ಕ್ರಿಕೆಟ್

ಧೋನಿಗಿಂತ ಉತ್ತಮ ನಾಯಕ ಯಾರು? ಧವನ್ ಉತ್ತರ ಹೀಗಿದೆ

Srinivas Rao BV

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಬಳಿಕ ಭಾರತ ತಂಡದಿಂದ ದೂರ ಉಳಿದಿರುವ ಮಹೇಂದ್ರ ಸಿಂಗ್ ಧೋನಿ ಕುರಿತು ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್‌‌ಮನ್ ಶಿಖರ್ ಧವನ್ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ವೆಸ್‌ಟ್‌ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗಳ ಭಾರತ ತಂಡದಲ್ಲಿ ಎಂ.ಎಸ್ ಧೋನಿ ಕಾಣಿಸಿಕೊಂಡಿರಲ್ಲಿ. 

ಹಾಗಾಗಿ, ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಹಾಗಾಗಿ ಧೋನಿ ಭವಿಷ್ಯ ಏನಾಗಲಿದೆ ಎಂಬುದು ಕುತೂಹಲವೆನಿಸಿದೆ. ಈ ಬಗ್ಗೆೆ ಪ್ರತಿಕ್ರಿಯೆ ನೀಡಿರುವ ಧವನ್, ಯಾವಾಗ ನಿವೃತ್ತಿ ಮಾಡಬೇಕೆಂಬುದು ಧೋನಿಗೆ ತಿಳಿದಿದೆ. ಅದು ಅವರ ನಿರ್ಧಾರವೇ ಆಗಲಿ ಎಂದು ಬಯಸಿದ್ದಾರೆ.

ಸುದೀರ್ಘ ಸಮಯದಿಂದ ಧೋನಿ ಆಡುತ್ತಿದ್ದಾರೆ. ಯಾವಾಗ ನಿವೃತ್ತಿ ಮಾಡಬೇಕೆಂಬುದು ತಿಳಿದಿದೆ. ಅದು ಧೋನಿ ನಿರ್ಧಾರವೇ ಆಗಬೇಕು. ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಭಾರತಕ್ಕಾಗಿ ಅನೇಕ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಹಾಗೆಯೇ ಸಮಯ ಬಂದಾಗ ಈ ವಿಷಯದಲ್ಲೂ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆ ನನಗಿದೆ ಎಂದರು.

SCROLL FOR NEXT