ಸಂಗ್ರಹ ಚಿತ್ರ 
ಕ್ರಿಕೆಟ್

ಸೆಮಿ ಫೈನಲ್ ಗೂ ಮುನ್ನವೇ ಆಸಿಸ್ ಗೆ ಭಾರಿ ಆಘಾತ, ಗಾಯಗೊಂಡ ಸ್ಫೋಟಕ ಬ್ಯಾಟ್ಸ್ ಮನ್ ಟೂರ್ನಿಯಿಂದ ಔಟ್!

ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಸೆಮಿ ಫೈನಲ್ ಕದನಕ್ಕೆ ಸಿದ್ಧವಾಗಿರುವ ಪ್ರಬಲ ಆಸ್ಚ್ರೇಲಿಯಾ ತಂಡಕ್ಕೆ ಸೆಮೀಸ್ ಕದನಕ್ಕೂ ಮೊದಲೇ ಭಾರಿ ಆಘಾತ ಎದುರಾಗಿದ್ದು, ತಂಡದ ಪ್ರಮುಖ ಸ್ಫೋಟಕ ಬ್ಯಾಟ್ಸ್ ಮನ್ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಲಂಡನ್​: ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಸೆಮಿ ಫೈನಲ್ ಕದನಕ್ಕೆ ಸಿದ್ಧವಾಗಿರುವ ಪ್ರಬಲ ಆಸ್ಚ್ರೇಲಿಯಾ ತಂಡಕ್ಕೆ ಸೆಮೀಸ್ ಕದನಕ್ಕೂ ಮೊದಲೇ ಭಾರಿ ಆಘಾತ ಎದುರಾಗಿದ್ದು, ತಂಡದ ಪ್ರಮುಖ ಸ್ಫೋಟಕ ಬ್ಯಾಟ್ಸ್ ಮನ್ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಹೌದು.. ಆಸ್ಟ್ರೇಲಿಯಾ ತಂಡದ ಅನುಭವಿ ಎಡಗೈ ಬ್ಯಾಟ್ಸ್ ಮನ್ ಶಾನ್​ ಮಾರ್ಶ್​ ಮುಂಗೈ ಮೂಳೆ ಮುರಿತಕ್ಕೊಳಗಾಗಿದ್ದು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಈಗಾಗಲೆ ವಿಶ್ವಕಪ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಆಸ್ಟ್ರೇಲಿಯಾ ತಂಡ ಚಾಂಪಿಯನ್​ ಆಗುವ ನಿರೀಕ್ಷೆಯಲ್ಲಿದೆ. ಅದಕ್ಕೂ ಮೊದಲೇ ಶಾನ್ ಮಾರ್ಶ್ ಗಾಯಗೊಂಡಿರುವುದು ಆಸಿಸ್ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ನಾಳೆ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದ್ದು, ಇದಕ್ಕಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ತಂಡದ ಅನುಭವಿ ಬ್ಯಾಟ್ಸ್​ ಮನ್​ ಶಾನ್​ ಮಾರ್ಶ್​ ಗಾಯಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ತಂಡದ ಕೋಚ್ ಜಸ್ಟಿನ್​ ಲ್ಯಾಂಗರ್ ಅವರು, 'ಅಭ್ಯಾಸದ ವೇಳೆ​​ ಪ್ಯಾಟ್​ ಕಮ್ಮಿನ್ಸ್​ ಎಸೆದ ಚೆಂಡು ಶಾನ್ ಮಾರ್ಶ್ ಮುಂಗೈಗೆ  ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ. ಚೆಂಡು ಬಲವಾಗಿ ಕೈಗೆ ಬಡಿದಿರುವುದರಿಂದ ಮೂಳೆ ಮುರಿದಿದೆ. ಮಾರ್ಶ್ ಗೆ ಸರ್ಜರಿ ಅಗತ್ಯವಾಗಿರುವುದರಿಂದ ತಂಡದಿಂದ ಅವರನ್ನು ಕೈಬಿಡಲಾಗಿದೆ. ಇವರ ಜಾಗಕ್ಕೆ ಯುವ ವಿಕೆಟ್​ ಕೀಪರ್ ಪೀಟರ್​ ಹ್ಯಾಂಡ್ಸ್ ಕಾಂಬ್ ಗೆ ಅವಕಾಶ ನೀಡಲಾಗಿದೆ ಎಂದು ​ ತಿಳಿಸಿದ್ದಾರೆ.
ಮಾರ್ಶ್​ ಅಲ್ಲದೆ ಮತ್ತೊಬ್ಬ ಆಲ್ ರೌಂಡರ್​ ಮ್ಯಾಕ್ಸ್ ವೆಲ್​ಗೂ ಕೂಡ ಅಭ್ಯಾಸದ ವೇಳೆ ಸ್ಟಾರ್ಕ್​ ಬೌಲಿಂಗ್ ನಲ್ಲಿ ಚೆಂಡಿನಿಂದ ಬಡಿಸಿಕೊಂಡು ಗಾಯಗೊಂಡಿದ್ದರು. ಅದರೆ ಮ್ಯಾಕ್ಸ್ ವೆಲ್​ ಗಾಯ ಗಂಭೀರವಾಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT