ಯುವರಾಜ್ ಸಿಂಗ್ 
ಕ್ರಿಕೆಟ್

ಐಪಿಎಲ್: ಯುವಿಗೆ ನಿರ್ಗಮನದ ಹಾದಿ ತೋರಿಸಿದ ಕಿಂಗ್ಸ್ ಇಲೆವನ್

ಸ್ಥಳೀಯ ಆಟಗಾರ ಹಾಗೂ 2011ರ ಏಕದಿನ ವಿಶ್ವಕಪ್‌ ಮತ್ತು 2007ರ ಟಿ20 ವಿಶ್ವಕಪ್‌ ಹೀರೋ ಯುವರಾಜ್‌ ಸಿಂಗ್ ಸೇರಿದಂತೆ ಎಂಟು...

ನವದೆಹಲಿ: ಸ್ಥಳೀಯ ಆಟಗಾರ ಹಾಗೂ 2011ರ ಏಕದಿನ ವಿಶ್ವಕಪ್‌ ಮತ್ತು 2007ರ ಟಿ20 ವಿಶ್ವಕಪ್‌ ಹೀರೋ ಯುವರಾಜ್‌ ಸಿಂಗ್ ಸೇರಿದಂತೆ ಎಂಟು ಆಟಗಾರರಿಗೆ ಕಿಂಗ್ಸ್ ಇಲೆವನ್ ಪಂಜಾಬ್ ನಿರ್ಗಮನದ ಹಾದಿ ತೋರಿಸಿದೆ.
ಮುಂದಿನ ತಿಂಗಳು 2019ನೇ ಸಾಲಿನ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 12ನೇ ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಯಲಿದ್ದು, ಕಿಂಗ್ಸ್ ಇಲೆವನ್ ತಂಡ, ಸ್ಫೋಟಕ ಬ್ಯಾಟ್ಸ್ ಮನ್ ಎಂದೇ ಖ್ಯಾತಿ ಪಡೆದಿದ್ದ ಯುವರಾಜ್ ಸಿಂಗ್, ಆಸ್ಟ್ರೇಲಿಯಾ ಆಟಗಾರ ಆರೋನ್ ಪಿಂಚ್ ಸೇರಿದಂತೆ ಎಂಟು ಜನರಿಗೆ ಕೊಕ್ ನೀಡಿ, 9 ಪ್ರಮುಖ ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ.
ನಾಯಕ ಆರ್ ಅಶ್ವಿನ್ ಹಾಗೂ ಆರಂಭಿಕ ಆಟಗಾರ ಕ್ರಿಸ್ ಗೇಯ್ಲ್ ಸೇರಿದಂತೆ 9 ಪ್ರಮುಖ ಆಟಗಾರರನ್ನು ನಾವು ಉಳಿಸಿಕೊಂಡಿದ್ದೇವೆ. ತಂಡದ ಸಮತೋಲನಕ್ಕಾಗಿ ಆಟಗಾರರನ್ನು ಉಳಿಸಿಕೊಳ್ಳುವ ಸಂದರ್ಭದಲ್ಲಿ ಹಲವು ಅಂಶಗಳನ್ನು ಪರಿಗಣಿಸಲಾಗಿದೆ ಎಂದು ಕಿಂಗ್ ಇಲೆವನ್ ತಂಡದ ನೂತನ ಕೋಚ್ ಮೈಕ್ ಹೆಸ್ಸೊನ್ ಅವರು ಹೇಳಿದ್ದಾರೆ.
2018 ಐಪಿಎಲ್‌ ಹರಾಜಿನಲ್ಲಿ ಹಲವು ನಿರೀಕ್ಷೆಗಳೊಂದಿಗೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಫ್ರಾಂಚೈಸಿ ಯುವಿಯನ್ನು ಖರೀದಿಸಿತ್ತು. ಆದರೆ ಯುವರಾಜ್ ಸಿಂಗ್ ಅವರು, ಸರಾಸರಿ 65 ರನ್ ಗಳಿಸುವ ಮೂಲಕ ಕಳಪೆ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಅವರನ್ನು ಕೈಬಿಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT