ಕ್ರಿಕೆಟ್

ವೆಸ್ಟ್ ಇಂಡೀಸ್ ವಿರುದ್ಧ ತಂಡ ಆಯ್ಕೆ ಬಗ್ಗೆ ಕರುಣ್ ನಾಯರ್ ಗೆ ವಿವರಿಸಿದ್ದೇನೆ: ಎಂ.ಎಸ್.ಕೆ ಪ್ರಸಾದ್

Nagaraja AB

ನವದೆಹಲಿ:ಸ್ವದೇಶದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಕರಣ್ ನಾಯರ್ ಅವರನ್ನು ಹೊರಗಿಟ್ಟಿರುವ ಬಗ್ಗೆ  ಅವರೇ  ಇದಕ್ಕೆ ಕಾರಣ ವಿವರಿಸಿದ್ದಾರೆ ಎಂದು ಆಯ್ಕೆದಾರರ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಇಂದು ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟೀ ಇಂಡಿಯಾ ಆಯ್ಕೆ ನಂತರ ತಾವೇ  ವೈಯಕ್ತಿಕವಾಗಿ ಕರಣ್ ಜೊತೆ  ವಿಸ್ತೃತವಾಗಿ ಮಾತನಾಡಿದ್ದು, ಮರಳಿ ತಂಡಕ್ಕೆ ಸೇರಿಸಿಕೊಳ್ಳುವ  ಬಗ್ಗೆ ಹೇಳಿದ್ದೇನೆ . ಈ ವಿಷಯಕ್ಕೆ ಸಂಬಂಧಿಸಿದಂತೆ  ಸಂವಹನ ಪ್ರಕ್ರಿಯೆಯಲ್ಲಿ ಆಯ್ಕೆದಾರರ ಸಮಿತಿ ಬಹಳ ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

ಟೆಸ್ಟ್ ಪಂದ್ಯದಲ್ಲಿ ತ್ರಿಬಲ್ ಶತಕ ಸಿಡಿಸಿರುವ ಎರಡನೇ ಆಟಗಾರನಾಗಿರುವ ಕರಣ್,  ಇಂಗ್ಲೆಂಡ್ ವಿರುದ್ಧದ ಟೆಸ್ಟ್  ಸಂದರ್ಭದಲ್ಲಿ ಕಡೆಗಣಿಸಲಾಗಿತ್ತು. ಟೆಸ್ಟ್ ಮಾದರಿಯ ಪಂದ್ಯಗಳಲ್ಲಿ ಕರಣ್ ಅವರನ್ನು ಸೇರಿಸಿಕೊಳ್ಳಲು ಆಯ್ಕೆದಾರರ ಸಮಿತಿ ಇಷ್ಟವಿಲ್ಲ ಎಂಬುದು ವ್ಯಾಪಕವಾಗಿ ಕೇಳಿಬಂದಿತ್ತು.  

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಕರಣ್ ನಾಯರ್ ,  ಆಯ್ಕೆದಾರರಾಗಲೀ ಅಥವಾ ಆಯ್ಕೆ ಸಮಿತಿಯಾಗಲೀ ತಮ್ಮನ್ನು ಸಂಪರ್ಕಿಸಿಲ್ಲ  ಎಂದು ತಿಳಿಸಿದ್ದರು. ಆದಾಗ್ಯೂ, ಏಕೆ ಇಂತಹ ನಿರ್ಧಾರ ಕೈಗೊಳ್ಳಲಾಯಿತು ಎಂಬುದನ್ನು ಕರಣ್ ಅವರೇ ಸ್ಪಷ್ಪಪಡಿಸಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ.

ರಣಜಿ ಟ್ರೋಫಿ ಹಾಗೂ ಭಾರತ ಎ ತಂಡದ ಸರಣಿಯಲ್ಲಿ ಅವರ ರನ್ ಗಳಿಕೆಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಸ್ವದೇಶದಲ್ಲಿ ನಡೆಯಲಿರುವ ಭಾರತ ಎ ಪಂದ್ಯಗಳಲ್ಲಿ ಹೆಚ್ಚಿನ ಪ್ರದರ್ಶನ ತೋರುವಂತೆ ಸೂಚನೆ ನೀಡಲಾಗಿದೆ ಎಂದು ಪ್ರಸಾದ್ ಹೇಳಿದ್ದಾರೆ.

SCROLL FOR NEXT