ನಾಗ್ಪುರ: ಪ್ರವಾಸಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು ಈ ನಂತರದ ಟಿ20 ಸರಣಿಯಲ್ಲಿ ಕೊಹ್ಲಿ ಆಡುತ್ತಾರಾ ಇಲ್ಲ ಎಂಬುದನ್ನು ತೀರ್ಮಾನಿಸಲಾಗಿಲ್ಲ ಎಂದು ಬಿಸಿಸಿಐನ ಅಧಿಕಾರಿಗಳು ತಿಳಿಸಿದ್ದಾರೆ.
ಆಯ್ಕೆ ಸಮಿತಿಗೆ ವಿರಾಟ್ ಕೊಹ್ಲಿ ತಮಗೆ ವಿಶ್ರಾಂತಿ ಬೇಕು ಎಂಬುದನ್ನು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಟಿ20 ತಂಡವನ್ನು ಘೋಷಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 12ರ ತನಕ ವಿರಾಟ್ ಕೊಹ್ಲಿ ಅವರು ಕೆಲ ವೈಯಕ್ತಿಕ ಬದ್ಧತೆಗಳನ್ನು ಹೊಂದಿದ್ದಾರೆ. ಆ ನಂತರ ಅವರು ವಿಶ್ರಾಂತಿ ಪಡೆಯುವ ಅಥವಾ ಟಿ20 ಸರಣಿಯಲ್ಲಿ ಆಡುತ್ತಾರಾ ಎಂಬುದು ತಿಳಿಯಲಿದೆ.
ಮುಂದಿನ ವಾರ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಸಲುವಾಗಿ ಆಯ್ಕೆ ಸಮಿತಿ ಕೋಚ್ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿಯನ್ನು ಸಂಪರ್ಕಿಸಲಿದ್ದು ಆ ಸಮಯದಲ್ಲಿ ವಿರಾಟ್ ಕೊಹ್ಲಿ ಆಡುವ ಬಗ್ಗೆ ಇತ್ಯಾರ್ಥವಾಗಲಿದೆ ಎಂದರು.
ಲಂಕಾ ವಿರುದ್ಧದ ಟಿ20 ಸರಣಿ ಡಿಸೆಂಬರ್ 20ರಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಕಟ್ಟಕ್ ನಲ್ಲಿ ನಡೆಯಲಿದ್ದು ಮುಂದಿನ ಪಂದ್ಯಗಳು 22 ಮತ್ತು 24ರಂದು ಇಂದೋರ್ ಮತ್ತು ವಿಶಾಖಪಟ್ಟಂನಲ್ಲಿ ನಡೆಯಲಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos