ವಿಕೆಟ್ ಪಡೆದ ಸಂಭ್ರಮದಲ್ಲಿ ಭಾರತೀಯ ಆಟಗಾರರು 
ಕ್ರಿಕೆಟ್

ಭಾರತೀಯ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿದ ಲಂಕಾ 216ಕ್ಕೆ ಆಲ್ ಔಟ್

ಉತ್ತಮ ಆರಂಭದ ಹೊರತಾಗಿಯೂ ಭಾರತೀಯ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಕೇವಲ 216 ರನ್ ಗಳಿಗೆ ಆಲ್ ಔಟ್ ಆಯಿತು.

ಡಂಬುಲಾ: ಉತ್ತಮ ಆರಂಭದ ಹೊರತಾಗಿಯೂ ಭಾರತೀಯ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಕೇವಲ 216 ರನ್ ಗಳಿಗೆ ಆಲ್ ಔಟ್ ಆಯಿತು.

ಶ್ರೀಲಂಕಾದ ಡಂಬುಲಾದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಉಪುಲ್ ತರಂಗಾ ಪಡೆ ಕೇವಲ 216 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. ಇನ್ನಿಂಗ್ಸ್ ಆರಂಭದಲ್ಲಿ ಭಾರತೀಯ ಬೌಲರ್ ಗಳ ಮೇಲೆ ಸವಾರಿ ಮಾಡಿದ್ದ ಶ್ರೀಲಂಕಾ ದಾಂಡಿಗರು ಮೊದಲ ವಿಕೆಟ್ ಗೆ 74 ರನ್ ಸಿಡಿಸಿದರು. ಆರಂಭಿಕ ಆಟಗಾರ ಡಿಕ್ ವೆಲ್ಲಾ 64 ರನ್ ಸಿಡಿಸಿದರೆ, ಮತ್ತೊರ್ವ ಆಟಗಾರ ಗುಣ ತಿಲಕ 35 ರನ್ ಸಿಡಿಸಿದರು. ಮೊದಲ ವಿಕೆಟ್ ರೂಪದಲ್ಲಿ ಗುಣ ತಿಲಕ ಔಟ್ ಆದರಾದರೂ, 2 ವಿಕೆಟ್ ಗೆ ಜೊತೆಯಾದ ಮೆಂಡಿಸ್ ಹಾಗೂ ಡಿಕ್ ವೆಲ್ ಮತ್ತೆ ಭಾರತೀಯ ಬೌಲರ್ ಗಳನ್ನು ಕಾಡಲಾರಂಭಿಸಿದರು.

ಈ ಹಂತದಲ್ಲಿ ದಾಳಿಗಿಳಿದ ಜಾದವ್ 64 ರನ್ ಗಳಿಸಿದ್ದ ಡಿಕ್ ವೆಲ್ಲಾ ಅವರನ್ನು ಎಲ್ ಬಿ ಬಲೆಗೆ ಕೆಡವಿದರು. ಬಳಿಕ ಕ್ರೀಡಾಂಗಣದಲ್ಲಿ ಆರಂಭವಾಗಿದ್ದೇ ಲಂಕಾ ದಾಂಡಿಗರ ಪೆವಿಲಿಯನ್ ಪರೇಡ್..ಮೆಂಡಿಸ್ 36 ರನ್ ಗಳಿಸಿ ಪಟೇಲ್ ಬೌಲಿಂಗ್ ನಲ್ಲಿ ಔಟಾದರೆ, ನಾಯಕ ತರಂಗಾ 13 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದ ಆಟಗಾರ ಮ್ಯಾಥ್ಯೂಸ್ ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಂತರಾದರೂ, ಅವರಿಗೆ ಲಂಕಾದ ಕೆಳ ಕ್ರಮಾಂಕದ ಆಟಗಾರರು ಉತ್ತಮ ಸಾಥ್ ನೀಡಲಿಲ್ಲ. ಕಾಪುಗಡೇರಾ 1, ಡಿಸೆಲ್ವಾ 2, ಪೆರಾರಾ 0, ಸಂದಕನ್ 5, ಮಾಲಿಂಗಾ 8 ಹಾಗೂ ಫರ್ನಾಂಡೋ 0 ಹೀಗೆ ಯಾವೊಬ್ಬ ಬಾಟ್ಸಮನ್ ಕೂಡ ಎರಡಂಕಿ ಮೊತ್ತವನ್ನೂ ದಾಟಲಿಲ್ಲ.

ಅಂತಿಮವಾಗಿ ಲಂಕಾ ಮೊತ್ತ 2016 ರನ್ ಗಳಾಗಿದ್ದಾಗ ಫರ್ನಾಂಡೋ ಶೂನ್ಯಕ್ಕೆ ಔಟ್ ಆಗುವುದರೊಂದಿಗೆ ಲಂಕಾ ಪಡೆ ಆಲ್ ಔಟ್ ಆಗಿತ್ತು. ಆ ಮೂಲಕ ತರಂಗಾ ಪಡೆ ಭಾರತಕ್ಕೆ ಗೆಲ್ಲಲು 2017 ರನ್ ಗಳ  ಗುರಿ ನೀಡಿತು.

ಭಾರತದ ಪರ ಬುಮ್ರಾ, ಜಾದವ್ ಮತ್ತು ಚಾಹಲ್ ತಲಾ 2 ವಿಕೆಟ್ ಪಡೆದರೆ, ಪಟೇಲ್ 3 ವಿಕೆಟ್ ಪಡೆದು ಮಂಚಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

SCROLL FOR NEXT