ಕ್ರಿಕೆಟ್

ವಿಜಯ ಹಜಾರೆ: ಮನೀಷ್ 142, ಕೆಎಲ್ ರಾಹುಲ್ 81, ಕರ್ನಾಟಕಕ್ಕೆ 79 ರನ್ ಜಯ

Vishwanath S

ಬೆಂಗಳೂರು: ನಾಯಕ ಮನೀಶ್ ಪಾಂಡೆ(ಅಜೇಯ 142) ಹಾಗೂ ಕೆಎಲ್ ರಾಹುಲ್(81) ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಕರ್ನಾಟಕ ವಿಜಯ ಕ್ರಿಕೆಟ್ ಟೂರ್ನಿಯಲ್ಲಿ 79 ರನ್ ಗಳಿಂದ ಚತ್ತೀಸ್‌ಗಢ ತಂಡವನ್ನು ಮಣಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 285 ರನ್ ಪೇರಿಸಿತ್ತು. 286 ರನ್ ಗಳ ಗುರಿ ಬೆನ್ನಟ್ಟಿದ ಚತ್ತೀಸ್‌ಗಢ ತಂಡ 206 ರನ್ ಗಳಿಗೆ ಆಲೌಟ್ ಆಯಿತು. 

ಕರ್ನಾಟಕದ ವೇಗಿ ಎಂ ಪ್ರಸಿಧ್ ಕೃಷ್ಣಾ 31 ರನ್ ಗಳಿಗೆ 3 ವಿಕೆಟ್ ಪಡೆದರೆ, ರೋನಿತ್ ಮೊರೆ 52 ರನ್ ಗೆ 2 ವಿಕೆಟ್ ಪಡೆದಿದ್ದಾರೆ. 

SCROLL FOR NEXT