ಹರ್ಮನ್ ಪ್ರೀತ್ ಕೌರ್, ಸುಷ್ಮಾ ವರ್ಮಾ
ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಸೋತಿರಬಹುದು ಆದರೆ ದೇಶದ ಜನತೆಯ ಮನಸನ್ನು ಗೆದ್ದಿದ್ದಾರೆ. ಅಂತಹ ಆಟಗಾರ್ತಿಯರಿಗೆ ಉನ್ನತ ಹುದ್ದೆಯ ಆಫರ್ ಗಳು ಒದಗಿಬಂದಿದೆ.
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಹರ್ಮನ್ ಪ್ರೀತ್ ಕೌರ್ ಮತ್ತು ಸುಷ್ಮಾ ವರ್ಮಾಗೆ ಪೊಲೀಸ್ ಉಪ ಅಧೀಕ್ಷಕ ಹುದ್ದೆಯ ಆಫರ್ ಬಂದಿದೆ. ಕೌರ್ ಅವರಿಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಸುಷ್ಮಾ ವರ್ಮಾಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ಡಿಎಸ್ಪಿ ಹುದ್ದೆಯ ಆಫರ್ ನೀಡಿದ್ದಾರೆ.
ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸೆಣೆಸಿತ್ತು. ಆದರೆ 9 ರನ್ ಗಳ ಅಂತರದಲ್ಲಿ ಸೋತು ಭಾರತ ತಂಡ ನಿರಾಸೆ ಮೂಡಿಸಿತ್ತು. ಈ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು ತಂಡವನ್ನು ಗೆಲುವಿನ ದಡ ಮುಟ್ಟಿಸಲು ಕಠಿಣ ಶ್ರಮ ವಹಿಸಿದ್ದರು. ಈ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದ ಕೌರ್ ಪೂನಮ್ ರಾವುತ್ ಜತೆಗೆ 95 ರನ್ ಗಳ ಜತೆಯಾಟವಾಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos