ಕ್ರಿಕೆಟ್

3ನೇ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

Srinivasamurthy VN
ವಿಶಾಖಪಟ್ಟಣ: ಭಾರತ ಮತ್ತು ಶ್ರೀಲಂಕಾ ನಡುವೆ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿ ಕೊಂಡಿದೆ.
3 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಉಭಯ ತಂಡಗಳು 1-1 ಅಂತರದಲ್ಲಿ ಸಮಬಲ ಸಾಧಿಸಿದ್ದು, ಹೀಗಾಗಿ ಅಂತಿಮ ಪಂದ್ಯ ನಿರ್ಣಾಯಕವಾಗಲಿದೆ. ಇನ್ನು ಈ ಹಿಂದೆ ಶ್ರೀಲಂಕಾದಲ್ಲಿ ನಡೆದಿದ್ದ ಏಕದಿನ ಸರಣಿಯನ್ನು ಭಾರತ  ವೈಟ್ ವಾಶ್ ಮಾಡಿತ್ತು. ಈ ಸೇಡನ್ನು ತೀರಿಸಿಕೊಳ್ಳಲು ಶ್ರೀಲಂಕಾಗೆ ಇದು ಉತ್ತಮ ಅವಕಾಶವಾಗಿದೆ. ಅಂತೆಯೇ ಭಾರತ ತನ್ನ ಸರಣಿ ಜಯ ಜೈತ್ರ ಮುಂದುವರೆಸಲೂ ಇದೂ ಸೂಕ್ತ ಅವಕಾಶವಾಗಿದೆ.
ಅಂತೆಯೇ ನಾಯಕ ರೋಹಿತ್ ಶರ್ಮಾಗೆ ತಮ್ಮ ನಾಯಕತ್ವ ಸಾಬೀತು ಪಡಿಸಲು ಇದು ಉತ್ತಮ ವೇದಿಕೆಯಾಗಿದ್ದು, ಇದೇ ಕಾರಣಕ್ಕೆ ಭಾರತಕ್ಕೂ ಈ ಪಂದ್ಯ ಮಹತ್ವದ್ದಾಗಿದೆ.
ಇನ್ನು ಎರಡು ವರ್ಷಗಳಿಂದ ತವರಿನಲ್ಲಿ ಸರಣಿ ಸೋಲು ಕಾಣದ ಭಾರತ ಮತ್ತು ಇಲ್ಲಿ ಮೊತ್ತ ಮೊದಲ ಸರಣಿ ಜಯದ ಕನಸು ಕಾಣುತ್ತಿರುವ ಶ್ರೀಲಂಕಾ ತಂಡದವರು ಭಾನುವಾರ ಜಯದ ಕನಸು ಹೊತ್ತು ಇಲ್ಲಿ ಅಂಗಣಕ್ಕೆ  ಇಳಿದಿದ್ದಾರೆ. 2015ರಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಐದು ಪಂದ್ಯಗಳ ಏಕದಿನ ಸರಣಿ ಸೋತ ನಂತರ ಭಾರತ ತವರಿನ ಎಲ್ಲ ಸರಣಿಗಳನ್ನು ತನ್ನದಾಗಿಸಿಕೊಂಡಿದೆ. 
SCROLL FOR NEXT