ವಿರಾಟ್ ಕೊಹ್ಲಿ 
ಕ್ರಿಕೆಟ್

ಲಂಡನ್‌ಗೆ ಭಾರತದ ಮಣ್ಣು ಕಳುಹಿಸಿ ವಿರಾಟ್‌ ಕೊಹ್ಲಿಗೆ ವಿಶಿಷ್ಟ ಬೆಂಬಲ

: ಭಾರತಕ್ಕೆ ಮೂರನೇ ವಿಶ್ವಕಪ್‌ ತಂದುಕೊಡುವ ತುಡಿತದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗೆ ದೆಹಲಿಯಲ್ಲಿರುವ ಅವರು ವಿದ್ಯಾಭ್ಯಾಸ ಮಾಡಿದ ...

ಲಂಡನ್‌: ಭಾರತಕ್ಕೆ ಮೂರನೇ ವಿಶ್ವಕಪ್‌ ತಂದುಕೊಡುವ ತುಡಿತದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗೆ ದೆಹಲಿಯಲ್ಲಿರುವ ಅವರು ವಿದ್ಯಾಭ್ಯಾಸ ಮಾಡಿದ ಶಾಲೆಯು ವಿಶಿಷ್ಟ ರೀತಿಯಲ್ಲಿ ಬೆಂಬಲ ಸೂಚಿಸಿದೆ. 
"ದೆಹಲಿಯ ಉತ್ತಮ್‌ ನಗರದಲ್ಲಿರುವ ವಿಶಾಲ್‌ ಭಾರತಿ ಪಬ್ಲಿಕ್‌ ಶಾಲೆಯಲ್ಲಿ ವಿರಾಟ್‌ ಕೊಹ್ಲಿ ತನ್ನ ಶಾಲಾ ದಿನಗಳನ್ನು ಸವೆಸಿದ್ದರು. ಈ ಶಾಲೆಯ ಮಣ್ಣಿನಲ್ಲಿ ಕ್ರಿಕೆಟ್‌ ಕಲಿತ ಕೊಹ್ಲಿ ಇಂದು ಇಂಗ್ಲೆಂಡ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವಷ್ಟು ಬಹು ಎತ್ತರಕ್ಕೆ ಬೆಳೆದಿದ್ದಾರೆ. ಇದನ್ನು ಸ್ಮರಿಸಿರುವ ವಿಶಾಲ್‌ ಭಾರತಿ ಶಾಲೆಯು, ಆವರಣದ ಮಣ್ಣನ್ನು ಲಂಡನ್‌ನಲ್ಲಿರುವ ವಿರಾಟ್‌ಗೆ ಕಳುಹಿಸಿದ್ದಾರೆ. ಆ ಮೂಲಕ ನಾಯಕನಿಗೆ ಅನನ್ಯ ಬೆಂಬಲ ಸೂಚಿಸಿದೆ" ಎಂದು ಸ್ಟಾರ್‌ ಸ್ಪೋರ್ಟ್ಸ್‌ ಟ್ವಿಟ್‌ ಮಾಡಿದೆ. 
ವಿಶಾಲ್‌ ಭಾರತಿ ಶಾಲೆಯಲ್ಲಿ ಶಾಲಾ ಜೀವನ ಆರಂಭಿಸಿದ್ದ ಕೊಹ್ಲಿ ನಂತರ 9ನೇ ತರಗತಿಗೆ ಸೇವಿಯರ್‌ ಕಾನ್ವೆಂಟ್‌ಗೆ ಸೇರಿಕೊಂಡಿದ್ದರು. ವಿಶಾಲ್‌ ಭಾರತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ 1998ರಲ್ಲಿ ವೆಸ್ಟ್‌ ಡೆಲ್ಲಿ ಕ್ರಿಕೆಟ್‌ ಅಕಾಡೆಮಿಗೆ ಕೊಹ್ಲಿ ಸೇರಿದ್ದರು. ಅಲ್ಲಿಂದ ಶುರುವಾದ ಅವರ ಕ್ರಿಕೆಟ್‌ ಜೀವನ ಕ್ರಿಕೆಟ್‌ ಜಗತ್ತಿನಲ್ಲೇ ಇಂದು ಶ್ರೇಷ್ಠ ಕ್ರಿಕೆಟ್‌ ಆಟಗಾರನಾಗಿ ಹೊರಹೊಮ್ಮಿದ್ದಾರೆ. 
ಪ್ರಸಕ್ತ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಜೂ.5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆರು ವಿಕೆಟ್‌ಗಳಿಂದ ಜಯಿಸಿತ್ತು. ಮುಂದಿನ ಪಂದ್ಯ ಲಂಡನ್‌ನ ದಿ ಓವಲ್‌ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಸೆಣಸಲಿದೆ. ಆಸೀಸ್‌ ಸತತ ಎರಡು ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT