ಕ್ರಿಕೆಟ್

ವೇಗಿ ಮಲಿಂಗ ವಿದಾಯದ ಪಂದ್ಯಕ್ಕೆ ಶ್ರೀಲಂಕಾ ಸಜ್ಜು

Srinivas Rao BV
ಕೊಲಂಬೊ: ಶ್ರೀಲಂಕಾ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಲಿಂಗ ಅವರು ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್ ನ ಕೊನೆಯ ಪಂದ್ಯ ಆಡಲಿದ್ದು, ಗೆಲುವಿನೊಂದಿಗೆ ವಿದಾಯ ಹೇಳಲು ಯೋಜನೆ ರೂಪಿಸಿಕೊಂಡಿದ್ದಾರೆ. 
ಶ್ರೀಲಂಕಾ ಪ್ರವಾಸದಲ್ಲಿರುವ ಬಾಂಗ್ಲಾದೇಶ ಶುಕ್ರವಾರ ಮೊದಲ ಏಕದಿನ ಪಂದ್ಯವನ್ನು ಆಡಲಿದ್ದು, ಪ್ರೇಮದಾಸ್ ಅಂಗಳ ಸಂಪೂರ್ಣ ಸಿದ್ಧವಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಮನ ಸೆಳೆದಿರುವ ಬಾಂಗ್ಲಾ ಮತ್ತೊಮ್ಮೆ ತನ್ನ ಕ್ಷಮತೆ ತೋರಲಿದೆ. 
ನಾಯಕ ಮುಷ್ತಾಫೆ ಮೊರ್ತಾಜ್ ಅವರು ಗಾಯಕ್ಕೆ ತುತ್ತಾಗಿದ್ದರಿಂದ ತಂಡವನ್ನು ಶಕೀಬ್ ಅಲ್ ಹಸನ್ ಅವರು ಮುನ್ನಡೆಸಲಿದ್ದಾರೆ. ಶ್ರೀಲಂಕಾ ನೆಲದಲ್ಲಿ ಮೊದಲ ಸರಣಿ ಗೆಲುವು ಸಾಧಿಸಲು ಬಾಂಗ್ಲಾ ಪ್ಲಾನ್ ಮಾಡಿಕೊಂಡಿದೆ.
SCROLL FOR NEXT