ಕ್ರಿಕೆಟ್

ರಾಂಚಿ ಟೆಸ್ಟ್: ಮೈದಾನದಲ್ಲಿ ಪ್ರೇಕ್ಷಕರಿಗೆ ಅಚ್ಚರಿ ಕೊಡಲಿರುವ ಎಂಎಸ್ ಧೋನಿ

Vishwanath S

ನವದೆಹಲಿ: ಐದು ವರ್ಷಗಳ ಹಿಂದಿನಿಂದ ದೀರ್ಘ ಅವಧಿಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನಾಳೆ ಆರಂಭವಾಗಲಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯವನ್ನು ವೀಕ್ಷಿಸಲಿದ್ದಾರೆ ಎಂದು ವ್ಯವಸ್ಥಾಪಕ ಮಿಹಿರ್ ದಿವಾಕರ್ ಸ್ಪಷ್ಟಪಡಿಸಿದ್ದಾರೆ.

ಧೋನಿ ತವರು ರಾಂಚಿಯಲ್ಲಿ ಮೂರನೇ ಟೆಸ್ಟ್‌ ಪಂದ್ಯ ನಡೆಯುತ್ತಿರುವ ಹಿನ್ನೆೆಲೆಯಲ್ಲಿ ಎಂ.ಎಸ್ ಧೋನಿ ಅಂಗಳಕ್ಕೆ ಆಗಮಿಸಿ ಪಂದ್ಯ ವೀಕ್ಷಿಸಲಿದ್ದಾರೆ. ಅವರೊಂದಿಗೆ ನಾನು ಕೂಡ ಮುಂಬೈನಲ್ಲಿ ಇದ್ದೇನೆ. ನಾಳೆ ಬೆಳಗ್ಗೆ ವಿಮಾನದ ಮೂಲಕ ರಾಂಚಿಗೆ ತೆರಳಲಿದ್ದೇವೆ ಎಂದು ಧೋನಿ ವ್ಯವಸ್ಥಾಪಕ ಹಾಗೂ ಒಂದು ಕಾಲದಲ್ಲಿ ಸಹ ಆಟಗಾರ ದಿವಾಕರ್ ಹೇಳಿದ್ದಾರೆ.

ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ನಫೀಸ್ ಖಾನ್ ಅವರು ಧೋನಿ ಹಾಗೂ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ಆಹ್ವಾನ ನೀಡಿದ್ದಾರೆ.

SCROLL FOR NEXT