ಆಂಡ್ರೆ ಕ್ರಾಗ್ 
ಕ್ರಿಕೆಟ್

ನಿರ್ಲಕ್ಷ್ಯಕ್ಕೊಳಗಾದ ಆಫ್ರಿಕಾ ತಂಡದ ಬಸ್ ಚಾಲಕನಿಗೆ ನೆರವಾದ ಭಾರತೀಯ ಕ್ರಿಕೆಟಿಗರು!

ನಿರ್ಲಕ್ಷ್ಯಕ್ಕೊಳಗಾದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಬಸ್ ಚಾಲಕನಿಗೆ ಟೀಂ ಇಂಡಿಯಾ ಆಟಗಾರರು ನೆರವಾದ ಘಟನೆ ನಡೆದಿದೆ...

ಸೆಂಚೂರಿಯನ್: ನಿರ್ಲಕ್ಷ್ಯಕ್ಕೊಳಗಾದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಬಸ್ ಚಾಲಕನಿಗೆ ಟೀಂ ಇಂಡಿಯಾ ಆಟಗಾರರು ನೆರವಾದ ಘಟನೆ ನಡೆದಿದೆ. 
ಟೀಂ ಇಂಡಿಯಾದ ಆಟಗಾರರ ಈ ಕೆಲಸ ಬಗ್ಗೆ  ಬಸ್ ಚಾಲಕ ಆಂಡ್ರೆ ಕ್ರಾಗ್ ಸಂತಸ ವ್ಯಕ್ತಪಡಿಸಿದ್ದು ಭಾರತೀಯ ಆಟಗಾರರ ಹೃದಯ ಶ್ರೀಮಂತಿಕೆಯನ್ನು ಕೊಂಡಾಡಿದ್ದಾನೆ. 
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರನ್ನು ಹೋಟೆಲ್ ನಿಂದ ಕ್ರೀಡಾಂಗಣಕ್ಕೆ ಕ್ರೀಡಾಂಗಣದಿಂದ ಹೋಟೆಲ್ ಗೆ ಕರೆದೊಯ್ಯುವ ಕೆಲಸವನ್ನು ಆಂಡ್ರೆ ಕ್ರಾಗ್ ನಿರ್ವಹಿಸುತ್ತಿದ್ದಾರೆ. 
ಆಂಡ್ರೆ ಕ್ರಾಗ್ ಆಫ್ರಿಕಾದವರಾದರೂ ಇವರಿಗೆ ತಮ್ಮ ತಂಡ ಗೆಲ್ಲುವುದು ಎಳ್ಳಷ್ಟೂ ಇಷ್ಟವಿರಲಿಲ್ಲವಂತೆ. ಟೀಂ ಇಂಡಿಯಾ ಗೆಲ್ಲಲಿ ಎಂದಷ್ಟೇ ಬಯಸುತ್ತಿದ್ದರು. ಇದಕ್ಕೆ ಕಾರಣ ಭಾರತೀಯ ಕ್ರಿಕೆಟಿಗರು ತೋರಿದ ಪ್ರೀತಿ, ಔದಾರ್ಯ. 
ಸಾಮಾನ್ಯ ಬಸ್ ಚಾಲಕನನ್ನು ಭಾರತ ಕ್ರಿಕೆಟಿಗರು ಆತ್ಮೀಯತೆಯಿಂದ ಕಂಡಿದ್ದಾರೆ. ತಮ್ಮ ತಂಡದ ಚಾಲಕ ರೋನಿ ಮೊಡ್ಲಿ ಜತೆಗೆ ಆಂಡ್ರೆ ಕ್ರಾಗ್ ಗೂ ಕುಡಿಯಲು ನೀರು, ಕಾಫಿ ವ್ಯವಸ್ಥೆ ಮಾಡಿದ್ದಾರಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT