ಸುನೀಲ್ ಗವಾಸ್ಕರ್ 
ಕ್ರಿಕೆಟ್

1971ರಲ್ಲೇ ಟೀಂ ಇಂಡಿಯಾ ವಿಶ್ವದ ನಂ.1 ಟೆಸ್ಟ್‌ ತಂಡವಾಗಿತ್ತು: ದೀಪ್‌ ದಾಸ್‌ಗುಪ್ತ

ಟೀಂ ಇಂಡಿಯಾ ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್‌ಗಳ ಬಗ್ಗೆ ಮಾತನಾಡಿರುವ ಮಾಜಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್ ದೀಪ್‌ ದಾಸ್‌ಗುಪ್ತ, 1971ರಲ್ಲಿ ಭಾರತ ತಂಡ ವಿಶ್ವದ ಅನಧಿಕೃತ ನಂ.1 ಟೆಸ್ಟ್‌ ತಂಡವಾಗಿತ್ತು ಎಂದಿದ್ದಾರೆ.

ನವದೆಹಲಿ: ಟೀಂ ಇಂಡಿಯಾ ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್‌ಗಳ ಬಗ್ಗೆ ಮಾತನಾಡಿರುವ ಮಾಜಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್ ದೀಪ್‌ ದಾಸ್‌ಗುಪ್ತ, 1971ರಲ್ಲಿ ಭಾರತ ತಂಡ ವಿಶ್ವದ ಅನಧಿಕೃತ ನಂ.1 ಟೆಸ್ಟ್‌ ತಂಡವಾಗಿತ್ತು ಎಂದಿದ್ದಾರೆ.

ಅಂದು ಅಜಿತ್‌ ವಾಡೇಕರ್‌ ಸಾರಥ್ಯದಲ್ಲಿ ಟೀಮ್ ಇಂಡಿಯಾ ವಿಶ್ವದ ಬಲಿಷ್ಠ ತಂಡಗಳಾದ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ವಿರುದ್ಧ ಅವರದ್ದೇ ಅಂಗಣದಲ್ಲಿ ಟೆಸ್ಟ್‌ ಕ್ರಿಕೆಟ್‌ ವಿಕ್ರಮ ಸಾಧಿಸಿತ್ತು ಎಂದು ಹೇಳಿದ್ದಾರೆ.

1971ರ ಮಾರ್ಚ್‌ನಲ್ಲಿ 5 ಪಂದ್ಯಗಳ ಟೆಸ್ಟ್‌ ಸರಣಿ ಸಲುವಾಗಿ ಟೀಂ ಇಂಡಿಯಾ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಂಡಿತ್ತು. ಆ ಸರಣಿಯಲ್ಲಿ ಭಾರತ ಜಯ ದಾಖಲಿಸಿತ್ತಲ್ಲದೆ, ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಲಿಟ್ಲ್‌ ಮಾಸ್ಟರ್‌ ಸುನಿಲ್‌ ಗವಾಸ್ಕರ್ ಆಡಿದ 4 ಪಂದ್ಯಗಳಿಂದ 774 ರನ್‌ಗಳನ್ನು ಬಾರಿಸಿದ್ದರು. ಅದೇ ವರ್ಷ ಅಜಿತ್‌ ವಾಡೇಕರ್‌ ನೇತೃತ್ವದ ಭಾರತ ತಂಡ ಇಂಗ್ಲೆಂಡ್‌ ಪ್ರವಾಸದಲ್ಲಿ ಆಡಿದ 3 ಪಂದ್ಯಗಳ ಸರಣಿಯಲ್ಲಿ ಆತಿಥೇಯರಿಗೆ 1-0 ಅಂತರದಲ್ಲಿ ಸೋಲುಣಿಸಿತ್ತು.

ಈ ಬಗ್ಗೆ ಸ್ಪೋರ್ಟ್‌ ಟೈಗರ್‌ನ 'ಆಫ್‌ ದಿ ಫೀಲ್ಡ್‌' ಕಾರ್ಯಕ್ರಮದಲ್ಲಿ ಮಾತನಾಡಿದ ದೀಪ್‌ ದಾಸ್‌ಗುಪ್ತ, "ಟೀಂ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ನಾಯಕರ ಬಗ್ಗೆ ನಾವು ಮಾತನಾಡುವ ಸಂದರ್ಭದಲ್ಲಿ ಅಜಿತ್ ವಾಡೇಕರ್‌ ಅಂತಹ ಅನೇಕರನ್ನು ಮರೆತೇ ಬಿಡುತ್ತೇವೆ. 1971ರಲ್ಲಿ ಭಾರತ ತಂಡ ವಿದೇಶಿ ನೆಲಗಳಲ್ಲಿ ಅಮೋಘ ಸರಣಿಗಳನ್ನು ಗೆದ್ದಿತ್ತು ಎಂಬುದನ್ನು ನಾವು ಸ್ಮರಿಸುವುದೇ ಇಲ್ಲ. ಇಂಗ್ಲೆಂಡ್‌ ತಂಡವನ್ನು ಇಂಗ್ಲೆಂಡ್‌ನಲ್ಲಿ ಮತ್ತು ವೆಸ್ಟ್‌ ಇಂಡೀಸ್‌ ತಂಡವನ್ನು ವೆಸ್ಟ್‌ ಇಂಡೀಸ್‌ನಲ್ಲಿ ಮಣಿಸಿ,. ಅನಧಿಕೃತವಾಗಿ ಭಾರತ ತಂಡ ಅಂದು ವಿಶ್ವದ ನಂ.1 ಟೆಸ್ಟ್‌ ತಂಡವಾಗಿತ್ತು ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಭಾರತಕ್ಕೆ ಚೊಚ್ಚಲ ವಿಶ್ವಕಪ್‌ (1983) ಗೆದ್ದುಕೊಟ್ಟ ಕಪಿಲ್‌ ದೇವ್‌, ಸುನಿಲ್‌ ಗವಾಸ್ಕರ್ ಮತ್ತು ಮನ್ಸೂರ್‌ ಅಲಿ ಖಾನ್‌ ಪಟೌಡಿ ಅವರ ಕುರಿತಾಗಿಯೂ ದೀಪ್‌ ಮಾತನಾಡಿದ್ದಾರೆ. "ಟೀಮ್‌ ಇಂಡಿಯಾ ಇಂತಹ ದಿಗ್ಗಜ ನಾಯಕರನ್ನು ಹೊಂದಲು ಅದೃಷ್ಟ ಮಾಡಿತ್ತು. ಆಕಾಲದ ಧೀಮಂತ ಆಟಗಾರರ ಸಾಧನೆಯನ್ನು ನಾವೀಗ ಪ್ರಶಂಶಿಸುವುದೇ ಇಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಂಗಳೂರು ಕುಕ್ಕರ್‌ ಬಾಂಬ್ ಬ್ಲಾಸ್ಟ್ ಪ್ರಕರಣ: ಉಗ್ರ ಶಾರಿಕ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ NIA ಕೋರ್ಟ್; Video

AAP ಮುಖವಾಡ ಕಳಚಿದೆ; ಹಣ ಪಡೆದು ರಾಜ್ಯಸಭೆಗೆ ಜನರನ್ನು ಕಳುಹಿಸಿದರೆ ಹೀಗೆ ಆಗೋದು: ಕಾಂಗ್ರೆಸ್ ಟೀಕೆ!

ಮುಖ್ಯಮಂತ್ರಿ ಕುರ್ಚಿಗಾಗಿ 40-50 ಶಾಸಕರು ದೆಹಲಿಗೆ ತೆರಳಲು ಸಿದ್ಧತೆ: HDK ಹೊಸ ಬಾಂಬ್

ದೆಹಲಿಯ ಬೆನ್ನಲ್ಲೇ ಗುಜರಾತ್ ನಲ್ಲೂ ಆಪರೇಷನ್ AAP? ಮತ ಎಣಿಕೆಗೂ ಮುನ್ನ ಪಕ್ಷ ತೊರೆದ ಉಪಾಧ್ಯಕ್ಷ!

KD Movie 'ಸರ್ಸೆ ನಿನ್ನ ಸೆರಗ ಸರ್ಸೆ'​ ವಿವಾದ: ಕ್ಷಮೆಯಾಚಿಸಿದ ಸಂಜಯ್ ದತ್; 50 ಬಾಲಕಿಯರ ಶಿಕ್ಷಣಕ್ಕೆ ನೆರವು ಘೋಷಣೆ; Video

SCROLL FOR NEXT