ಕ್ರಿಕೆಟ್

ನಿರೂಪಕರಾಗಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆಯೇ ಎಂ ಎಸ್ ಧೋನಿ? 

Sumana Upadhyaya

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿರೂಪಕರಾಗಿ ಹೊಸ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

 
ಕ್ರಿಕೆಟ್ ಪ್ರಸಾರಕರು ಈ ಬಗ್ಗೆ ಪ್ರಸ್ತಾವನೆ ಕಳುಹಿಸಿದ್ದು ಬಿಸಿಸಿಐಯಿಂದ ಅನುಮತಿ ಸಿಗಬೇಕಿದೆ. 


ಪ್ರಸಾರಕರು ಪ್ರಸ್ತಾವನೆ ಕಳುಹಿಸಿದ್ದು ಸದ್ಯ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಬಿಸಿಸಿಐ ಅನುಮತಿ ಕೊಟ್ಟರೆ ಧೋನಿಯವರು ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದ ನಿರೂಪಕರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಡುವಂತೆ ಬಿಸಿಸಿಐ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಕ್ಟೋಬರ್ 29ರಂದು ಒಪ್ಪಿಕೊಂಡಿತ್ತು. ಭಾರತ ಮತ್ತು ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಮ್ಯಾಚ್ ಈಡನ್ ಗಾರ್ಡನ್ ನಲ್ಲಿ ಇದೇ ತಿಂಗಳ 22ರಿಂದ ಆರಂಭವಾಗಲಿದೆ. 


ಸದ್ಯ ಭಾರತ ಮತ್ತು ಬಾಂಗ್ಲಾದೇಶ ಟಿ-20 ಮೂರು ಪಂದ್ಯಗಳನ್ನು ಆಡುತ್ತಿವೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ 7 ವಿಕೆಟ್ ಗಳ ಮುನ್ನಡೆ ಸಾಧಿಸಿ 1-0 ಅಂತರದಲ್ಲಿದೆ.

SCROLL FOR NEXT