ಕ್ರಿಕೆಟ್

ಅಂತಿಮ ಏಕದಿನ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

Raghavendra Adiga
ಸೆಂಚುರಿಯನ್{ದಕ್ಷಿಣ ಆಫ್ರಿಕಾ}: ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಆರನೇ ಹಾಗೂ ಅಂತಿಮ ಏಕದಿನ ಪಂದ್ಯ ಇಂದು ಸೆಂಚುರಿಯನ್ ನ ಸೂಪರ್ ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ. ಪಂದ್ಯದ ಆರಂಭಕ್ಕೆ ಮುನ್ನ ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಇದಾಗಲೇ 4-1 ಅಂತರದಲ್ಲಿ ಸರಣಿ ಜಯಿಸಿರುವ ಟೀಂ ಇಂಡಿಯಾಗೆ ಈ ಪಂದ್ಯವನ್ನೂ ಜಯಿಸುವ ಇರಾದೆ ಇದೆ. ಇದಾಗ್ಯೂ ಈ ಬಾರಿ ಕೊಹ್ಲಿ ಪಡೆಯ ಉತ್ತಮ ಆಟಗಾರನಾದ ಭುವನೇಶ್ವರ್ ಕುಮಾರ್ ಗೆ ವಿಶ್ರಾಂತಿ ನೀಡಲಾಗಿದೆ. ಭುವಿ ಸ್ಥಾನದಲ್ಲಿ ಯುವ ಕ್ರಿಕೆಟಿಗ, ವೇಗಿ ಶಾರ್ದೂಲ್ ಠಾಕೂರ್‌ ಕಣಕ್ಕಿಳಿಯಲಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ತಂಡದಲ್ಲಿ ಸಹ ಸಾಕಷ್ಟು ಬದಲಾವಣೆ ಆಗಿದ್ದು ಕ್ರಿಸ್ ಮೊರಿಸ್, ಫರ್ಹಾನ್ ಬೆಹಾರ್ಡಿನ್, ಇಮ್ರಾನ್ ತಾಹೀರ್ ಹಾಗೂ ಖಾಯಾ ಝೊಂಡೊ ಇವರುಗಳು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. 
SCROLL FOR NEXT