ನಿಂತ ನೀರಿನ ಪಿಚ್'ನಲ್ಲೇ ಬ್ಯಾಟಿಂಗ್ ಅಭ್ಯಾಸ ಮಾಡಿದ ಕ್ರಿಕೆಟ್ ಮಾಂತ್ರಿಕ ಸಚಿನ್ 
ಕ್ರಿಕೆಟ್

ನಿಂತ ನೀರಿನ ಪಿಚ್'ನಲ್ಲೇ ಬ್ಯಾಟಿಂಗ್ ಅಭ್ಯಾಸ ಮಾಡಿದ ಕ್ರಿಕೆಟ್ ಮಾಂತ್ರಿಕ ಸಚಿನ್: ವಿಡಿಯೋ ವೈರಲ್

ಕ್ರಿಕೆಟ್ ಮಾಂತ್ರಿಕ, ಭಾರತದ ಕ್ರಿಕೆಟ್'ನ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ಕಿಚ್ಚು ಹೊತ್ತಿಸಿದ್ದಾರೆ. 

ಮುಂಬೈ: ಕ್ರಿಕೆಟ್ ಮಾಂತ್ರಿಕ, ಭಾರತದ ಕ್ರಿಕೆಟ್'ನ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ಕಿಚ್ಚು ಹೊತ್ತಿಸಿದ್ದಾರೆ. 

ಹ್ಯಾಷ್ ಟ್ಯಾಗ್ ಫ್ಳ್ಯಾಷ್'ಬ್ಯಾಕ್ ಫ್ರೈಡೇ ಮೂಲಕ ಜಲಾವೃತ್ತಗೊಂಡಿರುವ ಪಿಚ್'ನಲ್ಲಿ ಸಚಿನ್ ಅವರು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತೆಂಡೂಲ್ಕರ್ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. 

'ಆಟದ ಮೇಲಿನ ಒಲವು ಮತ್ತು ಉತ್ಸಾಹ ಸದಾ ಅಭ್ಯಾಸಕ್ಕೆ ಹೊಸ ಮಾರ್ಗಗಳನ್ನು ಕಂಡುಕೊಡುತ್ತದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ನೀವು ಏನು ಮಾಡುತ್ತಿರುವಿರೋ ಅದನ್ನು ಆನಂದಿಸುವುದು ಮುಖ್ಯ. #FlashbackFriday' ಎಂದು ಬರೆಯುವ ಮೂಲಕ ಸಚಿನ್ ಅವರು ವಿಡಿಯೋ ಶೇರ್ ಮಾಡಿದ್ದಾರೆ. 

ವಿಡಿಯೋದಲ್ಲಿ ಸಚಿನ್ ಅವರು, ಟೀಮ್ ಇಂಡಿಯಾದ ಅಭ್ಯಾಸದ ಜರ್ಸಿ ತೊಟ್ಟಿದ್ದು, ಸಂಪೂರ್ಣವಾಗಿ ಜಲಾವೃತ್ತಗೊಂಡಿರುವ ಪಿಚ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮತ್ತೊಂದು ತುದಿಯಲ್ಲಿ ರಬ್ಬರ್ ಚೆಂಡನ್ನು ಹಿಡಿದ ಹುಡುಗರು ಹತ್ತಿರದಿಂದ ಚೆಂಡನ್ನು ಜೋರಾಗಿ ಎಸೆಯುತ್ತಿದ್ದು, ಶಾರ್ಟ್ ಪಿಚ್ ಎಸೆತಗಳ ಕಡೆಗೆ ಗಮನ ನೀಡಿ, ತೆಂಡೂಲ್ಕರ್ ಬ್ಯಾಟ್ ಬೀಸುತ್ತಿರುವುದು ಕಂಡು ಬಂದಿದೆ. 

ವಿದೇಶದಲ್ಲಿನ ವೇಗದ ಮತ್ತು ಬೌನ್ಸಿ ಪಿಚ್ ಗಳಲ್ಲಿ ಬ್ಯಾಟಿಂಗ ಸುಲಭನ್ನಾಗಿಸಿಕೊಳ್ಳುವ ಉದ್ದೇಶದಿಂದ ತೆಂಡೂಲ್ಕರ್ ಅವರು ಇಂತಹದ್ದೊಂದು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾಗಿ ಹೇಳಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ 1994ರಲ್ಲಿ ಭಾರತ ತಂಡದ ಪರ ನ್ಯೂಜಿಲೆಂಡ್ ನಲ್ಲಿ ಇನ್ನಿಂಗ್ಸ್ ಆರಂಭಿಸಲು ಟೀಮ್ ಮ್ಯಾನೇಜ್ಮೆಂಟ್ ಎದುರು ಅಂಗಲಾಚಿದ್ದ ವಿಚಾರವನ್ನು ಇದೇ ವೇಳೆ ಸಚಿನ್ ಹಂಚಿಕೊಂಡಿದ್ದರು. 

1994ರಲ್ಲಿ ನಾನು ಭಾರತದ ತಂಡದ ಪರ ಇನ್ನಿಂಗ್ಸ್ ಆಡಲು ಆರಂಭಿಸಿದ್ದೆ. ಆ ವೇಳೆ ಎಲ್ಲಾ ತಂಡಗಳು ಮೊದಲಿಗೆ ವಿಕೆಟ್ ಕಾಯ್ದುಕೊಳ್ಳುವ ತಂತ್ರವನ್ನು ಅನುಸರಿಸುತ್ತಿದ್ದವು. ಆದರೆ, ನಾನು ಕೊಂಚ ವಿಭಿನ್ನ ಆಲೋಚನೆ ಮಾಡಿ, ಮೊದಲಿಗೆ ಬೌಲರ್ ಗಳ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದೆ. ಈ ಸಂದರ್ಭದಲ್ಲಿ ಆರಂಭಿಕನಾಗಿ ಆಡುವ ಸಲುವಾಗಿ ತಂಡದ ಮ್ಯಾನೇಜ್ಮೆಂಟ್ ಎದುರು ಅಂಗಲಾಚಿದ್ದೆ. ಇಲ್ಲಿ ವಿಫಲನಾದರೆ, ಮುಂದೆಂದೂ ಈ ರೀತಿ ಕೇಳುವುದಿಲ್ಲ ಎಂದು ಬೇಡಿಕೊಂಡಿದ್ದೆ ಎಂದು ಹೇಳಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT