ಜಹೀರ್ ಖಾನ್ ಮತ್ತು ಅಂಬಾಟಿ ರಾಯುಡು 
ಕ್ರಿಕೆಟ್

ಅಂಬಾಟಿ ರಾಯುಡು ನಿವೃತ್ತಿ, ಭಾವುಕ ನಿರ್ಧಾರವಲ್ಲ ಎಂದು ಭಾವಿಸಿದ್ದೇನೆ: ಜಹೀರ್ ಖಾನ್

ನಿವೃತ್ತಿ ಕುರಿತಂತೆ ಅಂಬಾಟಿ ರಾಯುಡು ಕೈಗೊಂಡ ನಡೆ ಭಾವುಕ ನಿರ್ಧಾರವಲ್ಲ ಎಂದು ಭಾವಿಸಿದ್ದೇನೆ ಎಂದು ಹಿರಿಯ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹೇಳಿದ್ದಾರೆ.

ಲಂಡನ್: ನಿವೃತ್ತಿ ಕುರಿತಂತೆ ಅಂಬಾಟಿ ರಾಯುಡು ಕೈಗೊಂಡ ನಡೆ ಭಾವುಕ ನಿರ್ಧಾರವಲ್ಲ ಎಂದು ಭಾವಿಸಿದ್ದೇನೆ ಎಂದು ಹಿರಿಯ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹೇಳಿದ್ದಾರೆ.
ಖ್ಯಾತ ಕ್ರಿಕೆಟ್ ಜಾಲತಾಣ ಕ್ರಿಕ್ ಬಜ್ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಹೀರ್ ಖಾನ್, ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದ ಮಾತ್ರಕ್ಕೇ ಅಂಬಾಟಿ ರಾಯುಡು ಇಂತಹ ಕಠಿಣ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಭಾವಿಸಿದ್ದೇನೆ. ಬಿಸಿಸಿಐ ಮತ್ತು ಆಯ್ಕೆ ಸಮಿತಿ ಸಾಕಷ್ಟು ಯೋಚನೆ ಮಾಡಿಯೇ ಆಟಗಾರರನ್ನು ಆಯ್ಕೆ ಮಾಡುತ್ತದೆ. ಹೀಗಾಗಿ ವಿಶ್ವಕಪ್ ತಂಡಕ್ಕೆ ಅಂಬಾಟಿ ರಾಯುಡು ಸ್ಟ್ಯಾಂಡ್ ಬೈ ಪ್ಲೇಯರ್ ಆಗಿದ್ದರೂ, ವಿಜಯ್ ಶಂಕರ್, ಕೇದಾರ್ ಜಾದವ್, ಮಯಾಂಕ್ ಅಗರ್ವಾಲ್ ಆಯ್ಕೆಯಲ್ಲಿ ನನಗೆ ಯಾವುದೇ ರೀತಿಯ  ಅಚ್ಚರಿ ಕಾಣುತ್ತಿಲ್ಲ.
ತಂಡಕ್ಕೆ ಬೇಕಾದ ಆಯ್ಕೆಯನ್ನೇ ಆಯ್ಕೆ ಸಮಿತಿ ಮಾಡಿದೆ. ಆದರೆ ಅಂಬಾಟಿ ರಾಯುಡು ಕ್ರಿಕೆಟ್ ಅನ್ನು ನಾನು ಅಲ್ಲಗಳೆಯುತ್ತಿಲ್ಲ. ಆದರೆ ಹಾಲಿ ಪರಿಸ್ಥಿತಿಯಲ್ಲಿ ಅವರಿಗಿಂತ ಈ ವಿಜಯ್ ಶಂಕರ್, ಕೇದಾರ್ ಜಾದವ್, ಮಯಾಂಕ್ ಅಗರ್ವಾಲ್ ಆಯ್ಕೆ ಸಮಿತಿಗೆ ಉತ್ತಮವಾಗಿ ಕಂಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 40ಕ್ಕೂ ಹೆಚ್ಚು ಸರಾಸರಿ ಕಡಿಮೆ ಸಾಧನೆಯೇನಲ್ಲ ಎಂದು ಜಹೀರ್ ಖಾನ್ ಅಂಬಾಟಿ ಬೆನ್ನಿಗೆ ನಿಂತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT