ವಿರೂಷ್ಕಾ ದಂಪತಿ, ಫಾರೂಖ್ ಎಂಜಿನಿಯರ್ 
ಕ್ರಿಕೆಟ್

ಆಯ್ಕೆದಾರರು ಅನುಷ್ಕಾಗೆ ಟೀ ಸರ್ವ್ ಮಾಡ್ತಾರಾ? ಮಾಜಿ ಕ್ರಿಕೆಟಿಗ ಅಸಮಾಧಾನ, ಮೌನ ಮುರಿದ ಬಾಲಿವುಡ್ ಬೆಡಗಿ

ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಆಯ್ಕೆದಾರರು ಟೀ ಸರ್ವ್ ಮಾಡುವುದನ್ನು ನೋಡಿದ್ದಾಗಿ ಮಾಜಿ ವಿಕೆಟ್ ಕೀಪರ್ ಫಾರೂಖ್ ಎಂಜಿನಿಯರ್ ಹೇಳಿದ್ದಾರೆ.

ಮುಂಬೈ:  ಇಂಗ್ಲೆಂಡ್ ನಲ್ಲಿ  ಇತ್ತೀಚಿಗೆ ನಡೆದ 2019  ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಗೆ ಆಯ್ಕೆದಾರರು ಟೀ ಸರ್ವ್ ಮಾಡುವುದನ್ನು ನೋಡಿದ್ದಾಗಿ ಮಾಜಿ ವಿಕೆಟ್ ಕೀಪರ್ ಫಾರೂಖ್ ಎಂಜಿನಿಯರ್ ಹೇಳಿದ್ದಾರೆ.

ಎಂಎಸ್ ಕೆ ಪ್ರಸಾದ್ ನೇತೃತ್ವದಲ್ಲಿನ ಕ್ರಿಕೆಟ್ ಆಯ್ಕೆದಾರರ ಸಮಿತಿ ಬಗ್ಗೆ 82 ವರ್ಷದ ಫಾರೂಖ್ ಎಂಜಿನಿಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲಸಕ್ಕೆ ಯಾವುದೇ ಸೂಕ್ತ  ಅರ್ಹತೆ ಹೊಂದಿಲ್ಲದ  ಮಿಕ್ಕಿ ಮೌಸ್ ಸೆಲೆಕ್ಷನ್ ಕಮಿಟಿ ಎಂದು ಕರೆದಿದ್ದಾರೆ.

ಮಿಕ್ಕಿ ಮೌಸ್ ಸೆಲೆಕ್ಷನ್ ಕಮಿಟಿಯನ್ನು ನಾವು ಪಡೆದಿದ್ದೇವೆ. ವಿರಾಟ್ ಕೊಹ್ಲಿ ಪರಿಣಾಮಕಾರಿ ಪ್ರಭಾವ ಬೀರುವುದು ಒಳ್ಳೇಯದು ಆದರೆ, ಆಯ್ಕೆದಾರರು ಹೇಗೆ ಅರ್ಹರು? ಅವರು 10-12 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ವಿಶ್ವಕಪ್ ಪಂದ್ಯಾವಳಿಯ ವೇಳೆಯಲ್ಲಿ ಆಯ್ಕೆದಾರನೊಬ್ಬನನ್ನು ನಾನು ನೋಡಿಯೇ ಇರಲಿಲ್ಲ. ಭಾರತದ ಬ್ಲೇಜರ್ ಧರಿಸಿದ್ದರಿಂದ ಆತನನ್ನು ಕೇಳಿದಾಗ ಆಯ್ಕೆದಾರರು ಅಂತಾ ಹೇಳಿದ. ಇವೆರಲ್ಲರೂ  ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಟೀ ಸರ್ವ್ ಮಾಡುತ್ತಿದ್ದರು ಎಂದು ಎಂಜಿನಿಯರ್ ಇತ್ತೀಚಿಗೆ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಆದಾಗ್ಯೂ, ಅನುಷ್ಕಾ ಶರ್ಮಾ, ಫಾರೂಖ್ ಎಂಜಿನಿಯರ್ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ವಿಶ್ವಕಪ್ ಪಂದ್ಯಾವಳಿ ವೇಳೆ ಕೇವಲ ಒಂದು ಪಂದ್ಯಕ್ಕೆ ಮಾತ್ರ ಇಂಗ್ಲೆಂಡ್ ಗೆ ಹೋಗಿದ್ದು, ಪ್ಯಾಮಿಲಿ ಬಾಕ್ಸ್ ನಲ್ಲಿ  ಕುಳಿತು ಪಂದ್ಯ ವೀಕ್ಷಿಸಿದ್ದೇನೆ, ಆಯ್ಕೆದಾರರ ಬಾಕ್ಸ್ ನಲ್ಲಿ ಕುಳಿತಿರಲಿಲ್ಲ. ಆದರೆ, ದುರುದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ನನ್ನ ಮೇಲಿನ ಸುಳ್ಳು ಸುದ್ದಿ ಹಾಗೂ ವರದಿಗಳ  ವಿರುದ್ಧ ಯಾವಾಗಲೂ ಮೌನ ವಹಿಸುತ್ತೇನೆ. 11 ವರ್ಷಗಳಿಂದಲೂ ಗೌರವಯುತವಾಗಿ ವೃತ್ತಿ ಜೀವನ ನಡೆಸುತ್ತಿದ್ದೇನೆ. ಇಂತಹ ಮಾತುಕತೆಗಳ ಸಂದರ್ಭದಲ್ಲಿ ನನ್ನ ಹೆಸರನ್ನು ಬಳಸಿಕೊಳ್ಳಬೇಡಿ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

SCROLL FOR NEXT