ಕ್ರಿಕೆಟ್

ಹುತಾತ್ಮ ಯೋಧರಿಗೆ ಮೌನಾಚರಣೆ ವೇಳೆ ಪ್ರೇಕ್ಷಕರಿಗೆ ಸುಮ್ಮನಿರಿ ಎಂದ ಕೊಹ್ಲಿ, ವಿಡಿಯೋ ವೈರಲ್!

Vishwanath S
ಹೈದರಾಬಾದಾ: ಪುಲ್ವಾಮಾ ಉಗ್ರ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದು ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ತೋಳಿಗೆ ಕಪ್ಪಪಟ್ಟಿ ಧರಿಸಿ ಕ್ರೀಡಾಂಗಣಕ್ಕೆ ಇಳಿಯಿತು.
ಇನ್ನು ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಸರದಿ ಸಾಲಿನಲ್ಲಿ ನಿಂತು ಹುತಾತ್ಮ ಯೋಧರಿಗೆ 2 ನಿಮಷಗಳ ಮೌನಾಚರಣೆ ಮೂಲಕ ಗೌರವ ಸಲ್ಲಿಸುವ ವೇಳೆ ಪ್ರೇಕ್ಷಕರು ಕೂಗುತ್ತಿದ್ದರು ಇದರಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಬಾಯಿಯ ಮೇಲೆ ಬೆರಳಿಟ್ಟು ಸುಮ್ಮನಿರುವಂತೆ ಸೂಚಿಸಿದರು. 
ಇತ್ತೀಚೆಗಷ್ಟೇ ಐಪಿಎಲ್ ಸಮಿತಿ ಕೂಡ ಉದ್ಘಾಟನೆಗೆ ಬ್ರೇಕ್ ಆಗಿದ್ದು ಇದರಿಂದ ಉಳಿಯುವ 15 ಕೋಟಿ ರುಪಾಯಿಯನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಲು ತೀರ್ಮಾನಿಸಿತ್ತು. 
ಇದೇ ವೇಳೆ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಜೂನ್ 16ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಮಾತುಗಳು ಕೇಳಿಬರುತ್ತಿವೆ.
SCROLL FOR NEXT