ವಿರಾಟ್ ಕೊಹ್ಲಿ 
ಕ್ರಿಕೆಟ್

ತಮ್ಮ ಬ್ಯಾಟ್ ಮೇಲೆ ಪ್ರತಿಷ್ಠಿತ ಸಂಸ್ಥೆ ಚಿನ್ಹೆ ಬಳಸಲು ಭಾರತ ಆಟಗಾರರು ಪಡೆದ ಸಂಭಾವನೆ

ಭಾರತದ ಮಟ್ಟಿಗೆ ಕ್ರಿಕೆಟ್ ಧಾರ್ಮಿಕ ಕ್ರೀಡೆಯಾಗಿದೆ. ಪ್ರತಿಯೊಬ್ಬರ ರಕ್ತದ ಕಣಕಣದಲ್ಲೂ ಕ್ರಿಕೆಟ್ ತುಂಬಿ ಹೋಗಿದೆ. ಅಂತೆ ಭಾರತದಲ್ಲಿ ಕ್ರಿಕೆಟ್ ಆಟಗಾರರಿಗಿರುವಂತ ಅಮೋಘ

ಭಾರತದ ಮಟ್ಟಿಗೆ ಕ್ರಿಕೆಟ್ ಧಾರ್ಮಿಕ ಕ್ರೀಡೆಯಾಗಿದೆ. ಪ್ರತಿಯೊಬ್ಬರ ರಕ್ತದ ಕಣಕಣದಲ್ಲೂ ಕ್ರಿಕೆಟ್ ತುಂಬಿ ಹೋಗಿದೆ. ಅಂತೆ ಭಾರತದಲ್ಲಿ ಕ್ರಿಕೆಟ್ ಆಟಗಾರರಿಗಿರುವಂತ ಅಮೋಘ ಅವಕಾಶಗಳು ಬೇರ್ಯಾವ ದೇಶದ ಆಟಗಾರರಿಗಿಲ್ಲ.

ಹೀಗೆ 90ರ ದಶಕದಲ್ಲಿ ಕಮರ್ಶಿಯಲ್ ಆಗಿ ಗುರುತಿಸಿಕೊಂಡವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್. ತಮ್ಮ ಸಂಸ್ಥೆಗಳ ಬ್ರಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ಕಂಪನಿಗಳು ತೂದಿಗಾಲಿನಲ್ಲಿ ನಿಂತಿದ್ದವು. ಅವರ ಬಳಿಕ ಆ ಜಾಗಕ್ಕೆ ಬಂದವರು ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ.

ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸುವ ಆಟಗಾರರ ಬ್ಯಾಟ್ ಗಳ ಮೇಲೆ ತಮ್ಮ ಸಂಸ್ಥೆಯ ಚಿಹ್ನೆಗಳನ್ನು ಅಂಟಿಸಿಕೊಳ್ಳಲು ಭಾರತೀಯ ಬ್ಯಾಸ್ಟ್ ಮನ್ ಗಳಿಗೆ ಪ್ರತಿಷ್ಥಿತ ಸಂಸ್ಥೆಗಳು ಅತೀ ಹೆಚ್ಚು ಮೊತ್ತ ನೀಡುತ್ತೀವೆ. ಅದರಂತೆ ಇದೀಗ ಟಾಪ್ ಒಂದನೇ ಸ್ಥಾನದಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಇದ್ದಾರೆ.

2011ರ ವಿಶ್ವಕಪ್ ಗೆಲುವಿಗೆ ಕಾರಣರಾದ ಎಂಎಸ್ ಧೋನಿಗೆ ಸ್ಪಾರ್ಥನ್ ಸಂಸ್ಥೆ 6 ಕೋಟಿ ನೀಡಿದೆ. ಇದೀಗ ಧೋನಿಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಮೇಲೆ ಎಂಆರ್ಎಫ್ ಸಂಸ್ಥೆಯ ಸ್ಟಿಕರ್ ಅಂಟಿಸಿಕೊಳ್ಳಲು 8 ಕೋಟಿ ನೀಡಿದೆ.

ಇನ್ನು ಯುವರಾಜ್ ಸಿಂಗ್ ಗೆ ಪುಮಾ ಸಂಸ್ಥೆ 4 ಕೋಟಿ. ರೋಹಿತ್ ಶರ್ಮಾಗೆ ಸೆಟಾ ಸಂಸ್ಥೆ 3 ಕೋಟಿ. ಶಿಖರ್ ಧವನ್ ಗೆ ಎಂಆರ್ಎಫ್ ಸಂಸ್ಥೆ 3 ಹಾಗೂ ಸುರೇಶ್ ರೈನಾಗೆ ಸೆಟಾ ಸಂಸ್ಥೆ 2.5ರಿಂದ 3 ಕೋಟಿ ನೀಡಿದೆ.

ಭಾರತೀಯ ಕ್ರಿಕೆಟಿಗರಂತೆ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಎಬಿಡಿವಿಲಿಯರ್ಸ್ 3.5 ಕೋಟಿ ಹಾಗೂ ವೆಸ್ಟ್ ಇಂಡೀಸ್ ನ ಆಟಗಾರ ಕ್ರಿಸ್ ಗೇಯ್ಲ್ 3 ಕೋಟಿ ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT