ರಣಜಿ ಕ್ರಿಕೆಟ್: ಸೆಮಿ ಫೈನಲ್ ನಲ್ಲಿ ಕರ್ನಾಟಕಕ್ಕೆ 5 ರನ್ ಗಳ ವೀರೋಚಿತ ಸೋಲು
ಕೋಲ್ಕತ್ತ: ರಣಜಿ ತ್ರೋಫಿ ಕ್ರಿಕೆಟ್ ಸರಣಿ ಪ್ರಾರಂಬದಿಂದ ಒಂದೂ ಸೋಲು ಕಾಣದೆ ಸೆಮಿ ಫೈನಲ್ಸ್ ತಲುಪಿದ್ದ ಕರ್ನಾಟಕ ತಂಡ ವಿದರ್ಭದ ಎದುರು 5 ರನ್ ವೀರೋಚಿತ ಸೋಲು ದಾಖಲಿಸಿದೆ. ಇದರೊಡನೆ ಕರ್ನಾಟಕದ ಫೈನಲ್ ಕನಸು ನುಚ್ಚು ನೂರಾಗಿದೆ.
ನಾಲ್ಕನೇ ದಿನದ ಅಂತ್ಯಕ್ಕೆ 111 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಕಡೆಯ ದಿನದಾಟದಲ್ಲಿ ಗೆಲ್ಲಲು ಅಗತ್ಯವಾಗಿದ್ದ 87 ರನ್ ಗಳಿಸುವಲ್ಲಿ ವಿಫಲವಾಯಿತು. ಈ ನಡುವೆ ಅಭಿಮನ್ಯು ಮಿಥುನ್ (33) ಮತ್ತು ಶ್ರೇಯಸ್ ಗೋಪಾಲ್ (23*) ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ವಿದರ್ಭ ಪರ ರಜನೀಶ್ ಗುರ್ಬಾನಿ ಮಾರಕ ಬೌಲಿಂಗ್ ದಾಳಿಗೆ ಕರ್ನಾಟಕದ ಆಟಗಾರರು ಬೆದರುಗೊಂಬೆಗಳಾದರು.
ರಜನೀಶ್ ಗರ್ಬಾನಿ 68 ರನ್ಗಳನ್ನು ಖರ್ಚು ಮಾಡಿ 7 ವಿಕೆಟ್ ಸಂಪಾದಿಸುವ ಮೂಲಕ ವಿದರ್ಭ ತಂದದ ಗೆಲುವಿಗೆ ಕಾರಣಕರ್ತರಾದರು. ಇವರು ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗಳಿಸಿದರೆ ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪಡೆದು ಮಿಂಚಿದ್ದರು.ಹೀಗೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಗರ್ಬಾನಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಮುಂದಿನ ಫೈನಲ್ ಪಂದ್ಯ ಇಂದೋರ್ ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯಲಿದ್ದು ವಿದರ್ಭ ತಂಡ ದೆಹಲಿಯೊಡನೆ ಸೆಣಸಲಿದೆ.
ಈ ಸೋಲಿನೊಡನೆ ಕರ್ನಾಟಕವು 3 ವರ್ಷಗಳ ಬಳಿಕ ರಣಜಿ ಟೂರ್ನಿ ಫೈನಲ್ ತಲುಪುವ ಅವಕಾಶವನ್ನು ಕಳೆದುಕೊಂಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos