ಪದಾರ್ಪಣೆ ಪಂದ್ಯದಲ್ಲೇ ವಿಕೆಟ್ ಕಬಳಿಸಿದ ನದೀಮ್ ಸಂಭ್ರಮ 
ಕ್ರಿಕೆಟ್

3ನೇ ಟೆಸ್ಟ್: ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ ದ.ಆಫ್ರಿಕಾ, ಸಂಕಷ್ಟದಲ್ಲಿ ಡುಪ್ಲೆಸಿಸ್ ಬಳಗ

ರಾಂಚಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೇವಲ 130 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿದೆ.

ರಾಂಚಿ: ರಾಂಚಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೇವಲ 130 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿದೆ.

ರಾಂಚಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ಕೇವಲ 130 ರನ್ ಗಳಿಗೆ  ವಿಕೆಟ್ ಕಳೆದುಕೊಂಡಿದೆ. ಆಫ್ರಿಕಾ ಪರ ಹಮ್ಜಾ (62 ರನ್) ಮತ್ತು ಭವುಮಾ (32 ರನ್) ಕೊಂಚ ಪ್ರತಿರೋಧ ಒಡ್ಡಿದರಾದರೂ, ಭಾರತೀಯ ಬೌಲರ್ ಗಳ ಸಾಂಘಿಕ ಪ್ರದರ್ಶನಕ್ಕೆ ತತ್ತರಿಸಿ ವಿಕೆಟ್ ಕೈ ಚೆಲ್ಲಿದರು. ಆರಂಭದಿಂದಲೂ ನಿಗದಿತವಾಗಿ ವಿಕೆಟ್ ಕೈ ಚೆಲ್ಲುತ್ತಾ ಸಾಗಿದ್ದ ಆಫ್ರಿಕಾ ತಂಡಕ್ಕೆ ವೇಗಿಗಳಾದ ಮಹಮದ್ ಶಮಿ, ಉಮೇಶ್ ಯಾದವ್ ಆಘಾತ ನೀಡಿದರೆ, ಹಮ್ಜಾ ವಿಕೆಟ್ ಪಡೆಯುವ ಮೂಲಕ ರವೀಂದ್ರ ಆಫ್ರಿಕಾಗೆ ಮರ್ಮಾಘಾತ ನೀಡಿದರು.

ಇತ್ತೀಚಿನ ವರದಿಗಳು ಬಂದಾಗ ಆಫ್ರಿಕಾ ತಂಡ 131 ರನ್ ಗಳಿಸಿದ್ದು, 8 ವಿಕೆಟ್ ಕಳೆದುಕೊಂಡಿದೆ. ಭಾರತದ ಪರ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿರುವ ಶೆಬಾಜ್ ನದೀಮ್ ಪದಾರ್ಪಣೆ ಪಂದ್ಯದಲ್ಲೇ ಮೊದಲ ವಿಕೆಟ್ ಗಳಿಸಿದ್ದು, ಆಫ್ರಿಕಾ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದ ಬವುಮಾರನ್ನು ಪೆವಿಲಿಯನ್ ಗೆ ಅಟ್ಟಿದ್ದಾರೆ. ಇನ್ನುಳಿದಂತೆ ಮಹಮದ್ ಶಮಿ, ಉಮೇಶ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಗಳಿಸಿದ್ದಾರೆ.

16 ರನ್ ಗಳಿಸಿರುವ ಲಿಂಡೆ ಮತ್ತು ಖಾತೆ ತೆರೆಯದ ನಾರ್ಟ್ಜೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಿಳಾ ಟಿ20 ವಿಶ್ವಕಪ್: ಇಂಗ್ಲೆಂಡ್ ಮಣಿಸಿ 7ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ

ರಾಮಮಂದಿರ ಆಯ್ತು ಕೊಳ್ಳೆ ಹೊಡೆಯೋಕೆ ಮುಂದೆ ಮಥುರಾ-ಕಾಶಿನಾ: ರಾಮರಕ್ಷಾ ಆಂದೋಲನ ಆರಂಭ; BJP ವಿರುದ್ಧ ಉದ್ದವ್ ಕಿಡಿ

ದಿಲ್ಜಿತ್ ದೋಸಾಂಜ್ ನಟನೆಯ 'ಸಟ್ಲುಜ್' ಬಿಡುಗಡೆಯಾಗಿ ಕೇವಲ 2 ದಿನಕ್ಕೆ OTTಯಿಂದಲೂ ಹೊರಕ್ಕೆ, ಚಿತ್ರದಲ್ಲಿ ಅಂತದ್ದೇನಿದೆ?

ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಮೂವರು ಪುತ್ರರು ಭಾಗಿ: ಆದರೆ ಸರ್ವೋಚ್ಛ ನಾಯಕ ಮೊಜ್ತಾಬಾ ಗೈರು, ಹಲವು ಅನುಮಾನ!

ದೋಹಾದಲ್ಲಿ ಕತಾರ್ ಪ್ರಧಾನಿ-ವಿದೇಶಾಂಗ ಸಚಿವ ಜೈಶಂಕರ್ ಭೇಟಿ; ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಮಹತ್ವದ ಚರ್ಚೆ