ಕ್ರಿಕೆಟ್

ತ್ರಿಕೋನ ಸರಣಿ ಫೈನಲ್‍ಗೆ ರಶೀದ್ ಖಾನ್ ಅನುಮಾನ

Srinivas Rao BV

ದುಬೈ: ಬಾಂಗ್ಲಾದೇಶ ವಿರುದ್ಧದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮಂಡಿರಜ್ಜು(ಸ್ನಾಯುಸೆಳೆತ) ಗಾಯಕ್ಕೆ ಒಳಗಾಗಿರುವ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಅವರು ತ್ರಿಕೋನ ಸರಣಿಯ ಫೈನಲ್ ಹಣಾಹಣಿಗೆ ಆಡುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ. 

ಎಡಗಾಲು ಮಂಡಿರಜ್ಜು ಗಾಯಕ್ಕೆ ಒಳಗಾಗಿರುವ ರಶೀದ್ ಖಾನ್ ಸಂಪೂರ್ಣ ಗುಣಮುಖರಾಗಲು ಇನ್ನೂ ಎರಡು ಮೂರು ದಿನಗಳ ಅಗತ್ಯವಿದೆ ಎಂದು ತಂಡದ ವ್ಯವಸ್ಥಾಪಕ ನಾಜೀಮ್ ಜಾರ್ ಅಬ್ದೂರ್ ಝಾಯ್ ಹೇಳಿದ್ದಾರೆ.

"ತ್ರಿಕೋನ ಸರಣಿಯ ಫೈನಲ್‍ಗೆ ಅವರು ಲಭ್ಯರಾಗುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆಯಿಲ್ಲ. ಮುಂದೇನಾಗಲಿದೆ ಎಂದು ಕಾದು ನೋಡಬೇಕಾಗಿದೆ. ಅವರಿನ್ನೂ ಗುಣಮುಖರಾಗಲು ಎರಡರಿಂದ ಮೂರು ದಿನಗಳ ಅಗತ್ಯವಿದೆ ಎಂದು ಅವರು ಹೇಳಿರುವುದನ್ನು ಐಸಿಸಿ ವರದಿ ಮಾಡಿದೆ.

SCROLL FOR NEXT