ಕೀರಾನ್ ಪೊಲಾರ್ಡ್ 
ಕ್ರಿಕೆಟ್

ಅಂಪೈರ್ ತೀರ್ಪಿನಿಂದ ಸಹನೆ ಕಳೆದುಕೊಂಡು ಅನುಚಿತ ವರ್ತನೆ; ಕೀರಾನ್ ಪೊಲಾರ್ಡ್‌ಗೆ ಶೇ. 25ರಷ್ಟು ದಂಡ!

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಫೈನಲ್‌ ಪಂದ್ಯದಲ್ಲಿ ಅಂಪೈರ್‌ ತೀರ್ಪಿಗೆ ಅಸಮ್ಮತಿ ಸೂಚಿಸಿ ಮೈದಾನದಲ್ಲೇ ಅನುಚಿತವಾಗಿ ವರ್ತಿಸಿದ...

ಹೈದರಾಬಾದ್‌: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಫೈನಲ್‌ ಪಂದ್ಯದಲ್ಲಿ ಅಂಪೈರ್‌ ತೀರ್ಪಿಗೆ ಅಸಮ್ಮತಿ ಸೂಚಿಸಿ ಮೈದಾನದಲ್ಲೇ ಅನುಚಿತವಾಗಿ ವರ್ತಿಸಿದ ಮುಂಬೈ ಇಂಡಿಯನ್ಸ್‌ ತಂಡದ ಆಲ್‌ರೌಂಡರ್‌ ಕೀರಾನ್‌ ಪೊಲಾರ್ಡ್‌ ಅವರಿಗೆ ಪಂದ್ಯದ ಶುಲ್ಕದ ಶೇ. 25 ರಷ್ಟು ದಂಡ ವಿಧಿಸಲಾಗಿದೆ.
ಭಾನುವಾರ ರಾತ್ರಿ ಹೈದರಾಬಾದ್‌ನಲ್ಲಿ ನಡೆದ 12ನೇ ಆವೃತ್ತಿಯ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಕೇವಲ ಒಂದು ರನ್‌ ನಿಂದ ರೋಚಕ ಗೆಲುವು ಸಾಧಿಸಿತ್ತು. ಕೀರಾನ್‌ ಪೊಲಾರ್ಡ್‌(41*) ಮೊದಲ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ತೀರ್ಪುಗಾರ ನಿತಿನ್‌ ಮೆನನ್‌ ಅವರ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಡ್ವೇನ್‌ ಬ್ರಾವೊ ಎಸೆದ ಎಸೆತ ವೈಡ್ ಆಗಿದ್ದರಿಂದ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪೊಲಾರ್ಡ್‌ ಅಂಪೈರ್‌ ತೀರ್ಪಿಗೆ ಅಸಮಾಧಾನ ಸೂಚಿಸಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡ ವೆಸ್ಟ್‌ ಇಂಡೀಸ್ ಆಟಗಾರ ಮುಂದಿನ ಎಸೆತದಲ್ಲಿ ವೈಡ್‌ ಲೈನ್‌ ಮೇಲೆ ನಿಂತು ಬ್ಯಾಟಿಂಗ್‌ ಮಾಡಲು ಮುಂದಾದರು. ಈ ವೇಳೆ ಬ್ರಾವೊ ಎಸೆತವನ್ನು ಎದುರಿಸದೇ ಸ್ವತಃ ಅವರೇ ಬಿಟ್ಟರು.
ನಂತರ, ಮೈದಾನದಲ್ಲಿದ್ದ ಇಬ್ಬರೂ ಅಂಪೈರ್‌ಗಳಾದ ಮೆನನ್‌ ಹಾಗೂ ಇಯಾನ್‌ ಗೌಲ್ಡ್‌ ಅವರು ಸಾಮಾನ್ಯವಾಗಿ ವಿಕೆಟ್‌ ಮುಂದೆ ನಿಂತು ಬ್ಯಾಟಿಂಗ್‌ ಮಾಡುವಂತೆ ಪೊಲಾರ್ಡ್‌ಗೆ ಸೂಚಿಸಿದರು. ಈ ವೇಳೆ ತೀರ್ಪುಗಾರರು ಹಾಗೂ ವಿಂಡೀಸ್‌ ಆಟಗಾರನ ನಡುವೆ ವಾದ-ವಿವಾದ ನಡೆಯಿತು.
ಅಂತಿಮವಾಗಿ 7 ವಿಕೆಟ್‌ ಕಳೆದುಕೊಂಡ 148 ರನ್ ದಾಖಲಿಸಿದ ಮುಂಬೈ ಇಂಡಿಯನ್ಸ್, ಎರಡನೇ ಇನಿಂಗ್ಸ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಸಂಪೂರ್ಣವಾಗಿ ನಿಯಂತ್ರಿಸಿತು. ಕೇವಲ ಒಂದು ರನ್‌ನಿಂದ ಗೆದ್ದು ಮುಂಬೈ ನಾಲ್ಕನೇ ಬಾರಿ ಐಪಿಎಲ್‌ ಚಾಂಪಿಯನ್‌ ಆಯಿತು.
ಪಂದ್ಯದ ಬಳಿಕ ಪೊಲಾರ್ಡ್‌ ಮೇಲೆ ಐಪಿಎಲ್‌ ದಂಡ ವಿಧಿಸಿತು. ಆದರೆ, ನಿಗದಿತ ಯಾವ ಅಪರಾಧಕ್ಕೆ ಆಲ್‌ರೌಂಡರ್ ಗೆ ದಂಡ ವಿಧಿಸಲಾಗಿದೆ ಎಂಬುದು ಹೇಳಿಕೆಯಲ್ಲಿ ಉಲ್ಲೇಖ ಮಾಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT