ರನ್ ಮಷೀನ್ ಕೊಹ್ಲಿಗೆ ಕ್ರಿಕೆಟ್ ದೇವರು ಕೊಟ್ರು ಟಿಪ್ಸ್
ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರ ಶತಕ, ಉತ್ತಮ ಪ್ರದರ್ಶನದ ನಡುವೆಯೂ ಭಾರತ ಇಂಗ್ಲೆಂಡ್ ವಿರುದ್ಧ ಸೋತಿದ್ದು, ರನ್ ಮಷೀನ್ ಕೊಹ್ಲಿಗೆ ಕ್ರಿಕೆಟ್ ದೇವರು ಕೆಲವು ಟಿಪ್ಸ್ ಗಳನ್ನು ನೀಡಿದ್ದಾರೆ.
24 ವರ್ಷದ ತಮ್ಮ ವೃತ್ತಿ ಜೀವನದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ತೆಂಡೂಲ್ಕರ್ ರನ್ ಮಷೀನ್ ಆಗಿದ್ದರು. ಈಗ ಕೊಹ್ಲಿ ಭಾರತದ ಬ್ಯಾಟಿಂಗ್ ಲೇನ್ ನ ಆಧಾರಗಳಲ್ಲಿ ಪ್ರಮುಖರಾಗಿದ್ದು, ಎಲ್ಲಾ ದೃಷ್ಟಿಯಿಂದಲೂ ವಿರಾಟ್ ಕೊಹ್ಲಿಗೆ ತೆಂಡೂಲ್ಕರ್ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಕೊಹ್ಲಿಗೆ ಏನು ಸಲಹೆ ನೀಡಲು ಬಯಸುವಿರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿನ್, ಕೊಹ್ಲಿ ಅದ್ಭುತ ಕ್ಷಮತೆ ಹೊಂದಿದ್ದಾರೆ, ಅದನ್ನು ಮುಂದುವರೆಸಿ ಎಂದು ಸಲಹೆ ನೀಡುತ್ತೇನೆ, ನಿಮ್ಮ ಸುತ್ತ ಏನು ನಡೆಯುತ್ತಿದೆ ಎಂಬ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ, ನೀವು ಏನನ್ನು ಸಾಧಿಸಬೇಕೆಂದುಕೊಂಡಿದ್ದೀರೋ ಅದರ ಬಗ್ಗೆ ಗಮನ ಕೇಂದ್ರೀಕರಿಸಿ ಎಂದು ಹೇಳಿದ್ದಾರೆ.
ವೃತ್ತಿ ಜೀವನದಲ್ಲಿ ಹಲವಾರು ರೀತಿಯ ಹೇಳಿಕೆಗಳು ಬರುತ್ತವೆ, ಆದರೆ ನಿಮ್ಮ ಗುರಿ ಸ್ಪಷ್ಟವಾಗಿದ್ದರೆ ಫಲಿತಾಂಶ ನಿಮ್ಮನ್ನು ಹಿಂಬಾಲಿಸುತ್ತವೆ ಎಂದು ತೆಂಡೂಲ್ಕರ್ ಕೊಹ್ಲಿಗೆ ಸಲಹೆ ನೀಡಿದ್ದಾರೆ. ಎಷ್ಟೇ ರನ್ ಗಳಿಸಿದರೂ ಬ್ಯಾಟ್ಸ್ ಮನ್ ಗೆ ತೃಪ್ತಿ ಇರಬಾರದು, ನನ್ನದೇ ಅನುಭವದಿಂದ ಸಲಹೆ ನೀಡುವುದಾದರೆ ಎಷ್ಟೇ ರನ್ ಗಳಿಸಿದರೂ ಅದು ಸಾಲದು, ವಿರಾಟ್ ಕೊಹ್ಲಿಯಲ್ಲೂ ಇದೇ ತುಡಿತವನ್ನು ಕಾಣಬಹುದಾಗಿದೆ, ಎಷ್ಟೇ ರನ್ ಗಳಿಸಿದರೂ ಅದು ಅವರಿಗೆ ಸಾಲುವುದಿಲ್ಲ. ನೀವು ತೃಪ್ತಿಪಟ್ಟಾಗಷ್ಟೇ ನಿಮ್ಮ ಪತನ ಪ್ರಾರಂಭವಾಗುತ್ತದೆ ಎಂದು ಸಚಿನ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos