ಜಾಂಟಿ ರೋಡ್ಸ್-ಸಚಿನ್ 
ಕ್ರಿಕೆಟ್

ಆರ್ಥಿಕವಾಗಿ ಐಪಿಎಲ್ ಅತಿಮುಖ್ಯ, ಐಪಿಎಲ್ ಇಲ್ಲದ ವರ್ಷವನ್ನು ಊಹಿಸುವುದು ಕಷ್ಟ: ಜಾಂಟಿ ರೋಡ್ಸ್

ಐಪಿಎಲ್ ಇಲ್ಲದ ವರ್ಷವನ್ನು ಯೋಚಿಸುವುದು ತುಂಬಾ ಕಷ್ಟ. ಇದು 2008 ರಿಂದ ಕ್ರಿಕೆಟ್ ಕ್ಯಾಲೆಂಡರ್‌ನ ಅವಿಭಾಜ್ಯ ಅಂಗವಾಗಿದೆ. ಮೊದಲಿನಿಂದಲೂ ಬಿಸಿಸಿಐ ಪ್ರತಿವರ್ಷ ಐಪಿಎಲ್ ಅನ್ನು ಹಂತ ಹಂತವಾಗಿ ನಡೆಸಲು ಪ್ರಯತ್ನಿಸುತ್ತದೆ ಎಂದರು.

ನವದೆಹಲಿ: ಟೆಸ್ಟ್ ಕ್ರಿಕೆಟ್ ಪಂದ್ಯಗಳಿಗೆ ಕಡಿಮೆ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುವುದರಿಂದ ಖಾಲಿ ಕ್ರೀಡಾಂಗಣದ ಮುಂದೆ ಆಡುವುದರಿಂದ ಟೆಸ್ಟ್ ಆಟಗಾರರ ಮೇಲೆ ಇದು ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಜಾಂಟಿ ರೋಡ್ಸ್ ಅಭಿಪ್ರಾಯಪಟ್ಟಿದ್ದಾರೆ.

COVID-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ ಪಂದ್ಯ ಇಂಗ್ಲೆಂಡ್ ವೆಸ್ಟ್ ಇಂಡೀಸ್ ತಂಡಗಳ ಮಧ್ಯೆ ಆರಂಭವಾಗಿದೆ. ಲಾಲಾರಸ ನಿಷೇಧ ಮತ್ತು ಖಾಲಿ ಕ್ರೀಡಾಂಗಣದ ಮುಂದೆ ಆಟವಾಡುವುದು ಸೇರಿದಂತೆ ಹೊಸ ಐಸಿಸಿ ನಿಯಮಗಳು ಜಾರಿಗೆ ಬಂದಿವೆ.

ಟಿ20 ಕ್ರಿಕೆಟ್‌ನಲ್ಲಿ, ಅಭಿಮಾನಿಗಳು ಮತ್ತು ವಾತಾವರಣವು ಆಟಗಾರನ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುತ್ತೇನೆ. ಅಭಿಮಾನಿಗಳ ಬೆಂಬಲದಿಂದ ಅವರು ಸ್ಫೂರ್ತಿ ಪಡೆಯುವಾಗ ಆಟಗಾರನ ಮನೋಭಾವವನ್ನು ಇದು ಅನೇಕ ಬಾರಿ ಬದಲಾಯಿಸುತ್ತದೆ ಎಂದು ರೋಡ್ಸ್ ವಿಶೇಷ ಸಂದರ್ಶನದಲ್ಲಿ ಐಎಎನ್‌ಎಸ್‌ಗೆ ತಿಳಿಸಿದರು.

ಪ್ರಥಮ ದರ್ಜೆ ಕ್ರಿಕೆಟ್ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತದೆ. ಭಾರತದಲ್ಲಿ ರಣಜಿ ಟ್ರೋಫಿಗೆ ಪ್ರೇಕ್ಷಕರೆ ಇರುವುದಿಲ್ಲ. ಆದರೆ ಟೆಸ್ಟ್ ಕ್ರಿಕೆಟ್ ವಿಷಯಕ್ಕೆ ಬಂದರೆ ಪ್ರೇಕ್ಷಕರು ಇರಲಿ ಇಲ್ಲದಿರಲಿ ಆಟಗಾರರು ಸಂಪೂರ್ಣ ಸ್ಪರ್ಧಾತ್ಮಕ ಮನೋಭಾವದಿಂದ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.

"ಐಪಿಎಲ್ ಇಲ್ಲದ ವರ್ಷವನ್ನು ಯೋಚಿಸುವುದು ತುಂಬಾ ಕಷ್ಟ. ಇದು 2008 ರಿಂದ ಕ್ರಿಕೆಟ್ ಕ್ಯಾಲೆಂಡರ್‌ನ ಅವಿಭಾಜ್ಯ ಅಂಗವಾಗಿದೆ. ಮೊದಲಿನಿಂದಲೂ ಬಿಸಿಸಿಐ ಪ್ರತಿವರ್ಷ ಐಪಿಎಲ್ ಅನ್ನು ಹಂತ ಹಂತವಾಗಿ ನಡೆಸಲು ಪ್ರಯತ್ನಿಸುತ್ತದೆ ಎಂದರು. 

"ಐಪಿಎಲ್ ಆರ್ಥಿಕವಾಗಿ ಮತ್ತು ಆಟಗಾರರ ಭವಿಷ್ಯದ ಬಗ್ಗೆಯೂ ಬಹಳ ಮುಖ್ಯವಾಗಿದೆ. ವಿಶ್ವದ ಅತ್ಯುತ್ತಮ ಆಟಗಾರರು ಅದರಲ್ಲಿ ಆಡುತ್ತಾರೆ. ಆದ್ದರಿಂದ ಒಂದು ವರ್ಷ ಕಳೆದರೆ ಅದನ್ನು ಊಹಿಸಿಕೊಳ್ಳುವುದು ಕಷ್ಟ ಎಂದರು. 

52 ಟೆಸ್ಟ್ ಮತ್ತು 245 ಏಕದಿನ ಪಂದ್ಯಗಳನ್ನು ಆಡಿದ ದಕ್ಷಿಣ ಆಫ್ರಿಕಾದ ಅನುಭವಿ, ಇತ್ತೀಚೆಗೆ ಗೊನಟ್ಸ್ ಅಪ್ಲಿಕೇಶನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗಳಿಗೆ ಹತ್ತಿರವಾಗಲು ಮತ್ತು ಅವರನ್ನು ನೇರವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT