ಕ್ರಿಕೆಟ್

ಮೈದಾನದಲ್ಲಿ ಕೊಹ್ಲಿ ಓರ್ವ ಸರ್ಜನ್ ತರ ಕೆಲಸ ಮಾಡುತ್ತಾರೆ: ಡಿವಿಲಿಯರ್ಸ್

Vishwanath S
ಓವಲ್(ಲಂಡನ್): ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಫೈನಲ್ ಪಂದ್ಯ ನಾಳೆ ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ ಡಿವಿಲಿಯರ್ಸ್ ಶುಭ ಕೋರಿದ್ದಾರೆ. 
ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ನಾನು ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ. ಮೈದಾನದಲ್ಲಿ ಸಂದಿಗ್ಧ ಸಂದರ್ಭಗಳಲ್ಲಿ ತಂಡದ ಮೇಲಿನ ಒತ್ತಡವನ್ನು ಹೇಗೆ ನಿವಾರಿಸಬೇಕು ಎಂಬುದು ಕೊಹ್ಲಿಗೆ ತಿಳಿದಿದೆ. ಮೈದಾನದಲ್ಲಿ ಅವರೊಬ್ಬ ಸರ್ಜನ್ ತರ ಕೆಲಸ ಮಾಡುತ್ತಾರೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. 
ಇನ್ನು ವಿರಾಟ್ ಕೊಹ್ಲಿ ಸರಿಯಾದ ಸರಮಯದಲ್ಲಿ ಎದುರಾಳಿ ತಂಡದ ಮೇಲೆ ಒತ್ತಡ ಹಾಕುವುದರ ಜತೆಗೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಕಲೆ ಸಹ ಅವರಿಗೆ ಚನ್ನಾಗಿ ಕರಗತವಾಗಿದೆ ಎಂದರು. 
ವಿರಾಟ್ ಕೊಹ್ಲಿಯ ಸಾಮರ್ಥ್ಯದ ಬಗ್ಗೆ ಯಾವುದೇ ಸಂದೇಹ ಬೇಡ. ಬಹಳಷ್ಟು ಹಾರ್ಡ್ ವರ್ಕ್ ಮಾಡಿರುವುದರಿಂದ ಟೀಂ ಇಂಡಿಯಾ ಫೈನಲ್ ಗೆ ಬಂದು ತಲುಪಿದೆ. ಅವರ ಶಕ್ತಿ-ಸಾಮರ್ಥ್ಯ ಏನು ಎಂಬುದು ನನಗೆ ಗೊತ್ತಿದೆ ಎಂದು ಎಬಿಡಿ ಹೇಳಿದ್ದಾರೆ. 
SCROLL FOR NEXT