ವಿರಾಟ್ ಕೊಹ್ಲಿ 
ಕ್ರಿಕೆಟ್

ತಮ್ಮ ಬ್ಯಾಟ್ ಮೇಲೆ ಪ್ರತಿಷ್ಠಿತ ಸಂಸ್ಥೆ ಚಿನ್ಹೆ ಬಳಸಲು ಭಾರತ ಆಟಗಾರರು ಪಡೆದ ಸಂಭಾವನೆ

ಭಾರತದ ಮಟ್ಟಿಗೆ ಕ್ರಿಕೆಟ್ ಧಾರ್ಮಿಕ ಕ್ರೀಡೆಯಾಗಿದೆ. ಪ್ರತಿಯೊಬ್ಬರ ರಕ್ತದ ಕಣಕಣದಲ್ಲೂ ಕ್ರಿಕೆಟ್ ತುಂಬಿ ಹೋಗಿದೆ. ಅಂತೆ ಭಾರತದಲ್ಲಿ ಕ್ರಿಕೆಟ್ ಆಟಗಾರರಿಗಿರುವಂತ ಅಮೋಘ

ಭಾರತದ ಮಟ್ಟಿಗೆ ಕ್ರಿಕೆಟ್ ಧಾರ್ಮಿಕ ಕ್ರೀಡೆಯಾಗಿದೆ. ಪ್ರತಿಯೊಬ್ಬರ ರಕ್ತದ ಕಣಕಣದಲ್ಲೂ ಕ್ರಿಕೆಟ್ ತುಂಬಿ ಹೋಗಿದೆ. ಅಂತೆ ಭಾರತದಲ್ಲಿ ಕ್ರಿಕೆಟ್ ಆಟಗಾರರಿಗಿರುವಂತ ಅಮೋಘ ಅವಕಾಶಗಳು ಬೇರ್ಯಾವ ದೇಶದ ಆಟಗಾರರಿಗಿಲ್ಲ.

ಹೀಗೆ 90ರ ದಶಕದಲ್ಲಿ ಕಮರ್ಶಿಯಲ್ ಆಗಿ ಗುರುತಿಸಿಕೊಂಡವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್. ತಮ್ಮ ಸಂಸ್ಥೆಗಳ ಬ್ರಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ಕಂಪನಿಗಳು ತೂದಿಗಾಲಿನಲ್ಲಿ ನಿಂತಿದ್ದವು. ಅವರ ಬಳಿಕ ಆ ಜಾಗಕ್ಕೆ ಬಂದವರು ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ.

ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸುವ ಆಟಗಾರರ ಬ್ಯಾಟ್ ಗಳ ಮೇಲೆ ತಮ್ಮ ಸಂಸ್ಥೆಯ ಚಿಹ್ನೆಗಳನ್ನು ಅಂಟಿಸಿಕೊಳ್ಳಲು ಭಾರತೀಯ ಬ್ಯಾಸ್ಟ್ ಮನ್ ಗಳಿಗೆ ಪ್ರತಿಷ್ಥಿತ ಸಂಸ್ಥೆಗಳು ಅತೀ ಹೆಚ್ಚು ಮೊತ್ತ ನೀಡುತ್ತೀವೆ. ಅದರಂತೆ ಇದೀಗ ಟಾಪ್ ಒಂದನೇ ಸ್ಥಾನದಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಇದ್ದಾರೆ.

2011ರ ವಿಶ್ವಕಪ್ ಗೆಲುವಿಗೆ ಕಾರಣರಾದ ಎಂಎಸ್ ಧೋನಿಗೆ ಸ್ಪಾರ್ಥನ್ ಸಂಸ್ಥೆ 6 ಕೋಟಿ ನೀಡಿದೆ. ಇದೀಗ ಧೋನಿಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಮೇಲೆ ಎಂಆರ್ಎಫ್ ಸಂಸ್ಥೆಯ ಸ್ಟಿಕರ್ ಅಂಟಿಸಿಕೊಳ್ಳಲು 8 ಕೋಟಿ ನೀಡಿದೆ.

ಇನ್ನು ಯುವರಾಜ್ ಸಿಂಗ್ ಗೆ ಪುಮಾ ಸಂಸ್ಥೆ 4 ಕೋಟಿ. ರೋಹಿತ್ ಶರ್ಮಾಗೆ ಸೆಟಾ ಸಂಸ್ಥೆ 3 ಕೋಟಿ. ಶಿಖರ್ ಧವನ್ ಗೆ ಎಂಆರ್ಎಫ್ ಸಂಸ್ಥೆ 3 ಹಾಗೂ ಸುರೇಶ್ ರೈನಾಗೆ ಸೆಟಾ ಸಂಸ್ಥೆ 2.5ರಿಂದ 3 ಕೋಟಿ ನೀಡಿದೆ.

ಭಾರತೀಯ ಕ್ರಿಕೆಟಿಗರಂತೆ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಎಬಿಡಿವಿಲಿಯರ್ಸ್ 3.5 ಕೋಟಿ ಹಾಗೂ ವೆಸ್ಟ್ ಇಂಡೀಸ್ ನ ಆಟಗಾರ ಕ್ರಿಸ್ ಗೇಯ್ಲ್ 3 ಕೋಟಿ ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT