ಸಂಗ್ರಹ ಚಿತ್ರ 
ಕ್ರಿಕೆಟ್

ಶಾನ್ ಮಾರ್ಷ್ ಶತಕ ಸಿಡಿಸಿದ 4 ಪಂದ್ಯಗಳಲ್ಲಿ ಆಸಿಸ್ ಗೆ ಸೋಲು!

ಅಡಿಲೇಡ್ ಓವಲ್ ನಲ್ಲಿ ಭಾರತದ ವಿರುದ್ಧ ಇಂದು ನಡೆದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮತ್ತು ಶತಕ ವೀರ ಶಾನ್ ಮಾರ್ಷ್ ಪಾಲಿಗೆ ಮತ್ತೊಂದು ವಿಚಿತ್ರ ದಾಖಲೆ ನಿರ್ಮಾಣವಾಗಿದೆ.

ಅಡಿಲೇಡ್: ಅಡಿಲೇಡ್ ಓವಲ್ ನಲ್ಲಿ ಭಾರತದ ವಿರುದ್ಧ ಇಂದು ನಡೆದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮತ್ತು ಶತಕ ವೀರ ಶಾನ್ ಮಾರ್ಷ್ ಪಾಲಿಗೆ ಮತ್ತೊಂದು ವಿಚಿತ್ರ ದಾಖಲೆ ನಿರ್ಮಾಣವಾಗಿದೆ.
ಓವಲ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಸ್ಫೋಟಕ ಬ್ಯಾಟ್ಸಮನ್ ಶಾನ್ ಮಾರ್ಷ್ 123 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದ ಭರ್ಜರಿ ಶತಕ (131 ರನ್) ಸಿಡಿಸಿದರು.  ಆ ಮೂಲಕ ಆಸಿಸ್ ತಂಡ ಬೃಹತ್ ಗುರಿಯ ಸವಾಲು ಪೇರಿಸುವಲ್ಲಿ ಯಶಸ್ವಿಯಾಯಿತು. ಆದರೆ ದುರಾದೃಷ್ಟವೆಂದರೆ ಈ ಪಂದ್ಯದಲ್ಲಿ ಆಸಿಸ್ ತಂಡ 6 ವಿಕೆಟ್ ಗಳ ಹೀನಾಯ ಸೋಲು ಕಂಡಿತು.
ಇನ್ನು ಶಾನ್ ಮಾರ್ಷ್ ಅವರಿಗೆ ಈ ಬಾರಿಯ ಶತಕವೂ ಯಶಸ್ವಿ ಎನಿಸಲಿಲ್ಲ. ಕಾರಣ ಇಂದಿನ ಪಂದ್ಯವೂ ಸೇರಿದಂತೆ ಶಾನ್ ಮಾರ್ಷ್ ಶತಕ ಸಿಡಿಸಿದ ಕಳೆದ ನಾಲ್ಕೂ ಪಂದ್ಯಗಳಲ್ಲೂ ಆಸ್ಟ್ರೇಲಿಯಾ ತಂಡ ಸೋಲು ಕಂಡಿದೆ. ಹೌದು 
2018ರ ಜೂನ್ 16ರಂದು ಇಂಗ್ಲೆಂಡ್ ವಿರುದ್ಧ ಆರಂಭವಾದ ಈ ಸೋಲಿನ ಸರಣಿ ಭಾರತದ ವಿರುದ್ಧದ ಏಕದಿನ ಸರಣಿಯಲ್ಲೂ ಮುಂದುವರೆದಿದೆ.
2018ರ ಜೂನ್ 16ರಂದು ಕಾರ್ಡಿಫ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಶಾನ್ ಮಾರ್ಷ್ 131 ರನ್ ಗಳಿಸಿದ್ದರು. ಅಂದು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 342ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ಆಸಿಸ್ ತಂಡಕ್ಕೆ ಶಾನ್ ಮಾರ್ಷ್ ಶತಕ ಆಸರೆಯಾಗಿತ್ತಾದರೂ, ಅಂದಿನ ಪಂದ್ಯವನ್ನು ಆಸಿಸ್ ತಂಡ ಸೋತಿತು. ಬಳಿಕ ಜೂನ್ 22ರಂದು ದುರ್ಹಾಮ್ ನಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲೂ ಶಾನ್ ಮಾರ್ಶ್ ಶತಕ ಸಿಡಿಸಿದ್ದರು. ಆದರೆ ಅಂದಿನ ಪಂದ್ಯವನ್ನೂ ಆಸ್ಟ್ರೇಲಿಯಾ ತಂಡ  ವಿಕೆಟ್ ಗಳ ಅಂತರದಲ್ಲಿ ಸೋತಿತ್ತು.
ಬಳಿಕ ನವೆಂಬರ್ 12ರಂದು ಹೋಬರ್ಟ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲೂ ಶಾನ್ ಮಾರ್ಷ್ 106 ರನ್ ಗಳಿಸಿದ್ದರು. ಆದರೆ ಅಂದಿನ ಪಂದ್ಯದಲ್ಲಿ ಆಫ್ರಿಕಾ ತಂಡ 40 ರನ್ ಗಳ ಭರ್ಜರಿ  ಗೆಲುವು ಸಾಧಿಸಿತ್ತು. ಇದೀಗ ಇಂದು ನಡೆದ ಪಂದ್ಯದಲ್ಲೂ ಶಾನ್ ಮಾರ್ಷ್ ಶತಕ ಸಿಡಿಸಿದ್ದು, ಈ ಪಂದ್ಯದಲ್ಲೂ ಆಸಿಸ್ ತಂಡ ಸೋಲು ಕಂಡಿದೆ. ಆ ಮೂಲಕ ಶಾನ್ ಮಾರ್ಷ್ ರ ಮೂರಂಕಿ ಮೊತ್ತಕ್ಕೂ ಆಸಿಸ್ ತಂಡದ ಗೆಲುವಿಗೂ ಆಗಿಬರುವುದಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Modi ma*****ch**: ರಾಹುಲ್ ಗಾಂಧಿ Voter Adhikar Yatra ವೇದಿಕೆಯಲ್ಲಿ ಅಶ್ಲೀಲ ನಿಂದನೆ, BJP ಕೆಂಡಾಮಂಡಲ!

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

SCROLL FOR NEXT