ಸಕ್ಲೈನ್ ಮುಷ್ತಾಕ್-ಸಚಿನ್ 
ಕ್ರಿಕೆಟ್

ಒಮ್ಮೆ ಸಚಿನ್‌ರನ್ನು ಸ್ಲೆಡ್ಜ್ ಮಾಡಿದ್ದೆ, ಮತ್ತೆ ಮಾಡಲು ಧೈರ್ಯವೇ ಬರಲಿಲ್ಲ: ಸಕ್ಲೈನ್ ಮುಷ್ತಾಕ್

ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಒಮ್ಮೆ ಸ್ಲೆಡ್ಜ್ ಮಾಡಿದ್ದೆ, ಈ ವೇಳೆ ಅವರು ಆಡಿದ ಆ ಒಂದು ಮಾತು ಕೇಳಿ ನಂತರ ನನಗೆ ಸ್ಲೆಡ್ಜ್ ಮಾಡಲು ಧೈರ್ಯ ಬರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಹೇಳಿದ್ದಾರೆ.

ನವದೆಹಲಿ: ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಒಮ್ಮೆ ಸ್ಲೆಡ್ಜ್ ಮಾಡಿದ್ದೆ, ಈ ವೇಳೆ ಅವರು ಆಡಿದ ಮಾತು ಕೇಳಿ ನಂತರ ನನಗೆ ಸ್ಲೆಡ್ಜ್ ಮಾಡಲು ಧೈರ್ಯ ಬರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಹೇಳಿದ್ದಾರೆ. 

ಅದು ತೊಂಬತ್ತರ ದಶಕದಲ್ಲಿ ನಡೆದ ಘಟನೆ. ಕೆನಡಾದಲ್ಲಿ ನಡೆದಿದ್ದ ಸಹರಾ ಕಪ್ ಟೂರ್ನಿ ವೇಳೆ ನಾನು ಸಚಿನ್ ರನ್ನು ಸ್ಲೆಡ್ಜ್ ಮಾಡಿದ್ದೆ. ಆಗ ಸಚಿನ್ ನನ್ನ ಬಳಿ ಬಂದು ನಾನು ಎಂದಿಗೂ ನಿನ್ನ ಜೊತೆ ಅಸಭ್ಯವಾಗಿ ವರ್ತಿಸುವುದಿಲ್ಲ. ಆದರೆ ನೀವು ಯಾಕೆ ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. 

ಆಗ ನಾನು ಅವರಿಗೆ ಏನು ಹೇಳಬೇಕೆಂದು ತಿಳಿಯದಷ್ಟು ಮುಜುಗರಕ್ಕೊಳಗಾದೆ. ಆ ನಂತರ ಎಂದಿಗೂ ನಾನು ಅವರನ್ನು ಸ್ಲೆಡ್ಜ್ ಮಾಡುವ ಗೋಜಿಗೆ ಹೋಗಲಿಲ್ಲ ಎಂದು ಹೇಳಿದ್ದಾರೆ. 

ಸಚಿನ್ ತೆಂಡೂಲ್ಕರ್ ಅವರ 47ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಿಟಿಐ ಸಕ್ಲೈನ್ ಮುಷ್ತಾಕ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿಸಿದ್ದು ಈ ವೇಳೆ ಈ ವಿಚಾರವನ್ನು ಮುಷ್ತಾಕ್ ಬಹಿರಂಗಪಡಿಸಿದ್ದಾರೆ. 

ಅವರು ನನಗೆ 'ನಾನು ನಿಮ್ಮನ್ನು ಒಬ್ಬ ವ್ಯಕ್ತಿ ಮತ್ತು ಆಟಗಾರನಾಗಿ ಹೆಚ್ಚು ಗೌರವಿಸುತ್ತೇನೆ ಎಂದು ಹೇಳಿದರು. ಈ ಮಾತಿನಿಂದ ನಾನು ತುಂಬಾ ಮುಜುಗರಕ್ಕೊಳಗಾಗಿದ್ದೆ, ಆನಂತರ ನಾನು ಅವರನ್ನು ಮತ್ತೆ ಸ್ಲೆಡ್ಜ್ ಮಾಡಲಿಲ್ಲ. ನಾನು ಅವರಿಗೆ ಏನು ಹೇಳಿದೆ ಎಂದು ಈಗ ನಾನು ನಿಮಗೆ ಹೇಳಲಾರೆ ಆದರೆ ಆಟದ ನಂತರ ನಾನು ಸಚಿನ್ ಅವರಲ್ಲಿ ಕ್ಷಮೆಯಾಚಿಸಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT