ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದ್ದು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ಭಾರತಕ್ಕೆ ಜೈಕಾರ ಹಾಕಲಿದ್ದಾರೆ.
ಸರ್ಫರಾಜ್ ಅಹಮ್ಮದ್ ಚಿಕ್ಕಪ್ಪ ಮೆಹಬೂಬ್ ಹಸನ್ ಉತ್ತರ ಪ್ರದೇಶದ ಎತಾವಾದಲ್ಲಿ ನೆಲೆಸಿದ್ದು ಫೈನಲ್ ಪಂದ್ಯದಲ್ಲಿ ಭಾರತವನ್ನು ಬೆಂಬಲಿಸಲಿದ್ದು ಪಂದ್ಯವನ್ನು ಗೆದ್ದು ಭಾರತ ಹಾಲಿ ಚಾಂಪಿಯನ್ ಪಟ್ಟವನ್ನು ಮುಂದುವರೆಸಲಿ ಎಂದು ಆಶಿಸಿದ್ದಾರೆ.
ಸರ್ಫರಾಜ್ ಪಾಕಿಸ್ತಾನ ತಂಡದಲ್ಲಿ ಆಡುತ್ತಿದ್ದಾನೆ. ಆದರೆ ನಾನು ನನ್ನ ಮಕ್ಕಳು ಹಿಂದಿನಿಂದಲೂ ಟೀಂ ಇಂಡಿಯಾವನ್ನು ಬೆಂಬಲಿಸುತ್ತಾ ಬಂದಿದ್ದೇವೆ ಎಂದು ಪತ್ರಿಕೆಯೊಂದರ ಜತೆ ಮಾತನಾಡಿದ್ದಾರೆ.
ಟೀಂ ಇಂಡಿಯಾದಲ್ಲಿ ಅತ್ಯುತ್ತಮ ಆಟಗಾರರಿದ್ದು ಬಲಿಷ್ಠ ತಂಡವಾಗಿದೆ. ಆದರೆ ಪಾಕಿಸ್ತಾನ ತಂಡದಲ್ಲಿ ಅನಾನುಭವಿ ಆಟಗಾರರಿಂದ ಕೂಡಿದ್ದು ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲುವ ಫೇವರಟ್ ತಂಡವಾಗಿದೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos