ಸಕ್ಲೈನ್ ಮುಷ್ತಾಕ್-ಸಚಿನ್ 
ಕ್ರಿಕೆಟ್

ಒಮ್ಮೆ ಸಚಿನ್‌ರನ್ನು ಸ್ಲೆಡ್ಜ್ ಮಾಡಿದ್ದೆ, ಮತ್ತೆ ಮಾಡಲು ಧೈರ್ಯವೇ ಬರಲಿಲ್ಲ: ಸಕ್ಲೈನ್ ಮುಷ್ತಾಕ್

ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಒಮ್ಮೆ ಸ್ಲೆಡ್ಜ್ ಮಾಡಿದ್ದೆ, ಈ ವೇಳೆ ಅವರು ಆಡಿದ ಆ ಒಂದು ಮಾತು ಕೇಳಿ ನಂತರ ನನಗೆ ಸ್ಲೆಡ್ಜ್ ಮಾಡಲು ಧೈರ್ಯ ಬರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಹೇಳಿದ್ದಾರೆ.

ನವದೆಹಲಿ: ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಒಮ್ಮೆ ಸ್ಲೆಡ್ಜ್ ಮಾಡಿದ್ದೆ, ಈ ವೇಳೆ ಅವರು ಆಡಿದ ಮಾತು ಕೇಳಿ ನಂತರ ನನಗೆ ಸ್ಲೆಡ್ಜ್ ಮಾಡಲು ಧೈರ್ಯ ಬರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಹೇಳಿದ್ದಾರೆ. 

ಅದು ತೊಂಬತ್ತರ ದಶಕದಲ್ಲಿ ನಡೆದ ಘಟನೆ. ಕೆನಡಾದಲ್ಲಿ ನಡೆದಿದ್ದ ಸಹರಾ ಕಪ್ ಟೂರ್ನಿ ವೇಳೆ ನಾನು ಸಚಿನ್ ರನ್ನು ಸ್ಲೆಡ್ಜ್ ಮಾಡಿದ್ದೆ. ಆಗ ಸಚಿನ್ ನನ್ನ ಬಳಿ ಬಂದು ನಾನು ಎಂದಿಗೂ ನಿನ್ನ ಜೊತೆ ಅಸಭ್ಯವಾಗಿ ವರ್ತಿಸುವುದಿಲ್ಲ. ಆದರೆ ನೀವು ಯಾಕೆ ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. 

ಆಗ ನಾನು ಅವರಿಗೆ ಏನು ಹೇಳಬೇಕೆಂದು ತಿಳಿಯದಷ್ಟು ಮುಜುಗರಕ್ಕೊಳಗಾದೆ. ಆ ನಂತರ ಎಂದಿಗೂ ನಾನು ಅವರನ್ನು ಸ್ಲೆಡ್ಜ್ ಮಾಡುವ ಗೋಜಿಗೆ ಹೋಗಲಿಲ್ಲ ಎಂದು ಹೇಳಿದ್ದಾರೆ. 

ಸಚಿನ್ ತೆಂಡೂಲ್ಕರ್ ಅವರ 47ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಿಟಿಐ ಸಕ್ಲೈನ್ ಮುಷ್ತಾಕ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿಸಿದ್ದು ಈ ವೇಳೆ ಈ ವಿಚಾರವನ್ನು ಮುಷ್ತಾಕ್ ಬಹಿರಂಗಪಡಿಸಿದ್ದಾರೆ. 

ಅವರು ನನಗೆ 'ನಾನು ನಿಮ್ಮನ್ನು ಒಬ್ಬ ವ್ಯಕ್ತಿ ಮತ್ತು ಆಟಗಾರನಾಗಿ ಹೆಚ್ಚು ಗೌರವಿಸುತ್ತೇನೆ ಎಂದು ಹೇಳಿದರು. ಈ ಮಾತಿನಿಂದ ನಾನು ತುಂಬಾ ಮುಜುಗರಕ್ಕೊಳಗಾಗಿದ್ದೆ, ಆನಂತರ ನಾನು ಅವರನ್ನು ಮತ್ತೆ ಸ್ಲೆಡ್ಜ್ ಮಾಡಲಿಲ್ಲ. ನಾನು ಅವರಿಗೆ ಏನು ಹೇಳಿದೆ ಎಂದು ಈಗ ನಾನು ನಿಮಗೆ ಹೇಳಲಾರೆ ಆದರೆ ಆಟದ ನಂತರ ನಾನು ಸಚಿನ್ ಅವರಲ್ಲಿ ಕ್ಷಮೆಯಾಚಿಸಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT