ಕ್ರಿಕೆಟ್

ಭಾರತ-ಲಂಕಾ ಕದನ ವೇಳೆ ಆಗಸದಲ್ಲಿ ಭಾರತ ವಿರೋಧಿ ಹೇಳಿಕೆ ಬ್ಯಾನರ್, ಐಸಿಸಿಗೆ ಬಿಸಿಸಿಐ ಪತ್ರ!

Vishwanath S
ಲೀಡ್ಸ್: ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ಪಂದ್ಯದ ವೇಳೆ ಹೆಡಿಂಗ್ಲೆ ಕ್ರೀಡಾಂಗಣದ ಮೇಲೆ ವಿಮಾನವೊಂದು ಭಾರತ ವಿರೋಧಿ ಹೇಳಿಕೆಯುಳ್ಳ ಭಿತ್ತಿ ಪತ್ರವನ್ನು ಪ್ರದರ್ಶಿಸುತ್ತಾ ಹಾರಾಟ ನಡೆಸಿತ್ತು. ಈ ಕುರಿತು ಆತಂಕ ವ್ಯಕ್ತಪಡಿಸಿದ ಬಿಸಿಸಿಐ ಐಸಿಸಿಗೆ ಪತ್ರ ಬರೆದಿದೆ.
ಲೀಡ್ಸ್ ನಲ್ಲಿ ಪಂದ್ಯ ಆರಂಭವಾದ ಕೆಲ ಕ್ಷಣದಲ್ಲೇ ಜಸ್ಟಿಸ್ ಫಾರ್ ಕಾಶ್ಮೀರ್ ಎಂಬ ಭಿತ್ತಪತ್ರದೊಂದಿಗೆ ವಿಮಾನ ಮೈದಾನದ ಮೇಲೆ ಹಾರಾಟ ನಡೆಸಿತ್ತು. ಇದಾಗಿ ಅರ್ಧ ಗಂಟೆಯಲ್ಲೇ ಇಂಡಿಯಾ ಸ್ಟಾಪ್ ಗೆನೆಸಿಡಿ, ಫ್ರೀ ಕಾಶ್ಮೀರ್ ಎಂಬ ಭಿತ್ತಪತ್ರದೊಂದಿಗೆ ಮತ್ತೊಂದು ವಿಮಾನ ಹಾರಾಟ ನಡೆಸಿತ್ತು. 
ಇಂತಹ ಘಟನೆಗಳು ಸ್ವೀಕಾರಾರ್ಹವಲ್ಲ. ಸೆಮಿಫೈನಲ್ ನಲ್ಲಿ ಈ ರೀತಿಯ ಘಟನೆ ಪುನರಾವರ್ತನೆಯಾದರೆ ಅದು ನಿಜಕ್ಕೂ ದುರದೃಷ್ಟಕರ. ನಮ್ಮ ಆಟಗಾರರ ಸುರಕ್ಷತೆ ಅತ್ಯುನ್ನತವಾಗಿದೆ ಎಂದು ಕಳವಳ ವ್ಯಕ್ತಪಡಿಸಿ ಬಿಸಿಸಿಐ ಐಸಿಸಿಗೆ ಪತ್ರ ಬರೆದಿದೆ.
SCROLL FOR NEXT