ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎರಡನೇ ಬಾರಿಗೆ ಚಂದ್ರನತ್ತ ಉಪಗ್ರಹ ಉಡಾವಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಚಂದ್ರಯಾನ್-2 ನಿನ್ನೆ (ಸೋಮವಾರ) ಯಶಸ್ವಿಯಾಗಿ ತನ್ನ ಪ್ರಯಾಣ ಪ್ರಾರಂಭಿಸಿದೆ.
ಇಸ್ರೋದ ಈ ಮಹತ್ವದ ಸಾಧನೆಗೆ ದೇಶದೆಲ್ಲೆಡೆ ಸಂಭ್ರಮ ವ್ಯಕ್ತವಾಗಿದ್ದು ಎಲ್ಲರೂ ಅಭಿನಂದನಾ ಸಂದೇಶವನ್ನು ಹಾಕುತ್ತಿದ್ದಾರೆ. ಇದಕ್ಕೆ ರಾಜಕಾರಣಿಗಳು, ಚಿತ್ರತಾರೆಯರು, ಕ್ರಿಕೆಟಿಗರು ಯಾರೂ ಹೊರತಾಗಿಲ್ಲ. ಆದರೆ ಕ್ರಿಕೆಟಿಗ ಹರ್ಭಜನ್ ಸಿಂಗ್ ತಾವು ಸ್ವಲ್ಪ ಭಿನ್ನವಾಗಿ ಚಂದ್ರಯಾನವನ್ನು ಸಂಭ್ರಮಿಸಿದ್ದು ತಮ್ಮ ಸಂದೇಶದ ಮುಖೇನ ಪರೋಕ್ಷಆಗಿ ಪಾಕಿಸ್ತಾನಕ್ಕೆ ಕುಟುಕಿದ್ದಾರೆ.