ಕ್ರಿಸ್ ಗೇಲ್ - ಶಾರ್ಲೆಟ್ ಎಡ್ವಾರ್ಡೆಸ್ 
ಕ್ರಿಕೆಟ್

ಪತ್ರಕರ್ತೆಯಲ್ಲಿ ಅಶ್ಲೀಲ ಪ್ರಶ್ನೆಗಳನ್ನು ಕೇಳಿ ಫ್ಲರ್ಟ್ ಮಾಡಿದ ಕ್ರಿಸ್ ಗೇಲ್

ತನಗೆ ಸೆಕ್ಸ್ ಬಗ್ಗೆ ಇರುವ ನಿಲುವನ್ನು ಮುಕ್ತವಾಗಿ ಹೇಳಿದ ಗೇಲ್, ನಿಮ್ಮ ಕತೆ ಹೇಗೆ? ಎಂದು ಪತ್ರಕರ್ತೆಯಲ್ಲಿ ಕೇಳಿದ್ದಾರೆ...

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಓಪನರ್ ಕ್ರಿಸ್ ಗೇಲ್ ಮತ್ತೊಮ್ಮೆ ವಿವಾದಕ್ಕೆ ಸಿಲುಕುವ ಸಾಧ್ಯತೆಯಿದೆ. ಈ ಹಿಂದೆ ಪತ್ರಕರ್ತೆಯೊಂದಿಗೆ ಅನುಚಿತ ವರ್ತನೆ ಮಾಡಿ ಗೇಲ್ ವಿವಾದಕ್ಕೀಡಾಗಿದ್ದು ಮಾತ್ರವಲ್ಲದೆ ಬಹು ಮೊತ್ತದ ದಂಡ ತೆರಬೇಕಾಗಿ ಬಂದಿತ್ತು.
ಇದೀಗ ಬೆಂಗಳೂರಿನಲ್ಲಿ ಟೈಮ್ಸ್ ಮ್ಯಾಗಜಿನ್‌ನ ಶಾರ್ಲೆಟ್ ಎಡ್ವಾರ್ಡೆಸ್ ಎಂಬ ಪತ್ರಕರ್ತೆಗೆ ಸಂದರ್ಶನ ನೀಡುವ ವೇಳೆ ಸೆಕ್ಸ್ ಬಗ್ಗೆ ಪ್ರಶ್ನೆಗಳನ್ನು ಕೇಳಿ ಗೇಲ್ ಮುಜುಗರಕ್ಕೀಡಾಗುವಂತೆ ಮಾಡಿದ್ದಾರೆ. 
ತನಗೆ ಸೆಕ್ಸ್ ಬಗ್ಗೆ ಇರುವ ನಿಲುವನ್ನು ಮುಕ್ತವಾಗಿ ಹೇಳಿದ ಗೇಲ್, ನಿಮ್ಮ ಕತೆ ಹೇಗೆ? ಎಂದು ಪತ್ರಕರ್ತೆಯಲ್ಲಿ ಕೇಳಿದ್ದಾರೆ.
ಸಂದರ್ಶನದಲ್ಲಿ ಮಹಿಳೆಯರ ಸಮಾನತೆ ಬಗ್ಗೆ ಮಾತನಾಡಿದ ಗೇಲ್, ಮಹಿಳೆಯರಿಗೆ ಯಾವುದು ಇಷ್ಟವೋ ಅವರು ಅದನ್ನು ಮಾಡಬಹುದು. ಜಮೈಕಾದ ಮಹಿಳೆಯರು ಮುಕ್ತವಾಗಿ ಎಲ್ಲವನ್ನೂ ಹೇಳುತ್ತಾರೆ ಎಂದು ಹೇಳಿದ ಗೇಲ್ ಮಹಿಳೆಯರು ಪುರುಷರನ್ನು ಓಲೈಸಿಕೊಳ್ಳಬೇಕು, ಅದು ಹೇಗೆ? ಎಂಬುದನ್ನೂ ವಿವರಿಸಿದ್ದಾರೆ.
ಓರ್ವ ಮಹಿಳೆಯಲ್ಲಿ ಕೇಳಬಾರದ ಪ್ರಶ್ನೆಗಳನ್ನೆಲ್ಲಾ ಗೇಲ್ ಪತ್ರಕರ್ತೆಯಲ್ಲಿ ಕೇಳಿದ್ದು, ಆತನ ಪ್ರಶ್ನೆಗಳೇ ಮುಜುಗರವುಂಟು ಮಾಡಿವೆ.
ಕಳೆದ 10 ವರ್ಷದಿಂದ ನತಾಶಾ ಬೆರಿಡ್ಜ್ ಎಂಬಾಕೆ ಗೇಲ್‌ನ ಪ್ರೇಯಸಿಯಾಗಿದ್ದು, ಈ ಸಂಬಂಧದಲ್ಲಿ ಹೆಣ್ಣು ಮಗುವೊಂದರ ಅಪ್ಪನಾಗಿದ್ದಾರೆ ಗೇಲ್. 
10 ಸಾವಿರ ಹೆಣ್ಮಕ್ಕಳು ನನಗಾಗಿ ಹಂಬಲಿಸುತ್ತಾರೆ, ನಾನು ಸುರಸುಂದರಾಂಗ. ನಾನಿಲ್ಲಿರುವ ಕಾರಣ ಸೆಕ್ಸ್ ಮಾಡಿಲ್ಲ ಎಂದು ಹೇಳಿದ ಗೇಲ್‌ಗೆ ನೀವು ಮಹಿಳೆಯರ ಬಳಿ ಹೋಗಿದ್ದೀರಾ? ಎಂದು ಕೇಳಿದ್ದಕ್ಕೆ, ಅಶ್ಲೀಲವಾಗಿ ಉತ್ತರಿಸಿದ್ದಾರೆ.
ಕ್ರಿಸ್ ಗೇಲ್ ಸಂದರ್ಶನದ ಬಗ್ಗೆ ವರದಿಯೊಂದರ ತುಣುಕು ಈ ಟ್ವೀಟ್ ನಲ್ಲಿದೆ.
ಈ ಹಿಂದೆ ಜನವರಿಯಲ್ಲಿ ಆಸ್ಟ್ರೇಲಿಯಾದ ಟಿವಿ ವರದಿಗಾರ್ತಿ ಮೆಲ್ ಮೆಕ್‌ಲಾಲಿನ್ ಜತೆ ಫ್ಲರ್ಟ್ ಮಾಡಿ ಗೇಲ್ ವಿವಾದಕ್ಕೀಡಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT