ಜೇನುನೊಣ ದಾಳಿ 
ಕ್ರಿಕೆಟ್

ಜೇನುನೊಣ ದಾಳಿಗೆ ಹೆದರಿದ ಆಫ್ರಿಕಾ-ಶ್ರೀಲಂಕಾ ಆಟಗಾರರು

ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ವೇಳೆ ಜೇನುನೊಣಗಳು ಆಟಗಾರರ ಮೇಲೆ ದಾಳಿ ಮಾಡಿದಂತಾ ಘಟನೆ ವರದಿಯಾಗಿದೆ...

ಜೊಹಾನ್ಸ್ ಬರ್ಗ್: ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ವೇಳೆ ಜೇನುನೊಣಗಳು ಆಟಗಾರರ ಮೇಲೆ ದಾಳಿ ಮಾಡಿದಂತಾ ಘಟನೆ ವರದಿಯಾಗಿದೆ.

ಜೊಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿದ್ದ 3ನೇ ಏಕದಿನ ಪಂದ್ಯದ ವೇಳೆ ಜೇನುನೊಣಗಳು ದಾಳಿ ಮಾಡಿದ್ದು ಜೇನುನೊಣಗಳಿಂದ ತಪ್ಪಿಸಿಕೊಳ್ಳಲು ಆಟಗಾರರು ನೆಲದ ಮೇಲೆ ಮಲಗಿದ್ದರು. ಇದರಿಂದ ಸರಿಸುಮಾರು 1 ಗಂಟೆ ಕಾಲ ಆಟಕ್ಕೆ ಅಡಚಣೆ ಉಂಟಾಗಿತ್ತು.

ಶ್ರೀಲಂಕಾ ಬ್ಯಾಟಿಂಗ್ ಮಾಡುತ್ತಿದ್ದಾಗ 25ನೇ ಓವರ್ ನಲ್ಲಿ 4ನೇ ವಿಕೆಟ್ ಕಳೆದುಕೊಂಡಿತ್ತು. ಬಳಿಕ ಕ್ರೀಸ್ ಗೆ ಇಳಿದ ಅಸೆಲ ಗುಣರತ್ನೆ ಮೊದಲ ಎಸೆತ ಎದುರಿಸಲು ಸಿದ್ಧರಾದಾಗ ಜೇನುನೊಣ ನುಗ್ಗಿದರಿಂದ ಸ್ಲಿಪ್ ನಲ್ಲಿದ್ದ ಫೀಲ್ಡರ್ ಗಳು ಮೈದಾನದಲ್ಲೇ ಮಲಗಿ ರಕ್ಷಣೆ ಪಡೆದರು. ನಂತರ ಆಟ ಮುಂದುವರಿದರೂ 27ನೇ ಓವರ್ ವೇಳೆ ಜೇನುನೊಣಗಳ ಹಿಂಡು ಮತ್ತೆ ದಾಳಿ ಮಾಡಿದ್ದರಿಂದ ಅಂಪೈರ್ ಗಳು ಆಟ ನಿಲ್ಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No friendship only business: ತೈಲ ಬೇಕಾದರೆ..; ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದ ಭಾರತಕ್ಕೆ ಕೈ ಕೊಟ್ಟ ರಷ್ಯಾ!

ಆತ ಅಪ್ಪಿಕೊಳ್ಳುತ್ತಾರೆ, ಕಣ್ಣು ಹೊಡೆಯುತ್ತಾರೆ; ಪ್ರಿಯಾಂಕಾ ಉತ್ತಮ ವಿಪಕ್ಷ ನಾಯಕಿಯಾಗಬಹುದು: ರಾಹುಲ್ ವಿರುದ್ಧ ಕಿರಣ್ ರಿಜಿಜು ಟೀಕಾ ಪ್ರಹಾರ

ಮಧ್ಯಪ್ರಾಚ್ಯ ಯುದ್ಧ: ಅಡುಗೆ ಅನಿಲ ಕೊರತೆ ಬೆನ್ನಲ್ಲೆ ಏರ್ ಇಂಡಿಯಾ ಸಮೂಹದಿಂದ ಬೆಲೆ ಏರಿಕೆ ಶಾಕ್! Fuel surcharge ಏರಿಕೆ ಘೋಷಣೆ

ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರದ ಭರವಸೆ: ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆದ ಸರ್ಕಾರಿ ವೈದ್ಯರು!

ಕಲ್ಯಾಣ ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣ: ರಾಜ್ಯ ಸರ್ಕಾರ ಪ್ರಸ್ತಾಪ

SCROLL FOR NEXT