ನವದೆಹಲಿ: ಅಂಬಟ್ಟಿ ರಾಯುಡು ಮತ್ತು ರಿಷಬ್ ಪಂತ್ ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಕೊಡದೆ ಮೂರು ತಿಂಗಳ ಹಿಂದೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ವಿಜಯ್ ಶಂಕರ್ ಗೆ ಸ್ಥಾನ ಕೊಟ್ಟಿದ್ದಕ್ಕೆ ಟೀಕೆ ಎದುರಾಗಿದ್ದು ಇದರ ಬೆನ್ನಲ್ಲೇ ಬಿಸಿಸಿಐ ರಾಯುಡು ಮತ್ತು ಪಂತ್ ರನ್ನು ಸ್ಟಾಂಡ್ ಬೈ ಆಗಿ ಆಯ್ಕೆ ಮಾಡಲಾಗಿದೆ ಎಂದರು.
ಅಂಬಟ್ಟಿ ರಾಯುಡುಗೆ ಸ್ಥಾನ ನೀಡಿದ್ದಕ್ಕೆ ಮಾಜಿ ಆಟಗಾರ ಗೌತಮ್ ಗಂಭೀರ್ ಮತ್ತು ರಿಷಬ್ ಪಂತ್ ಗೆ ಸ್ಥಾನ ಸಿಗದಿರುವುದಕ್ಕೆ ಸುನೀಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಇಬ್ಬರನ್ನು ತಂಡ ಸ್ಯಾಂಡ್ ಬೈ ಆಗಿ ನೇಮಿಸಿಕೊಳ್ಳಲಾಗಿದೆ.