ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಮಿಥಾಲಿ ರಾಜ್ 
ಕ್ರಿಕೆಟ್

ಪಂದ್ಯ ಗೆಲ್ಲಿಸಿಕೊಟ್ಟ ಮಿಥಾಲಿ ರಾಜ್ ಗೆ ಸಿಕ್ಕ ಬಹುಮಾನವೆಷ್ಟು ಗೊತ್ತಾ?

ತಮ್ಮ ಅದ್ಬುತ ಇನ್ನಿಂಗ್ಸ್ ಗೆ ಪ್ರತಿಯಾಗಿ ಮಿಥಾಲಿ ಪಂದ್ಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೂ ಭಾಜನರಾದರು. ಆದರೆ ಅವರಿಗೆ ಸಿಕ್ಕ ಬಹುಮಾನ ಮಾತ್ರ ಇಡೀ ಮಹಿಳಾ ಕ್ರಿಕೆಟ್ ನ ಅಭಿವೃದ್ಧಿಯನ್ನು ಅಣಕಿಸುವಂತಿದೆ.

ಕೌಲಾಲಂಪುರ: ಭಾನುವಾರ ನಡೆದ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಭರ್ಜರಿ 97 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ತಮ್ಮ ಅದ್ಬುತ ಇನ್ನಿಂಗ್ಸ್ ಗೆ ಪ್ರತಿಯಾಗಿ ಮಿಥಾಲಿ ಪಂದ್ಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೂ ಭಾಜನರಾದರು. ಆದರೆ ಅವರಿಗೆ ಸಿಕ್ಕ ಬಹುಮಾನ ಮಾತ್ರ ಇಡೀ ಮಹಿಳಾ ಕ್ರಿಕೆಟ್ ನ ಅಭಿವೃದ್ಧಿಯನ್ನು ಅಣಕಿಸುವಂತಿದೆ.
ಹೌದು.. ನಿನ್ನೆ ಕೌಲಾಲಂಪುರದಲ್ಲಿ ನಡೆದ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅಜೇಯ 97 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಭಾರತ ತಂಡ ನೀಡಿದ 170 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಮಲೇಷ್ಯಾ ತಂಡ 13.4 ಓವರ್ ನಲ್ಲಿ ಕೇವಲ 27 ರನ್ ಗಳಿಸಿ ಆಲ್ ಔಟ್ ಆಯಿತು. ಆ ಮೂಲಕ ಭಾರತ ತಂಡ ಭರ್ಜರಿ 142 ರನ್ ಗಳ ಜಯ ಸಾಧಿಸಿತು.
ಈ ಪಂದ್ಯದಲ್ಲಿ ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಿಥಾಲಿ ರಾಜ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೂ, ಅವರಿಗೆ ಸಿಕ್ಕ ನಗದು ಬಹುಮಾನ ಮಾತ್ರ ಎಲ್ಲ ಹುಬ್ಬೇರುವಂತೆ ಮಾಡಿದೆ. ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಶ್ರೇಷ್ಠ ಆಟಗಾರರಿಗೆ ನಗದು ಬಹುಮಾನ ನೀಡಿ ಗೌರವಿಸುವುದು ವಾಡಿಕೆ. ಆದರೆ ನಿನ್ನೆ ಮಿಥಾಲಿ ರಾಜ್ ಗೆ ನೀಡಿದ ಬಹುಮಾನವನ್ನು ನೋಡಿದರೆ, ನಗದು ಬಹುಮಾನ ನೀಡದೇ ಕೇವಲ ಟ್ರೋಫಿ ನೀಡದರೆ ಸಾಕು.. ಎಂಬ ಭಾವನೆ ಮೂಡುತ್ತದೆ.
ಪುರುಷ ಕ್ರಿಕೆಟಿಗರಿಗೆ ಪಂದ್ಯ ಶ್ರೇಷ್ಠ ಆಟಗಾರರಿಗೆ ಕನಿಷ್ಠ 1 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಆದರೆ ನಿನ್ನೆ ಮಿಥಾಲಿ ರಾಜ್ ಗೆ ಕೇವಲ 16 ಸಾವಿರ ರೂ (250 ಡಾಲರ್)ಗಳನ್ನು ನೀಡಲಾಗಿದೆ. ಮಿಥಾಲಿ ರಾಜ್ ಕ್ರಿಕೆಟ್ ರಂಗ ಹಿರಿಯ ಆಟಗಾರ್ತಿಯಲ್ಲಿ ಒಬ್ಬರು. ಅವರ ಅನುಭವಕ್ಕಾದರೂ ಆಯೋಜಕರು ಗೌರವ ನೀಡಿಲ್ಲ. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಹಿಳಾ ಕ್ರಿಕೆಟ್ ಕುರಿತು ತಾರತಮ್ಯವೇಕೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟು ಕನಿಷ್ಠ ಪ್ರಮಾಣದ ಬಹುಮಾನ ನೀಡುವ ಬದಲು ಟ್ಱೋಫಿ ನೀಡಿದ್ದರೆ ಸಾಕಿತ್ತು. ಕನಿಷ್ಠ ಪಕ್ಷ ಆಟಗಾರ್ತಿಯರ ಆತ್ಮಬಲ ಹೆಚ್ಚಾಗುತ್ತಿತ್ತು. ಅಂತೆಯೇ ಕೇವಲ ನೆಪಮಾತ್ರಕ್ಕೆ ಮಿಥಾಲಿ ರಾಜ್ ಗೆ ನಗದುಬಹುಮಾನ ನೀಡದಿರೇ ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಮಹಿಳಾ ಕ್ರಿಕೆಟ್ ಉತ್ತಂಗದಲ್ಲಿರುವ ಈ ಹೊತ್ತಿನಲ್ಲೂ ಆಯೋಜಕ ಇಂತಹ ಯಡವಟ್ಟುಗಳು ಮಹಿಳಾ ಕ್ರಿಕೆಟ್ ಅಭಿವೃದ್ಧಿ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT