ವಿಕೆಟ್ ಪಡೆದ ಸಂಭ್ರಮದಲ್ಲಿ ಭಾರತೀಯ ಆಟಗಾರರು 
ಕ್ರಿಕೆಟ್

ಭಾರತೀಯ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿದ ಲಂಕಾ 216ಕ್ಕೆ ಆಲ್ ಔಟ್

ಉತ್ತಮ ಆರಂಭದ ಹೊರತಾಗಿಯೂ ಭಾರತೀಯ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಕೇವಲ 216 ರನ್ ಗಳಿಗೆ ಆಲ್ ಔಟ್ ಆಯಿತು.

ಡಂಬುಲಾ: ಉತ್ತಮ ಆರಂಭದ ಹೊರತಾಗಿಯೂ ಭಾರತೀಯ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಕೇವಲ 216 ರನ್ ಗಳಿಗೆ ಆಲ್ ಔಟ್ ಆಯಿತು.

ಶ್ರೀಲಂಕಾದ ಡಂಬುಲಾದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಉಪುಲ್ ತರಂಗಾ ಪಡೆ ಕೇವಲ 216 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. ಇನ್ನಿಂಗ್ಸ್ ಆರಂಭದಲ್ಲಿ ಭಾರತೀಯ ಬೌಲರ್ ಗಳ ಮೇಲೆ ಸವಾರಿ ಮಾಡಿದ್ದ ಶ್ರೀಲಂಕಾ ದಾಂಡಿಗರು ಮೊದಲ ವಿಕೆಟ್ ಗೆ 74 ರನ್ ಸಿಡಿಸಿದರು. ಆರಂಭಿಕ ಆಟಗಾರ ಡಿಕ್ ವೆಲ್ಲಾ 64 ರನ್ ಸಿಡಿಸಿದರೆ, ಮತ್ತೊರ್ವ ಆಟಗಾರ ಗುಣ ತಿಲಕ 35 ರನ್ ಸಿಡಿಸಿದರು. ಮೊದಲ ವಿಕೆಟ್ ರೂಪದಲ್ಲಿ ಗುಣ ತಿಲಕ ಔಟ್ ಆದರಾದರೂ, 2 ವಿಕೆಟ್ ಗೆ ಜೊತೆಯಾದ ಮೆಂಡಿಸ್ ಹಾಗೂ ಡಿಕ್ ವೆಲ್ ಮತ್ತೆ ಭಾರತೀಯ ಬೌಲರ್ ಗಳನ್ನು ಕಾಡಲಾರಂಭಿಸಿದರು.

ಈ ಹಂತದಲ್ಲಿ ದಾಳಿಗಿಳಿದ ಜಾದವ್ 64 ರನ್ ಗಳಿಸಿದ್ದ ಡಿಕ್ ವೆಲ್ಲಾ ಅವರನ್ನು ಎಲ್ ಬಿ ಬಲೆಗೆ ಕೆಡವಿದರು. ಬಳಿಕ ಕ್ರೀಡಾಂಗಣದಲ್ಲಿ ಆರಂಭವಾಗಿದ್ದೇ ಲಂಕಾ ದಾಂಡಿಗರ ಪೆವಿಲಿಯನ್ ಪರೇಡ್..ಮೆಂಡಿಸ್ 36 ರನ್ ಗಳಿಸಿ ಪಟೇಲ್ ಬೌಲಿಂಗ್ ನಲ್ಲಿ ಔಟಾದರೆ, ನಾಯಕ ತರಂಗಾ 13 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದ ಆಟಗಾರ ಮ್ಯಾಥ್ಯೂಸ್ ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಂತರಾದರೂ, ಅವರಿಗೆ ಲಂಕಾದ ಕೆಳ ಕ್ರಮಾಂಕದ ಆಟಗಾರರು ಉತ್ತಮ ಸಾಥ್ ನೀಡಲಿಲ್ಲ. ಕಾಪುಗಡೇರಾ 1, ಡಿಸೆಲ್ವಾ 2, ಪೆರಾರಾ 0, ಸಂದಕನ್ 5, ಮಾಲಿಂಗಾ 8 ಹಾಗೂ ಫರ್ನಾಂಡೋ 0 ಹೀಗೆ ಯಾವೊಬ್ಬ ಬಾಟ್ಸಮನ್ ಕೂಡ ಎರಡಂಕಿ ಮೊತ್ತವನ್ನೂ ದಾಟಲಿಲ್ಲ.

ಅಂತಿಮವಾಗಿ ಲಂಕಾ ಮೊತ್ತ 2016 ರನ್ ಗಳಾಗಿದ್ದಾಗ ಫರ್ನಾಂಡೋ ಶೂನ್ಯಕ್ಕೆ ಔಟ್ ಆಗುವುದರೊಂದಿಗೆ ಲಂಕಾ ಪಡೆ ಆಲ್ ಔಟ್ ಆಗಿತ್ತು. ಆ ಮೂಲಕ ತರಂಗಾ ಪಡೆ ಭಾರತಕ್ಕೆ ಗೆಲ್ಲಲು 2017 ರನ್ ಗಳ  ಗುರಿ ನೀಡಿತು.

ಭಾರತದ ಪರ ಬುಮ್ರಾ, ಜಾದವ್ ಮತ್ತು ಚಾಹಲ್ ತಲಾ 2 ವಿಕೆಟ್ ಪಡೆದರೆ, ಪಟೇಲ್ 3 ವಿಕೆಟ್ ಪಡೆದು ಮಂಚಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT