು ನನಗೆ ಗೊತ್ತಿಲ್ಲ, ಆದರೆ ದಯವಿಟ್ಟು ಆ ಚಿತ್ರವನ್ನು ಮಾಡಿ. ನಿಮ್ಮ ಜೀವನವೇ ಬದಲಾಗುತ್ತದೆ' ಎಂದು ಹೇಳಿದರು. ಮತ್ತು ನನ್ನ ಜೀವನ ಬದಲಾಯಿತು ಎಂದು ಅವರು ಹೇಳಿದರು.

ಅಟ್ಲೀ ಈ ಹಿಂದೆ ವಿಜಯ್ ಅವರೊಂದಿಗೆ 'ಥೇರಿ', 'ಮೆರ್ಸಲ್' ಮತ್ತು 'ಬಿಗಿಲ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಯುವ ಪ್ರೇಕ್ಷಕರಲ್ಲಿ ಹೆಚ್ಚುತ್ತಿರುವ ರಾಜಕೀಯ ಅರಿವಿನ ಬಗ್ಗೆಯೂ ಮಾತನಾಡಿದ ಅಟ್ಲೀ, ಅದನ್ನು ವಿಜಯ್ ಅವರ ರಾಜಕೀಯ ಪಯಣದೊಂದಿಗೆ ಜೋಡಿಸಿದರು. ನನ್ನ ಪೀಳಿಗೆಯಲ್ಲಿ, ನಾನು ಎಂದಿಗೂ ವಿಧಾನಸಭೆಯ ಕಲಾಪಗಳನ್ನು ನೋಡಿರಲಿಲ್ಲ. ಆದರೆ ಈಗ, ಐದು ವರ್ಷದ ಮಗುವೂ ಬೆಳಿಗ್ಗೆ ವಿಧಾನಸಭೆಯ ಕಲಾಪಗಳನ್ನು ವೀಕ್ಷಿಸುತ್ತಿದೆ. ವಿಜಯ್ ಅಣ್ಣ ಒಂದು ಬಲಿಷ್ಠ ಪೀಳಿಗೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದರು. ಒಬ್ಬರ ಹೇಳಿಕೆಯನ್ನು ಮತ್ತೊಬ್ಬರ ಹೇಳಿಕೆಯೊಂದಿಗೆ ಪದೇ ಪದೇ ಜೋಡಿಸುವ ಸಾಮಾಜಿಕ ಜಾಲತಾಣದ ಊಹಾಪೋಹಗಳ ಬಗ್ಗೆಯೂ ಅವರು ಎಚ್ಚರಿಕೆ ನೀಡಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಂಗಾಳ Bypoll: ಕ್ಷಣಕ್ಕೊಂದು ತಿರುವು; ನಾಮಪತ್ರ ಹಿಂತೆಗೆತ ಘೋಷಿಸಿದ್ದ ರೆಜಿನಗರ್ ಟಿಎಂಸಿ ಅಭ್ಯರ್ಥಿ ಆಲಂ ಚೌಧರಿ ಯು-ಟರ್ನ್!

ಕಸ್ತೂರಿರಂಗನ್ ವರದಿಯ ಭೌತಿಕ ಸಮೀಕ್ಷೆ ಬಗ್ಗೆ ಜನರ ಅಹವಾಲು ಆಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ: ಸಿಎಂ; Video

'ಒಳ ಉಡುಪಿನಲ್ಲಿ ಆ ದೃಶ್ಯ ಮಾಡಿ ಅಂದ್ರು': ಬಾಲಿವುಡ್ ನಿರ್ದೇಶಕರ ಕರಾಳ ಮುಖ ಬಿಚ್ಚಿಟ್ಟ ನಟಿ ರಾಧಿಕಾ ಆಪ್ಟೆ!

ಕರಾವಳಿಗರ ಕೈಗೆ ರಕ್ತ ಸವರುತ್ತಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕೆಲಸಗಳು ಮೂಗಿಗೆ ತುಪ್ಪ ಸವರಿದಂತೆ ಕಾಣುತ್ತಿದೆ - ಪ್ರಿಯಾಂಕ್ ಖರ್ಗೆ

ದೆಹಲಿ ವಿವಿ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ ಬಸ್ ಕಂಡಕ್ಟರ್ ಮಗ; ಗೆಲುವಿಗೆ ಕಾರಣ ಬಿಚ್ಚಿಟ್ಟ ದೀಪಾಂಶು!