ಸಂಗ್ರಹ ಚಿತ್ರ 
ಕ್ರಿಕೆಟ್

ಶೂ ಧರಿಸಿ ಇನ್ನೂ ವೇಗವಾಗಿ ಓಡಬಹುದು ಎಂದ ಗಿಬ್ಸ್ ಗೆ ಅಶ್ವಿನ್ ಕೊಟ್ಟ ತಿರುಗೇಟು ಹೇಗಿತ್ತು ಗೊತ್ತಾ?

ಭಾರತದ ಕ್ರಿಕೆಟಿಗ ರವಿಚಂದ್ರನ್‌ ಅಶ್ವಿನ್‌ ಅವರ ಕಾಲೆಳೆಯಲು ಹೋಗಿ ದಕ್ಷಿಣ ಆಫ್ರಿಕಾದ ಮಾಜಿ ಸ್ಫೋಟಕ ಬ್ಯಾಟ್ಸಮನ್ ಹರ್ಷಲ್ ಗಿಬ್ಸ್ ಮುಖಭಂಗಕ್ಕೀಡಾಗಿದ್ದಾರೆ.

ನವದೆಹಲಿ: ಭಾರತದ ಕ್ರಿಕೆಟಿಗ ರವಿಚಂದ್ರನ್‌ ಅಶ್ವಿನ್‌ ಅವರ ಕಾಲೆಳೆಯಲು ಹೋಗಿ ದಕ್ಷಿಣ ಆಫ್ರಿಕಾದ ಮಾಜಿ ಸ್ಫೋಟಕ ಬ್ಯಾಟ್ಸಮನ್ ಹರ್ಷಲ್ ಗಿಬ್ಸ್ ಮುಖಭಂಗಕ್ಕೀಡಾಗಿದ್ದಾರೆ.
ಹೌದು.. ಭಾರತದ ಆರ್ ಅಶ್ವಿನ್ ಹಾಗೂ ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ ಹರ್ಷಲ್‌ ಗಿಬ್ಸ್‌ ನಡುವೆ ಸೋಮವಾರ ಟ್ವೀಟ್‌ ಸಮರ ತಾರಕಕ್ಕೇರಿತ್ತು. ಶೂ ಬ್ರ್ಯಾಂಡ್‌ ವೊಂದರ ಪ್ರಚಾರ ರಾಯಭಾರಿಯಾಗಿರುವ ಅಶ್ವಿನ್‌ ತಮ್ಮ ಹೊಸ  ಬ್ರ್ಯಾಂಡ್ ಶೂ ಕುರಿತು ವಿಡಿಯೋವನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದರು. 'ಈ ಶೂ ಹಾಕಿಕೊಂಡರೆ ಚುರುಕಾಗಿ ಓಡಬಹುದು' ಎಂದು ಟ್ವೀಟ್‌ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಹರ್ಷಲ್ ಗಿಬ್ಸ್, ‘ಇನ್ನು ಮುಂದಾದರೂ ನೀವು ಅಂಗಳದಲ್ಲಿ ಕ್ಷೇತ್ರರಕ್ಷಣೆ ಮಾಡುವಾಗ ಮೊದಲಿಗಿಂತಲೂ ತುಸು ವೇಗವಾಗಿ ಓಡಬಹುದೇನೊ ಅಲ್ಲವೇ ಅಶ್ವಿನ್‌’ ಎಂದು ವ್ಯಂಗ್ಯ ಮಾಡಿದ್ದರು. ಗಿಬ್ಸ್ ಅವರ ಈ  ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಅಶ್ವಿನ್, 'ಹೌದು...ನಿಮ್ಮಷ್ಟು ವೇಗವಾಗಿ ಖಂಡಿತವಾಗಿಯೂ ಓಡಲಾಗುವುದಿಲ್ಲ. ಆ ಅದೃಷ್ಟ ನನಗಿಲ್ಲ. ಅದರೆ ಫಿಕ್ಸಿಂಗ್‌ ನಿಂದ ಹಣ ಗಳಿಸಿ ಬದುಕು ಸಾಗಿಸುವ ದುರ್ಗತಿ ಖಂಡಿತವಾಗಿಯೂ  ಬಂದಿಲ್ಲ. ನಾನು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಬದುಕುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಗಿಬ್ಸ್ ಒಂದು ತಮಾಷೆಯನ್ನು ತಮಾಷೆಯಾಗಿ ಸ್ವೀಕರಿಸಲಾಗಲಿಲ್ಲವೇ  ಎಂದು ಪ್ರತಿಕ್ರಿಯೆ ನೀಡಿದ್ದರು, ಇದ್ದಕೆ ಉತ್ತರಿಸಿದ ಅಶ್ವಿನ್ ನಾನು ಮಾಡಿದ್ದೂ ಕೂಡ ತಮಾಷೆಯೇ..ಆದರೆ ಜನ ಅದನ್ನು ಹೇಗೆ  ಸ್ವೀಕರಿಸುತ್ತಾರೆಯೇ ಅದು ಹಾಗೆ ಕಾಣುತ್ತದೆ. ನೀವು ಇದನ್ನು ತಪ್ಪಾಗಿ ಗ್ರಹಿಸಿದಿರಿ ಅನಿಸುತ್ತದೆ. ಇದನ್ನು ಇಲ್ಲಿಯೇ ಬಿಟ್ಟುಬಿಡಿ. ಮುಂದೆ ಎಂದಾದರೂ ಭೇಟಿಯಾದಾಗ ಜೊತೆಗೆ ಕುಳಿತು ಊಟ ಮಾಡೋಣಾ’ ಎಂದು ಟ್ವೀಟ್  ಮಾಡಿದ್ದಾರೆ.
2001ರಲ್ಲಿ ನಡೆದಿದ್ದ ಮ್ಯಾಚ್‌ ಫಿಕ್ಸಿಂಗ್‌ ಹಗರಣದಲ್ಲಿ ಗಿಬ್ಸ್‌ ಭಾಗಿಯಾಗಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಅವರನ್ನು ಅಮಾನತು ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT